ಅನಾಥ ಮಹಿಳೆಗೆ  ರಕ್ಷಕನಾದ ಆರಕ್ಷಕ ಅಧಿಕಾರಿ, ಸೂಪರ್ ಕಾಪ್‌ಗೆ ಮೆಚ್ಚುಗೆ!

ಅನಾಥ ಮಹಿಳೆಗೆ ರಕ್ಷಕನಾದ ಆರಕ್ಷಕ ಅಧಿಕಾರಿ, ಸೂಪರ್ ಕಾಪ್‌ಗೆ ಮೆಚ್ಚುಗೆ!

Published : Jul 12, 2023, 09:12 PM IST


ಜೈನ ಮುನಿ ಹತ್ಯೆಯನ್ನು ಖಂಡಿಸಿ ಡಿಸಿ ಕಚೇರಿಯ ಮುಂದೆ ಪ್ರತಿಭಟನೆಯ ವೇಳೆ ಅಲ್ಲಿಗೆ ಬಂದಿದ್ದ ಮಹಿಳೆ, ಕೂತಲ್ಲಿಯೇ ರಕ್ತಕಾರುತ್ತಾ ಬಿದ್ದಿದ್ದಳು. ಈ ವೇಳೆ ಅಲ್ಲಿಯೇ ಇದ್ದ ಪಿಎಸ್‌ಐ ತಿರುಮಲೇಶ್‌ ಮಾನವೀಯತೆ ಮೆರೆದು ಆಕೆಯನ್ನು ರಕ್ಷಣೆ ಮಾಡಿದ್ದಾರೆ.
 

ಶಿವಮೊಗ್ಗ (ಜು.12): ಅನಾಥ ಮಹಿಳೆಗೆ ಆರಕ್ಷಕ ಅಧಿಕಾರಿಯೊಬ್ಬರು ರಕ್ಷಕರಾದ ಘಟನೆ ನಡೆದಿದೆ. ಡಿಸಿ ಕಚೇರಿಯ ಆವರಣದಲ್ಲಿ ರಕ್ತಕಾರುತ ಬಿದ್ದಿದ್ದ ಮಹಿಳೆಯನ್ನು ಪಿಎಸ್‌ಐ ತಿರುಮಲೇಶ್‌ ರಕ್ಷಣೆ ಮಾಡಿದ್ದಾರೆ. ವಿಲವಿಲನೇ ಒದ್ದಾಡುತ್ತಾ ರಕ್ತ ಕಾರುತ್ತಿದ್ದ ಮಹಿಳೆಯನ್ನು ನೋಡಿ, ಆಕೆಯನ್ನು ರಕ್ಷಿಸಿಲು ಮಹಿಳಾ ಪೊಲೀಸರೂ ಹಿಂದೇಟು ಹಾಕಿದ್ದರು.

ವಿ ಎಚ್ ಪಿ, ಜೈನ ಸಂಘ ವತಿಯಿಂದ ಜೈನಮನಿಗಳ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಪ್ರಜ್ಞೆ ತಪ್ಪಿ ಬಿದ್ದಿದ್ದ ಮಹಿಳೆಯನ್ನು ಮೇಲೆತ್ತಲು ಮಹಿಳಾ ಪೊಲೀಸರ ಮೀನಾ ಮೇಷ ಎಣಿಸಿದ್ದರು. ಡಿಸಿ ಕಚೇರಿಯ ಮೆಟ್ಟಿಲುಗಳ ಮೇಲೆ ಬಿದ್ದು ರಕ್ತ ಕಾರುತ್ತಿದ್ದ ಮಹಿಳೆಯನ್ನು ಕಂಡು ಪ್ರತಿಭಟನಾಕಾರರು ಓಡಿ ಹೋಗಿದ್ದರು. ಯಾರೊಬ್ಬರೂ ಮಹಿಳೆ ನೆರವಿಗೆ ಬಂದಿರಲಿಲ್ಲ. 108 ಆಂಬುಲೆನ್ಸ್ ಗೆ ಕರೆ ಮಾಡಿ ಎಂದವರೇ ಹೆಚ್ಚಾಗಿದ್ದರು. ಅಸಹಾಯಕ ಮಹಿಳೆಯ ಪರಿಸ್ಥಿತಿ ಕಂಡು ದಿಢೀರನೆ ಎಂಟ್ರಿ ಕೊಟ್ಟ ಸೂಪರ್ ಕಾಪ್ ತಿರುಮಲೇಶ್‌ ಆಕೆಯನ್ನು ರಕ್ಷಿಸಿಸಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕ ಗಾಂಧಿ ಸ್ಪರ್ಧಿಸ್ತಾರಾ?

ಕೋಟೆ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ರಿಂದ ಅಸಹಾಯಕ ಮಹಿಳೆಗೆ ನೆರವಿನ ಹಸ್ತ ಚಾಚಿದ್ದಾರೆ. ಮಹಿಳೆಯನ್ನು ಎರಡು ಕೈಗಳಿಂದ ಹೊತ್ತೊಯ್ದ ತಿರುಮಲೇಶ್, ಪೊಲೀಸ್‌ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.  ಅನಾಥ ಮಹಿಳೆಯನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಪ್ರಾಣ ರಕ್ಷಣೆ ಮಾಡಿದ್ದಾರೆ. ಡಿಸಿ ಕಚೇರಿಯ ಆವರಣದಲ್ಲಿ ಈ ಮಹಿಳೆ ಭಿಕ್ಷೆ ಬೇಡುತ್ತಿದ್ದಳು. ಅನಾಥ ಮಹಿಳೆಯ ಆಸ್ಪತ್ರೆಗೆ ಪೊಲೀಸ್ ವಾಹನದಲ್ಲಿ ಕರೆದ್ಯೊಯ್ದು ದಾಖಲಿಸಿದ ಪಿಎಸ್ಐ ತಿರುಮಲೇಶ್ ಮಾನವೀಯತೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
Read more