Sri Rama: ಕರ್ನಾಟಕದಲ್ಲಿ ಶ್ರೀರಾಮನ ಹೆಜ್ಜೆ ಗುರುತು! ಮರ್ಯಾದಾ ಪುರುಷೋತ್ತಮನಿಗೂ ಕೋಟೆನಾಡಿಗೂ ಇದೆ ನಂಟು!

Sri Rama: ಕರ್ನಾಟಕದಲ್ಲಿ ಶ್ರೀರಾಮನ ಹೆಜ್ಜೆ ಗುರುತು! ಮರ್ಯಾದಾ ಪುರುಷೋತ್ತಮನಿಗೂ ಕೋಟೆನಾಡಿಗೂ ಇದೆ ನಂಟು!

Published : Jan 19, 2024, 11:02 AM IST

ಅಯೋಧ್ಯೆಯ ಶ್ರೀರಾಮನಿಗೂ ಕೋಟೆನಾಡಿಗೂ ಅವಿನಾಭಾವ ಸಂಬಂಧ ಇದೆ. ಅಷ್ಟೇ ಅಲ್ಲದೇ ರಾಯಚೂರಿನಲ್ಲೂ ಶ್ರೀರಾಮನ ಹೆಜ್ಜೆ ಗುರುತಿದೆ. ಚಿತ್ರದುರ್ಗ ಹಾಗೂ ರಾಯಚೂರಿನಲ್ಲಿ ರಾಮನ ಪಯಣ ಹೇಗಿತ್ತು ಗೊತ್ತಾ?

ಅಯೋಧ್ಯಾ ರಾಮ ಕರುನಾಡಿನಲ್ಲಿ ತನ್ನ ಹೆಜ್ಜೆ ಗುರುತುಗಳನ್ನ ಬಿಟ್ಟು ಹೋಗಿದ್ದಾನೆ. ಕೋಟೆನಾಡು ಚಿತ್ರದುರ್ಗಕ್ಕೂ(Chitradurga) ಭಗವಾನ್ ಶ್ರೀರಾಮನಿಗೂ(Sri Rama) ಅವಿನಾಭಾವ ನಂಟು ಇರುವುದು ನಮ್ಮ ಭಾಗದ ಪುಣ್ಯ ಅಂತಿದ್ದಾರೆ ಈ ಭಾಗದ ಜನರು. ಹೀಗೆ ಬೆಟ್ಟದ ತುತ್ತ ತುದಿಯಲ್ಲಿ ಇರುವ ದೇವಾಲಯದ ಹೆಸರು ಶ್ರೀ ಕರಿಸಿದ್ದೇಶ್ವರ ಸ್ವಾಮಿ ದೇಗುಲ(Karisiddeshwara Temple). ಶತಮಾನಗಳ ಹಿಂದೆ ಪವಾಡ ಪುರುಷ ಕರಿಸಿದ್ದೇಶ್ವರ ಸ್ವಾಮಿಗಳು ಬೆಟ್ಟದಲ್ಲಿ ವಾಸವಿದ್ದ ಸಮಯದಲ್ಲಿ, ಭಗವಾನ್ ಶ್ರೀರಾಮನು ತನ್ನ ಸೀತೆ ಮಾತೆಯ ಅನ್ವೇಷಣೆಗೆಂದು ಆಗಮಿಸಿದ್ದರು. ಈ ವೇಳೆ ಕರಿಸಿದ್ದೇಶ್ವರ ಶ್ರೀಗಳಿಗೆ ಶ್ರೀರಾಮನು ನಾನು ಇದೇ ಬೆಟ್ಟದಲ್ಲಿ ಎರಡು ದಿನ ಉಳಿಯುವುದಾಗಿ ಹೇಳಿದ್ರಂತೆ, ಯಾರೋ ಇರಬೇಕು ಎಂದು ಸ್ವಾಮಿಗಳು ಉಳಿಯಲು ಜಾಗ ಕೊಟ್ಟಿದ್ರು. ಈ ವೇಳೆ ಪೂಜೆಗೆಂದು ಶ್ರೀರಾಮನು ತನ್ನ ಬಾಣದಿಂದಲೇ ನಾವಿಯನ್ನು ನಿರ್ಮಿಸಿದಾಗ ಗಂಗೆಯು ಉದ್ಭವವಾಗಿದ್ದಾರೆ ಎನ್ನುವ ಪ್ರತೀತಿ ಇದೆ. ಅಂದಿನ ಭೈರವನ ಬೆಟ್ಟದಲ್ಲಿ ಶ್ರೀರಾಮನು ಸುತ್ತಾಡಿರುವ ಕುರುಹುಗಳಿವೆ. ಸೀತೆಯ ಅನ್ವೇಷಣೆ ಸಂದರ್ಭದಲ್ಲಿ ಶ್ರೀರಾಮ‌ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಮೊದಲ ಸ್ಥಳ ಭೈರವನ ಬೆಟ್ಟ ಈಗಿನ ರಾಮಗಿರಿ ಬೆಟ್ಟ.

ಇನ್ನೂ ಅಯೋಧ್ಯಾ(Ayodhya) ರಾಮನಿಗೂ ರಾಯಚೂರಿಗೂ ನಂಟಿಗೆ. ರಾಯಚೂರು(Raichur) ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಡೋಣಿ ಎನ್ನುವ ಗ್ರಾಮಕ್ಕೆ ರಾಮ ಬಂದಿದ್ದ ಎಂಬ ಉಲ್ಲೇಖವಿದೆ. ಪುಣ್ಯಕ್ಷೇತ್ರ ಯರಡೋಣಿಯನ್ನ ರಾಮಾಯಣ ಕಾಲದಲ್ಲಿ ಜಟ್ಟಿಂಗ ಮಹರಾಜ ಪಟ್ಟಣ ಅಂತಾ ಕರೆಯಲಾಗ್ತಿತ್ತು. ಸೀತೆಯನ್ನ ಅರಸುತ್ತಾ ಬಂದ ರಾಮ, ಯರಡೋಣಿ ಗ್ರಾಮದ ಬಳಿ ದಂಡಕಾರಣ್ಯದಲ್ಲಿ ಬಾಯಾರಿಕೆಯಾಗಿ ಬೃಹದಾಕಾರವಾದ ಬಂಡೆಗೆ ಬಾಣ ಹೊಡೆದ, ಆ ಬಳಿಕ ಅಲ್ಲಿ ತೀರ್ಥ ಉದ್ಭವವಾಗಿದೆ ಎಂಬ ಪ್ರತೀತಿ ಇದೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಗಜ ಕೇಸರಿ ಯೋಗವಿದ್ದು, ಇಂದು ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more