ಪಿಎಂಗೆ ಬರೆದಿರುವ ದೊಡ್ಡ ಗೌಡರ ಪತ್ರದಲ್ಲೇನಿದೆ..? ಬಂದ್ ವಿಚಾರದಲ್ಲಿ ಎರಡು ಬಣಗಳ ವಾದ ವಿವಾದ ಏನು ?

ಪಿಎಂಗೆ ಬರೆದಿರುವ ದೊಡ್ಡ ಗೌಡರ ಪತ್ರದಲ್ಲೇನಿದೆ..? ಬಂದ್ ವಿಚಾರದಲ್ಲಿ ಎರಡು ಬಣಗಳ ವಾದ ವಿವಾದ ಏನು ?

Published : Sep 26, 2023, 08:50 AM IST

ಕುರುಬೂರು, ವಾಟಾಳ್ ಬಣಗಳಲ್ಲಿ ಮೂಡದ ಒಮ್ಮತ!
ವಾಟಾಳ್ ಬಣಕ್ಕೆ ಬೆಂಬಲ ಸೂಚಿಸದ ಹಲವು ಸಂಘಟನೆ! 
ರಾಜಕೀಯ ಪಕ್ಷ ಬಂದ್‌ಗೆ ಕರೆ ನೀಡಿದ್ದೇಕೆ ಎಂದ ಕರವೇ!

ಇಂದು ಸಿಲಿಕಾನ್ ಸಿಟಿ ಬಂದ್ ಆಗಿದೆ. ಹಾಗಾಗಿ ಸಿಲಿಕಾನ್ ಸಿಟಿ ಜನರು ಹೊರಗಡೆ ಓಡಾಡೋಕೆ ಕಿರಿಕಿರಿ ತಪ್ಪಿದ್ದಲ್ಲ. ಹಾಗಂತ ಇಂದು ಒಂದೇ ದಿನ ಈ ಬಂದ್ ಇರುವುದಿಲ್ಲ. ಈ ಬಂದ್ ನಂತರ ಮತ್ತೆ ಎರಡು ದಿನದ ನಂತರ ಅಖಂಡ ಕರ್ನಾಟಕದಲ್ಲಿ ಬಂದ್‌ಗೆ(Bandh) ಕರೆ ನೀಡಲಾಗಿದೆ. ಕಾವೇರಿ ವಿಚಾರವಾಗಿ ರಾಜ್ಯದ ರಾಜಧಾನಿಯಲ್ಲಿ ಬೆಂಗಳೂರನ್ನು(Bengaluru) ಇಂದು ಬಂದ್‌ ಮಾಡಲಾಗಿದೆ. ಕರ್ನಾಟಕ (Karnataka) ತಮಿಳುನಾಡು (Tamilnadu) ಮಧ್ಯೆ ಕಾವೇರಿದ ಜಲಯುದ್ಧ ಕರ್ನಾಟಕದಲ್ಲಿ ರೋಷಾಗ್ನಿಯಾಗಿ ಧಗಧಗಿಸುತ್ತಿದೆ. ಕಾವೇರಿ ನಮ್ಮವಳು. ತಮಿಳುನಾಡಿಗೆ ನೀರು ಬಿಡೋದನ್ನು ನಿಲ್ಲಿಸಿ ಎಂದು ಬೀದಿಗಿಳಿದು ರೈತರು, ಕನ್ನಡಪರ ಸಂಘಟನೆಗಳು(Pro-Kannada organizations) ಹೋರಾಟ ಮಾಡುತ್ತಿವೆ. ರಾಜ್ಯದಲ್ಲಿ ಕಾವೇರಿ ವಿವಾದ ಮತ್ತೆ ಭುಗಿಲೆದ್ದಿದಾಗೆಲ್ಲ.. ವಿರೋಧ ಪಕ್ಷದವರು ಹಾಗೂ ಕರವೇ ಸೇರಿದಂತೆ ನೂರಾರು ಸಂಘಟನೆಕಾರರು ಸೇರಿ ಬಂದ್‌ಗೆ ಕರೆ ನೀಡಿದ್ದಾರೆ. ಈ ಬಾರಿಯೂ ಅದೇ ಅಧ್ಯಾಯ ಮುಂದುವರೆದ ಹಾಗಿದೆ. ಹೀಗೆ ಬಂದ್ ಕರೆಯುವ ಮೂಲಕ ಸರ್ಕಾರಕ್ಕೆ ಬಿಸಿ ತಟ್ಟಿಸೋ ಪ್ರಯತ್ನ ಅವರದ್ದಾಗಿರುತ್ತೆ. ಆದರೆ ಆ ಸುದ್ದಿಯ ಹಿಂದಿದೆಯೇ, ಇನ್ನೊಂದು ಸುದ್ದಿ ಜನರನ್ನ ಇನ್ನಷ್ಟು ಹೌಹಾರುವಂತೆ ಮಾಡಿದೆ. ಒಂದೇ ವಾರದಲ್ಲಿ ಎರಡು ಬಂದ್, ಅದ್ಹೇಗೆ ಯಾಕೆ ಅಂತ ಎಲ್ಲ ತಲೆ ಬಿಸಿ ಮಾಡ್ಕೊಂಡಿರುವಾಗಲೇ ಕರ್ನಾಟಕ ಪರ ಹೊರಾಟಗಾರ ವಾಟಾಳ್ ನಾಗರಾಜ್(Vatal Nagaraj), ಅಖಂಡ ಕರ್ನಾಟಕ ಬಂದ್‌ಗೆ ಕಾರಣ ಏನು ಅನ್ನೊದಕ್ಕೂ ಸ್ಪಷ್ಟತೆ ಕೊಟ್ಟಿದ್ದಾರೆ. ವಾಟಾಳ್‌ ನಾಗರಾಜ್ ಅವರು ಹೀಗೆ ರೊಚ್ಚಿಗೆದ್ದು ಹೇಳ್ತಿರೋ ಮಾತನ್ನ ಕೇಳ್ತಿದ್ರೆ ಗೊತ್ತಾಗ್ತಿದೆ ಇವರು ಯಾವ ಮಟ್ಟಿಗೆ ರೊಚ್ಚಿಗೆದ್ದಿದ್ದಾರೆ ಅಂತ. ಆದರೆ ಮಾತಿನ ಮಧ್ಯಯೇ ಇಂದು ಬಂದ್‌ಗೆ ನಮ್ಮವರ ಸಾಥ್ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಒಂದು ಮಾತನ್ನ ಹೇಳಿದ್ದನ್ನ ಕೇಳ್ತಿದ್ರೆ ಗೊತ್ತಾಗುತ್ತೆ ಈ ಡಬಲ್ ಬಂದ್ ಹಿಂದೆ ರಾಜಕೀಯ ನಡೀತಾ ಇದೆ ಅಂತ.

ಇದನ್ನೂ ವೀಕ್ಷಿಸಿ: Today Horoscope: ಮಿಥುನ ರಾಶಿಯವರಿಗೆ ಇಂದು ಸಂಗಾತಿಯಿಂದ ಬೇಸರವಾಗಲಿದ್ದು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more