ಧರ್ಮದ ನಾಡು ಧರ್ಮಸ್ಥಳದಲ್ಲಿ ಧರ್ಮ ಸಂರಕ್ಷಣಾ ರಥಯಾತ್ರೆ!

ಧರ್ಮದ ನಾಡು ಧರ್ಮಸ್ಥಳದಲ್ಲಿ ಧರ್ಮ ಸಂರಕ್ಷಣಾ ರಥಯಾತ್ರೆ!

Published : Oct 29, 2023, 10:25 AM IST

ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬ ಮಾತಿದೆ. ಸದಾ ಧಾರ್ಮಿಕ ಕಾಯಕಗಳಿಂದ ಪ್ರಸಿದ್ಧಿ ಪಡೆದಿರುವ ಶ್ರೀಕ್ಷೇತ್ರ ಧರ್ಮಸ್ಥಳ ಇದೀಗ ಮತ್ತೊಂದು ಐತಿಹಾಸಿಕ ಧರ್ಮ ಸಂರಕ್ಷಣಾ ಯಾತ್ರೆಗೆ ಸಜ್ಜಾಗುತ್ತಿದೆ. 
 

ಧರ್ಮ ಸಂರಕ್ಷಣೆಯ ಪಣ ತೊಟ್ಟ ಧರ್ಮ ಸೈನಿಕರು ಮಂಜುನಾಥನ ಸನ್ನಿಧಿಗೆ ಪಾದಯಾತ್ರೆ ನಡೆಸಿ ಈ ಮಣ್ಣಿನ ಕೀರ್ತಿಯ ರಕ್ಷಣೆಗೆ ಪಣ ತೊಟ್ಟಿದ್ದಾರೆ. ರಥಯಾತ್ರೆ ಮೂಲಕ ಕ್ಷೇತ್ರದ ಧರ್ಮ ರಕ್ಷಣೆಯ ಕಹಳೆ ಸಾವಿರಾರು ಸಂಖ್ಯೆಯಲ್ಲಿ ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಸಂದೇಶ ಮೊಳಗಲಿದೆ. ಶ್ರೀ ವೀರೇಂದ್ರ ಹೆಗ್ಗಡೆಯವರು(Veerendra Heggade) ಈ ರಥಯಾತ್ರೆಯನ್ನ ಸ್ವಾಗತಿಸಲಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕೆಯ(Sri Mookambike) ಸನ್ನಿಧಿಯಿಂದ ಹೊರಟಿರುವ ಧರ್ಮ ಸಂರಕ್ಷಣಾ ರಥವೂ(Dharma Samrakshana Ratha ಇಂದು ಪೊಡವಿಗೋಡೆಯನ ಊರು ಶ್ರೀ ಕೃಷ್ಣನಗರಿ ಉಡುಪಿಯನ್ನ ತಲುಪಿದ್ದು, ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತ ಸ್ತೋಮದಿಂದ ಧರ್ಮ ಸಂರಕ್ಷಣ ರಥಕ್ಕೆ ಅಭೂತಪೂರ್ವ ಸ್ವಾಗತ ದೊರೆತಿದೆ. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಮಹಿಳಾ ಭಕ್ತಾದಿಗಳು ಆರತಿ ಎತ್ತುವ ಮೂಲಕ ಧರ್ಮ ರಥವನ್ನ ಸ್ವಾಗತಿಸಿದ್ದಾರೆ. ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಿಂದ (Manjunath Swamy Temple)ಹೊರಟು ಮಧ್ಯಾಹ್ನ 1:30ಕ್ಕೆ ಉಜಿರೆ ತಲುಪಲಿದ್ದು, ಬಳಿಕ 3 ಗಂಟೆಗೆ ಉಜಿರೆಯಿಂದ ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಪಾದಯಾತ್ರೆಯ ಮೂಲಕ ಸಂಜೆ 5 ಗಂಟೆ ಸುಮಾರಿಗೆ ಧರ್ಮಸ್ಥಳ ತಲುಪಲಿದೆ. ಈ ಧರ್ಮ ಸಂರಕ್ಷಣಾ ಪಾದಯಾತ್ರೆಯಲ್ಲಿ ನಾಡಿನ ಪ್ರಸಿದ್ಧ ಸಂತರು, ಜನಪ್ರತಿನಿಧಿಗಳು ಸೇರಿದಂತೆ ಹಲವು ಜನರು ಭಾಗಿಯಾಗಲಿದ್ದಾರೆ. ನಾಡಿನ ವಿವಿಧ ಭಾಗಗಳಿಂದ ಭಕ್ತ ಸ್ತೋಮವೇ ಧರ್ಮ ಸಂರಕ್ಷಣೆಯ ಯಾತ್ರೆಗೆ ಸಜ್ಜಾಗುತ್ತಿದ್ದು ಧರ್ಮಸ್ಥಳದಲ್ಲಿ ನಡೆಯುವ ಈ ರಥ ಯಾತ್ರೆ ಸಾಕಷ್ಟು ನಿರೀಕ್ಷೆ ಕುತೂಹಲಗಳನ್ನ ಸೃಷ್ಟಿಸಿದೆ.

ಇದನ್ನೂ ವೀಕ್ಷಿಸಿ:  Weekly-Horoscope: ಈ ರಾಶಿಯವರಿಗೆ ಪ್ರೇಮದ ವಿಚಾರದಲ್ಲಿ ಬೇಸರವಾಗಲಿದ್ದು, 12 ರಾಶಿಗಳ ಭವಿಷ್ಯ ಹೀಗಿದೆ..

23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
Read more