ಹೇಗಿತ್ತು ಸೆಕೆಂಡ್ ಡೇ ಬೆಂಗಳೂರು ಕಂಬಳ..!? ಕಂಬಳದ ಕರೆಯಲ್ಲಿ ಕೋಣಗಳ ಜಬರ್ದಸ್ತ್ ಓಟ..!

ಹೇಗಿತ್ತು ಸೆಕೆಂಡ್ ಡೇ ಬೆಂಗಳೂರು ಕಂಬಳ..!? ಕಂಬಳದ ಕರೆಯಲ್ಲಿ ಕೋಣಗಳ ಜಬರ್ದಸ್ತ್ ಓಟ..!

Published : Nov 27, 2023, 08:56 AM IST

ಕಾಂತಾರ ಕೋಣ ನೋಡಲು ಬಂದ ಬೆಂಗಳೂರು ಮಂದಿ..!
ಅರಮನೆ ಮೈದಾನದಲ್ಲಿ ಸೃಷ್ಟಿಯಾಯ್ತು ಮಿನಿ ಕರಾವಳಿ..!
100ಕ್ಕೂ ಹೆಚ್ಚು ಮೆಡಲ್ ಗೆದ್ದ ಬೋಳಾರ ತ್ರಿಶಾಲ್ ಕೆ ಕೋಣ..!

ಸಿಲಿಕಾನ್ ಸಿಟಿ ಮಂದಿಗೆ ವೀಕೆಂಡ್ ಬಂತ್ ಅಂದ್ರೆ ಸಾಕು, ಮಾಲು, ರೆಸಾರ್ಟ್‌, ಹೊಟೇಲ್‌ ಅಂತ ಸುತ್ತಿದ್ದವರಿಗೆ, ಈ ಸರ್ತಿ ಅರಮನೆ ಮೈದಾನದತ್ತ ದಾಂಗುಡಿ ಇಟ್ಟಿದ್ರು. ಕಾರಣ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ(Bengaluru) ನಮ್ಮ ಕಂಬಳ ಆಯೋಜನೆ ಮಾಡಲಾಗಿತ್ತು. ವೀಕೆಂಡ್‌ನಲ್ಲಿ ಕರಾವಳಿಯ ಗಂಡು ಕಲೆ ಕಂಬಳವನ್ನು(Kambala) ಕಣ್ತುಂಬಿಕೊಳ್ಳಲು ಕಾದಿದ್ದ ಸಿಲಿಕಾನ್ ಸಿಟಿ ಜನರಿಗೆ ಸಖತ್ ಮನರಂಜನೆ ಸಿಕ್ಕಿದೆ. ಇತಿಹಾಸದಲ್ಲಿ ಪ್ರಥಮ ಬಾರಿಗೆ ಬೆಂಗಳೂರಲ್ಲಿ ನಡೆಯುತ್ತಿರುವ ಕಂಬಳದ ಮೊದಲ ದಿನದ ಝಲಕ್ ಅದ್ಭುತವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನ ತುಳುನಾಡಿನ ಕೋಣದ ಓಟದ ಸ್ಪರ್ಧೆಯನ್ನು ನೋಡಿ ಫುಲ್ ಫಿದಾ ಆಗಿದ್ದರು. ನಿನ್ನೆ ಆರಂಭವಾದ ನಮ್ಮ ಕಂಬಳ, ಇಂದು ಕ್ಲೈಮ್ಯಾಕ್ಸ್ನಲ್ಲಿ ಹಂತ ತಲುಪಿತು. ತುಳುನಾಡದ ಪೋರ್ಲು ಕಂಬಳ.. ಕರಾವಳಿ ಸೊಗಡು ರಾಜಧಾನಿಗೆ ಶಿಫ್ಟ್ ಆಗಿತ್ತು. ಕಂಬಳದ ಕಲರವಕ್ಕೆ ಅರಮನೆ ಮೈದಾನ ಸಾಕ್ಷಿಯಾಗಿತ್ತು. ಬೆಂಗಳೂರು ಕಂಬಳದಲ್ಲಿ ಅನಾವರಣಗೊಂಡಿದೆ ಕರಾವಳಿ ಸಂಸ್ಕೃತಿ. ಎಲ್ಲಿ ನೋಡಿದರೂ ಕೋಣಗಳ ಓಟ ನೋಡಲು ಬಂದವರದ್ದೇ ನೋಟ. ಭಾನುವಾರವೂ ಅರಮನೆ ಅಂಗಣದಲ್ಲಿ ಪ್ರಮುಖ ಸ್ಪರ್ಧೆಗಳ ಜತೆಗೆ ಅದನ್ನು ವೀಕ್ಷಿಸಲು ಬಂದ ಜನರ ಪ್ರೀತಿಯ ಒಡನಾಟ ಜೋರಾಗಿಯೇ ಇತ್ತು. ಈ ತುಳುನಾಡಿನ ಸಂಸ್ಕೃತಿ ಇತ್ತಿಚಿಗೆ ಕಾಂತಾರ ಸಿನಿಮಾದಿಂದಲೇ ಫುಲ್ ಫೇಮಸ್ ಆಗಿತ್ತು. ರಿಷಬ್ ಶೆಟ್ಟಿ ಮೊದಲು ಕಂಬಳದ ಮೂಲಕವೇ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ರು.

ಇದನ್ನೂ ವೀಕ್ಷಿಸಿ:  ಸಿಲಿಕಾನ್ ಸಿಟಿಯಲ್ಲಿ ಕೋಣಗಳ ಮೇಳ! ಭರ್ಜರಿಯಾಗಿದೆ ಕರಾವಳಿಯ ಕಂಬಳ..!

20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
Read more