ರಾಷ್ಟ್ರಧ್ವಜ ನೇಕಾರರಿಗೆ ಇದೆಂಥಾ ದುಸ್ಥಿತಿ..? ನೇಕಾರ ಕೇಂದ್ರದಲ್ಲಿ ಹಾವು-ಚೇಳುಗಳದ್ದೇ ಸಾಮ್ರಾಜ್ಯ !

ರಾಷ್ಟ್ರಧ್ವಜ ನೇಕಾರರಿಗೆ ಇದೆಂಥಾ ದುಸ್ಥಿತಿ..? ನೇಕಾರ ಕೇಂದ್ರದಲ್ಲಿ ಹಾವು-ಚೇಳುಗಳದ್ದೇ ಸಾಮ್ರಾಜ್ಯ !

Published : Aug 14, 2023, 10:26 AM IST

ಅವರೆಲ್ಲಾ ಕಳೆದ ಹತ್ತಾರು ವರ್ಷಗಳಿಂದ ಇಡೀ ದೇಶವೇ ಹೆಮ್ಮೆ ಪಡುವಂಥ ರಾಷ್ಟ್ರಧ್ವಜದ ಬಟ್ಟೆಯನ್ನ ನೇಯುವ ಕೆಲ್ಸ ಮಾಡ್ತಿದ್ದಾರೆ. ವೇತನ ಕಡಿಮೆ ಇದ್ರೂ ಅವ್ರಲ್ಲಿರೋ ಅಭಿಮಾನದಿಂದ ರಾಷ್ಟ್ರಧ್ವಜಕ್ಕೆ ಬಟ್ಟೆ ನೇಯುತ್ತಾ ಜೀವನ ಕಳಿತಿದ್ದಾರೆ. ಇಷ್ಟಾದ್ರೂ ಯಾರೂ ಅವರ ಕಡೆ ಗಮನ ಕೊಡ್ತಿಲ್ಲ. ಸಾಲದ್ದಕ್ಕೆ ನೇಯ್ಗೆ ಕೇಂದ್ರದಲ್ಲಿ ಹಾವು ಚೇಳುಗಳ ಭರಾಟೆ ಜೋರಾಗಿದೆ. 

ರಾಷ್ಟ್ರಧ್ವಜ ಹಿಡಿದು ಅಭಿಮಾನ ಪಡ್ತಿರೋ ಮಹಿಳೆಯರು ನಮ್ಮ ದೇಶದ ಹೆಮ್ಮೆಯ ನೇಕಾರ (Nekara) ಕುಟುಂಬದವರು. ಇವರಿಗೆ ಕೈ ತುಂಬ ಸಂಬಳವೂ ಇಲ್ಲ. ಸವಲತ್ತು ಗಳೂ ಇಲ್ಲ. ಆದ್ರೂ ದೇಶಾಭಿಮಾನದಿಂದ ರಾಷ್ಟ್ರಧ್ವಜ (National Flag) ನೇಯ್ದು ತಮ್ಮ ಅಭಿಮಾನ ಮೆರೆಯುತ್ತಿದ್ದಾರೆ. ಆದ್ರೆ ಇವರಿಗೆ ಮತ್ತೊಂದು ಹಾವು-ಚೇಳುಗಳ ಕಾಟ ಜೋರಾಗಿದೆ. ಬಾಗಲಕೋಟೆ(Bagalkot) ಜಿಲ್ಲೆಯಲ್ಲಿರೋ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಪ್ರತಿನಿತ್ಯವೂ ರಾಷ್ಟ್ರಧ್ವಜದ ಬಟ್ಟೆಯನ್ನು ನೇಯುವ ಕೆಲ್ಸ ನಡೆಯುತ್ತೇ. ಅಂದಾಜು 50ಕ್ಕೂ ಅಧಿಕ ಜನರು ಇಲ್ಲಿ ನಿತ್ಯ ನೇಕಾರಿಕೆ ಮಾಡ್ತಾರೆ. ಕನಿಷ್ಟ ಕೂಲಿ ಸಹ ಇವರಿಗೆ ಸಿಕ್ತಿಲ್ಲ. ಹಲವು ಬಾರಿ ಕೇಳಿಕೊಂಡರೂ ಅನುದಾನವೂ ಹೆಚ್ಚುತ್ತಿಲ್ಲ, ಯಾರೊಬ್ಬರೂ ಸಹ ಇವರ ಗೋಳು ಕೇಳುತ್ತಿಲ್ಲ. ಇವುಗಳ ಮಧ್ಯೆಯೇ ಬಟ್ಟೆ ನೇಯೋಕೆ ಕೇಂದ್ರಕ್ಕೆ ಬಂದ್ರೆ ಈಗ ಹಾವು, ಚೇಳಿನ ಭಯ ಅತಿಯಾಗಿದೆ. ಕೇಂದ್ರದ ಸುತ್ತಲೂ ಮುಳ್ಳುಕಂಠಿಗಳಿದ್ದು, ಹಾವು ಚೇಳಿನ ಉಪಟಳ ಹೆಚ್ಚಿದೆ. ಜೀವ ಕೈಯಲ್ಲಿಡಿದು ಕೆಲಸ ಮಾಡುವಂತಾಗಿದೆ. ತುಳಸಿಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ(Khadhi Gramodyoga Khendra) ಕೂಲಿ ಕಡಿಮೆ ಇರೋದ್ರಿಂದ ದಿನದಿಂದ ದಿನಕ್ಕೆ ನೇಕಾರರ ಸಂಖ್ಯೆ ಇಳಿಮುಖವಾಗ್ತಿದೆ. ಈ ಹಿಂದೆ 200 ಜನರಿಂದ ನೇಕಾರಿಕೆ ಕೇಂದ್ರದಲ್ಲಿ ಈಗ ಕೇವಲ 50 ಜನ ಕೆಲಸ ಮಾಡ್ತಿದ್ದಾರೆ. ಮೂಲಭೂತ ಸೌಲಭ್ಯಗಳ ಕೊರತೆಯೂ ಇದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿಕೊಂಡ ನೇಕಾರರು, ಹೊಸ ಯಂತ್ರಗಳ ಜತೆ ನಮಗೆ ಪೆನ್ಷನ್ ನೀಡಿ ಅಂತಿದ್ದಾರೆ.  

ಇದನ್ನೂ ವೀಕ್ಷಿಸಿ:  ರಾಜಧಾನಿಯಲ್ಲಿ ರೌಡಿಸಂ ಹುಟ್ಟಡಗಿಸಲು ಖಾಕಿ ಸಜ್ಜು: ಪುಡಿ ರೌಡಿಗಳ ಮಟ್ಟಹಾಕುವಂತೆ ಕಮಿಷನರ್ ವಾರ್ನ್ !

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more