ಹೊಸ ರೂಪ ಬದಲಿಸಿ ದಾಳಿ ಮಾಡ್ತಿರುವ ಎಓ.1 ವೈರಸ್..! ಅಯ್ಯಪ್ಪ ಭಕ್ತರೇ ಕುರುನಾಡಿಗೆ ಕಂಟಕ ಆಗ್ತಾರಾ..?

ಹೊಸ ರೂಪ ಬದಲಿಸಿ ದಾಳಿ ಮಾಡ್ತಿರುವ ಎಓ.1 ವೈರಸ್..! ಅಯ್ಯಪ್ಪ ಭಕ್ತರೇ ಕುರುನಾಡಿಗೆ ಕಂಟಕ ಆಗ್ತಾರಾ..?

Published : Dec 18, 2023, 09:29 AM IST

ನ್ಯೂ ಇಯರ್‌ಗೆ ಹೊಸ ಗೈಡ್‌ಲೈನ್ಸ್‌  ಜಾರಿಯಾಗುತ್ತಾ ..?
ಕೊರೊನಾ ಕಡಿವಾಣಕ್ಕೆ ದೆಹಲಿ,ಕೇರಳದಲ್ಲಿ ಹೈ ಅಲರ್ಟ್‌!
ಕೇರಳದಲ್ಲಿ ಕೊರೊನಾ, ರಾಜ್ಯದಲ್ಲೂ ಭಾರೀ ಟೆನ್ಷನ್..!

ಇಷ್ಟು ದಿನ ಸೈಲೆಂಟ್ ಆಗಿದ್ದ ಕೊರೊನಾ(Corona) ಮತ್ತೆ ವೈಲೆಂಟ್ ಆಗಿದೆ. ಲಕ್ಷಾಂತರ ಮಂದಿಯ ಜೀವ ತೆಗೆದು ತಾಂಡವವಾಡಿದ್ದ ಈ ಹೆಮ್ಮಾರಿ ಇದೀಗ ತನ್ನ ರೂಪವನ್ನ ಬದಲಿಸಿಕೊಂಡು ಮತ್ತೆ ಹೈಸ್ಪೀಡ್ ಆಗಿ ಹರಡ್ತಿದೆ. ಈಗಾಗಲೇ ದೇವರ ನಾಡಿನಲ್ಲಿ ಎಓ.1 ವೈರಸ್ ಪತ್ತೆಯಾಗಿದ್ದು. ಇಡೀ ದೇಶವೇ ಹೈ ಅಲರ್ಟ್‌ ಆಗಿದೆ. ಈ ಮಧ್ಯೆ ರಾಜ್ಯಕ್ಕೂ ಆತಂಕ ಶುರುವಾಗಿದೆ. ಅಯ್ಯಪ್ಪನ ಭಕ್ತರು ಕೇರಳದ(Kerala) ಶಬರಿಮಲೆಗೆ ಹೋಗಿ ವಾಪಸ್ ಆಗ್ತಿದ್ದು, ಇದೇ ಈಗ ಎಲ್ಲರಲ್ಲೂ ಆತಂಕ ತಂದಿಟ್ಟಿರೋದು. ಈ ಕಾಣಕ್ಕಾಗಿಯೇ ಆರೋಗ್ಯ ಇಲಾಖೆ ಕೇರಳ ಅಯ್ಯಪ್ಪನ ಭಕ್ತರೇ ಮೇಲೆ ಹದ್ದಿನ ಕಣ್ಣಿಟ್ಟಿದೆ. ಇಷ್ಟುದಿನ ಇದ್ರೂ ಇಲ್ಲದಂಗಿದ್ದ ಕ್ರೂರಿ ಕೊರೊನಾ ಮತ್ತೆ ಅಬ್ಬರಿಸೋ ಸುಳುವು ಕೊಟ್ಟಿದೆ. ದೇಶದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗ್ತಿವೆ. ಸಾಂಕ್ರಾಮಿಕ ರೋಗಗಳ ನಡುವೆ ಕೋವಿಡ್ ರೂಪಾಂತರಿ ವೈರಸ್ ಭೀತಿ ಎದುರಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಏರಿಕೆಯಾಗ್ತಿದ್ದು, ಜನ ಅಕ್ಷರಶಃ ಮತ್ತೆ ಬೆಚ್ಚಿ ಬಿದ್ದಿದ್ದಾರೆ. ಕಳೆದ ತಿಂಗಳಷ್ಟೆ ಚೀನಾದಲ್ಲಿ(China) ಹೊಸ ಸೋಂಕು ಪತ್ತೆಯಾಗಿತ್ತು. ಮಕ್ಕಳನ್ನ ಬಿಟ್ಟು ಬಿಡದೇ ಕಾಡಿತ್ತು ನಿಗೂಢ ನ್ಯೂಮೇನಿಯಾ. ಈ ಸೋಂಕು ಚೀನಾದಲ್ಲಿ ಕೊರೊನಾ ಕರಾಳತೆ ಮತ್ತೆ ಸೃಷ್ಟಿಸಿತ್ತು. ಮಕ್ಕಳನ್ನೇ ಹೆಚ್ಚಾಗಿ ಬಾಧಿಸಿದ್ದ ನಿಗೂಢ ಸೋಂಕಿನಿಂದ ಚೀನಾದಲ್ಲಿ ಆಸ್ಪತ್ರೆಗಳು ತುಂಬಿ ಹೋಗಿದ್ವು. ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲದೆ ನೆಲದ ಮೇಲೆಲ್ಲಾ ಟ್ರೀಟ್ಮೆಂಟ್ ನೀಡಲಾಗಿತ್ತು. ಈ ಬೆನ್ನಲ್ಲೇ ಇದೀಗ ದೇಶದಲ್ಲಿ ಹೊಸಾ ವೈರಸ್ ಟೆನ್ಶನ್ ದಂದಿಟ್ಟಿದೆ. ಅದು ಕೂಡ ನಮ್ಮ ಪಕ್ಕದ ರಾಜ್ಯ ಕೇರಳಾದಲ್ಲಿ ಈ ಹೈಸ್ಪೀಡ್ ವೈರಸ್ ಪತ್ತೆಯಾಗಿದೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ಈ ರಾಶಿಯವರಿಗೆ ಆಪ್ತರಿಂದ ದುಃಖ ಉಂಟಾಗಲಿದ್ದು, ಸ್ತ್ರೀಯರಿಗೆ ಬಲವಿದೆ..

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
Read more