Sri Rama: ಕರ್ನಾಟಕದಲ್ಲಿ ಶ್ರೀರಾಮನ ಹೆಜ್ಜೆ ಗುರುತು! ಮರ್ಯಾದಾ ಪುರುಷೋತ್ತಮನಿಗೂ ಕೋಟೆನಾಡಿಗೂ ಇದೆ ನಂಟು!

Sri Rama: ಕರ್ನಾಟಕದಲ್ಲಿ ಶ್ರೀರಾಮನ ಹೆಜ್ಜೆ ಗುರುತು! ಮರ್ಯಾದಾ ಪುರುಷೋತ್ತಮನಿಗೂ ಕೋಟೆನಾಡಿಗೂ ಇದೆ ನಂಟು!

Published : Jan 19, 2024, 11:02 AM IST

ಅಯೋಧ್ಯೆಯ ಶ್ರೀರಾಮನಿಗೂ ಕೋಟೆನಾಡಿಗೂ ಅವಿನಾಭಾವ ಸಂಬಂಧ ಇದೆ. ಅಷ್ಟೇ ಅಲ್ಲದೇ ರಾಯಚೂರಿನಲ್ಲೂ ಶ್ರೀರಾಮನ ಹೆಜ್ಜೆ ಗುರುತಿದೆ. ಚಿತ್ರದುರ್ಗ ಹಾಗೂ ರಾಯಚೂರಿನಲ್ಲಿ ರಾಮನ ಪಯಣ ಹೇಗಿತ್ತು ಗೊತ್ತಾ?

ಅಯೋಧ್ಯಾ ರಾಮ ಕರುನಾಡಿನಲ್ಲಿ ತನ್ನ ಹೆಜ್ಜೆ ಗುರುತುಗಳನ್ನ ಬಿಟ್ಟು ಹೋಗಿದ್ದಾನೆ. ಕೋಟೆನಾಡು ಚಿತ್ರದುರ್ಗಕ್ಕೂ(Chitradurga) ಭಗವಾನ್ ಶ್ರೀರಾಮನಿಗೂ(Sri Rama) ಅವಿನಾಭಾವ ನಂಟು ಇರುವುದು ನಮ್ಮ ಭಾಗದ ಪುಣ್ಯ ಅಂತಿದ್ದಾರೆ ಈ ಭಾಗದ ಜನರು. ಹೀಗೆ ಬೆಟ್ಟದ ತುತ್ತ ತುದಿಯಲ್ಲಿ ಇರುವ ದೇವಾಲಯದ ಹೆಸರು ಶ್ರೀ ಕರಿಸಿದ್ದೇಶ್ವರ ಸ್ವಾಮಿ ದೇಗುಲ(Karisiddeshwara Temple). ಶತಮಾನಗಳ ಹಿಂದೆ ಪವಾಡ ಪುರುಷ ಕರಿಸಿದ್ದೇಶ್ವರ ಸ್ವಾಮಿಗಳು ಬೆಟ್ಟದಲ್ಲಿ ವಾಸವಿದ್ದ ಸಮಯದಲ್ಲಿ, ಭಗವಾನ್ ಶ್ರೀರಾಮನು ತನ್ನ ಸೀತೆ ಮಾತೆಯ ಅನ್ವೇಷಣೆಗೆಂದು ಆಗಮಿಸಿದ್ದರು. ಈ ವೇಳೆ ಕರಿಸಿದ್ದೇಶ್ವರ ಶ್ರೀಗಳಿಗೆ ಶ್ರೀರಾಮನು ನಾನು ಇದೇ ಬೆಟ್ಟದಲ್ಲಿ ಎರಡು ದಿನ ಉಳಿಯುವುದಾಗಿ ಹೇಳಿದ್ರಂತೆ, ಯಾರೋ ಇರಬೇಕು ಎಂದು ಸ್ವಾಮಿಗಳು ಉಳಿಯಲು ಜಾಗ ಕೊಟ್ಟಿದ್ರು. ಈ ವೇಳೆ ಪೂಜೆಗೆಂದು ಶ್ರೀರಾಮನು ತನ್ನ ಬಾಣದಿಂದಲೇ ನಾವಿಯನ್ನು ನಿರ್ಮಿಸಿದಾಗ ಗಂಗೆಯು ಉದ್ಭವವಾಗಿದ್ದಾರೆ ಎನ್ನುವ ಪ್ರತೀತಿ ಇದೆ. ಅಂದಿನ ಭೈರವನ ಬೆಟ್ಟದಲ್ಲಿ ಶ್ರೀರಾಮನು ಸುತ್ತಾಡಿರುವ ಕುರುಹುಗಳಿವೆ. ಸೀತೆಯ ಅನ್ವೇಷಣೆ ಸಂದರ್ಭದಲ್ಲಿ ಶ್ರೀರಾಮ‌ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಮೊದಲ ಸ್ಥಳ ಭೈರವನ ಬೆಟ್ಟ ಈಗಿನ ರಾಮಗಿರಿ ಬೆಟ್ಟ.

ಇನ್ನೂ ಅಯೋಧ್ಯಾ(Ayodhya) ರಾಮನಿಗೂ ರಾಯಚೂರಿಗೂ ನಂಟಿಗೆ. ರಾಯಚೂರು(Raichur) ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಡೋಣಿ ಎನ್ನುವ ಗ್ರಾಮಕ್ಕೆ ರಾಮ ಬಂದಿದ್ದ ಎಂಬ ಉಲ್ಲೇಖವಿದೆ. ಪುಣ್ಯಕ್ಷೇತ್ರ ಯರಡೋಣಿಯನ್ನ ರಾಮಾಯಣ ಕಾಲದಲ್ಲಿ ಜಟ್ಟಿಂಗ ಮಹರಾಜ ಪಟ್ಟಣ ಅಂತಾ ಕರೆಯಲಾಗ್ತಿತ್ತು. ಸೀತೆಯನ್ನ ಅರಸುತ್ತಾ ಬಂದ ರಾಮ, ಯರಡೋಣಿ ಗ್ರಾಮದ ಬಳಿ ದಂಡಕಾರಣ್ಯದಲ್ಲಿ ಬಾಯಾರಿಕೆಯಾಗಿ ಬೃಹದಾಕಾರವಾದ ಬಂಡೆಗೆ ಬಾಣ ಹೊಡೆದ, ಆ ಬಳಿಕ ಅಲ್ಲಿ ತೀರ್ಥ ಉದ್ಭವವಾಗಿದೆ ಎಂಬ ಪ್ರತೀತಿ ಇದೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಗಜ ಕೇಸರಿ ಯೋಗವಿದ್ದು, ಇಂದು ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more