Sri Rama: ಕರ್ನಾಟಕದಲ್ಲಿ ಶ್ರೀರಾಮನ ಹೆಜ್ಜೆ ಗುರುತು! ಮರ್ಯಾದಾ ಪುರುಷೋತ್ತಮನಿಗೂ ಕೋಟೆನಾಡಿಗೂ ಇದೆ ನಂಟು!

Sri Rama: ಕರ್ನಾಟಕದಲ್ಲಿ ಶ್ರೀರಾಮನ ಹೆಜ್ಜೆ ಗುರುತು! ಮರ್ಯಾದಾ ಪುರುಷೋತ್ತಮನಿಗೂ ಕೋಟೆನಾಡಿಗೂ ಇದೆ ನಂಟು!

Published : Jan 19, 2024, 11:02 AM IST

ಅಯೋಧ್ಯೆಯ ಶ್ರೀರಾಮನಿಗೂ ಕೋಟೆನಾಡಿಗೂ ಅವಿನಾಭಾವ ಸಂಬಂಧ ಇದೆ. ಅಷ್ಟೇ ಅಲ್ಲದೇ ರಾಯಚೂರಿನಲ್ಲೂ ಶ್ರೀರಾಮನ ಹೆಜ್ಜೆ ಗುರುತಿದೆ. ಚಿತ್ರದುರ್ಗ ಹಾಗೂ ರಾಯಚೂರಿನಲ್ಲಿ ರಾಮನ ಪಯಣ ಹೇಗಿತ್ತು ಗೊತ್ತಾ?

ಅಯೋಧ್ಯಾ ರಾಮ ಕರುನಾಡಿನಲ್ಲಿ ತನ್ನ ಹೆಜ್ಜೆ ಗುರುತುಗಳನ್ನ ಬಿಟ್ಟು ಹೋಗಿದ್ದಾನೆ. ಕೋಟೆನಾಡು ಚಿತ್ರದುರ್ಗಕ್ಕೂ(Chitradurga) ಭಗವಾನ್ ಶ್ರೀರಾಮನಿಗೂ(Sri Rama) ಅವಿನಾಭಾವ ನಂಟು ಇರುವುದು ನಮ್ಮ ಭಾಗದ ಪುಣ್ಯ ಅಂತಿದ್ದಾರೆ ಈ ಭಾಗದ ಜನರು. ಹೀಗೆ ಬೆಟ್ಟದ ತುತ್ತ ತುದಿಯಲ್ಲಿ ಇರುವ ದೇವಾಲಯದ ಹೆಸರು ಶ್ರೀ ಕರಿಸಿದ್ದೇಶ್ವರ ಸ್ವಾಮಿ ದೇಗುಲ(Karisiddeshwara Temple). ಶತಮಾನಗಳ ಹಿಂದೆ ಪವಾಡ ಪುರುಷ ಕರಿಸಿದ್ದೇಶ್ವರ ಸ್ವಾಮಿಗಳು ಬೆಟ್ಟದಲ್ಲಿ ವಾಸವಿದ್ದ ಸಮಯದಲ್ಲಿ, ಭಗವಾನ್ ಶ್ರೀರಾಮನು ತನ್ನ ಸೀತೆ ಮಾತೆಯ ಅನ್ವೇಷಣೆಗೆಂದು ಆಗಮಿಸಿದ್ದರು. ಈ ವೇಳೆ ಕರಿಸಿದ್ದೇಶ್ವರ ಶ್ರೀಗಳಿಗೆ ಶ್ರೀರಾಮನು ನಾನು ಇದೇ ಬೆಟ್ಟದಲ್ಲಿ ಎರಡು ದಿನ ಉಳಿಯುವುದಾಗಿ ಹೇಳಿದ್ರಂತೆ, ಯಾರೋ ಇರಬೇಕು ಎಂದು ಸ್ವಾಮಿಗಳು ಉಳಿಯಲು ಜಾಗ ಕೊಟ್ಟಿದ್ರು. ಈ ವೇಳೆ ಪೂಜೆಗೆಂದು ಶ್ರೀರಾಮನು ತನ್ನ ಬಾಣದಿಂದಲೇ ನಾವಿಯನ್ನು ನಿರ್ಮಿಸಿದಾಗ ಗಂಗೆಯು ಉದ್ಭವವಾಗಿದ್ದಾರೆ ಎನ್ನುವ ಪ್ರತೀತಿ ಇದೆ. ಅಂದಿನ ಭೈರವನ ಬೆಟ್ಟದಲ್ಲಿ ಶ್ರೀರಾಮನು ಸುತ್ತಾಡಿರುವ ಕುರುಹುಗಳಿವೆ. ಸೀತೆಯ ಅನ್ವೇಷಣೆ ಸಂದರ್ಭದಲ್ಲಿ ಶ್ರೀರಾಮ‌ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಮೊದಲ ಸ್ಥಳ ಭೈರವನ ಬೆಟ್ಟ ಈಗಿನ ರಾಮಗಿರಿ ಬೆಟ್ಟ.

ಇನ್ನೂ ಅಯೋಧ್ಯಾ(Ayodhya) ರಾಮನಿಗೂ ರಾಯಚೂರಿಗೂ ನಂಟಿಗೆ. ರಾಯಚೂರು(Raichur) ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಡೋಣಿ ಎನ್ನುವ ಗ್ರಾಮಕ್ಕೆ ರಾಮ ಬಂದಿದ್ದ ಎಂಬ ಉಲ್ಲೇಖವಿದೆ. ಪುಣ್ಯಕ್ಷೇತ್ರ ಯರಡೋಣಿಯನ್ನ ರಾಮಾಯಣ ಕಾಲದಲ್ಲಿ ಜಟ್ಟಿಂಗ ಮಹರಾಜ ಪಟ್ಟಣ ಅಂತಾ ಕರೆಯಲಾಗ್ತಿತ್ತು. ಸೀತೆಯನ್ನ ಅರಸುತ್ತಾ ಬಂದ ರಾಮ, ಯರಡೋಣಿ ಗ್ರಾಮದ ಬಳಿ ದಂಡಕಾರಣ್ಯದಲ್ಲಿ ಬಾಯಾರಿಕೆಯಾಗಿ ಬೃಹದಾಕಾರವಾದ ಬಂಡೆಗೆ ಬಾಣ ಹೊಡೆದ, ಆ ಬಳಿಕ ಅಲ್ಲಿ ತೀರ್ಥ ಉದ್ಭವವಾಗಿದೆ ಎಂಬ ಪ್ರತೀತಿ ಇದೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಗಜ ಕೇಸರಿ ಯೋಗವಿದ್ದು, ಇಂದು ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
Read more