ಮಂಗಳೂರು ಗಲಭೆ ಸಂಚು ಬಯಲು: ಸಚಿವ ಬಸವರಾಜ್ ಬೊಮ್ಮಾಯಿ ಖಡಕ್ ಮಾತು

Dec 24, 2019, 5:48 PM IST

ಬೆಂಗಳೂರು, (ಡಿ.24): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ವಿಡಿಯೋಗಳು  ಬಟಾಬಯಲಾಗಿವೆ. ಮಂಗಳೂರಿನಲ್ಲಿ ಕಿಡಿಗೇಡಿಗಳು ವ್ಯವಸ್ಥಿತವಾಗಿ ಗಲಭೆ ನಡೆಸಿರುವುದು ಸಿಸಿಟಿವಿಗಳ ವಿಡಿಯೋ ಮೂಲಕ ಗೊತ್ತಾಗುತ್ತಿದೆ.

ಇನ್ನು ದಂಧೆಕೋರರ ವಿಡಿಯೋಗಳನ್ನು ಸುವರ್ಣ ನ್ಯೂಸ್ ಬಹಿರಂಗಪಡಿಸಿದ ಬೆನ್ನಲ್ಲೇ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮೊದಲ ಪ್ರತಿಕ್ರಿಯೆ ನೀಡಿದ್ದು, ಖಡಕ್ ಎಚ್ಚರಿಕೆ ನೀಡಿದ್ದಾರೆ.

ಗಲಭೆಯ ಸಂಚಿನ ವಿಡಿಯೋಗಳನ್ನು ಬಯಲು ಮಾಡುವುದರ ಜತೆಗೆ ಪ್ರಕರಣವನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಕ್ಕೆ ಸುವರ್ಣ ನ್ಯೂಸ್ ಕಾರ್ಯಕ್ಕೆ ಬೊಮ್ಮಾಯಿ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಹಾಗಾದ್ರೆ, ಬೊಮ್ಮಾಯಿ ಏನೆಲ್ಲಾ ಹೇಳಿದ್ರು..? ವಿಡಿಯೋನಲ್ಲಿ ಅವರ ಬಾಯಿಂದಲೇ ಕೇಳಿ...