ಈ ಬಾರಿ ವಿಶ್ವವಿಖ್ಯಾತ ದಸರಾಗೆ ಏರ್‌ ಶೋ ಮೆರಗು: ಬಾನಂಗಳದಲ್ಲಿ ಮೂಡಲಿದೆ ಲೋಹದ ಹಕ್ಕಿಗಳ ಚಿತ್ತಾರ

ಈ ಬಾರಿ ವಿಶ್ವವಿಖ್ಯಾತ ದಸರಾಗೆ ಏರ್‌ ಶೋ ಮೆರಗು: ಬಾನಂಗಳದಲ್ಲಿ ಮೂಡಲಿದೆ ಲೋಹದ ಹಕ್ಕಿಗಳ ಚಿತ್ತಾರ

Published : Oct 07, 2023, 10:07 AM IST

ವಿಶ್ವವಿಖ್ಯಾತ ದಸರಾಗೆ ದಿನಗಣಗೆ ಶುರುವಾಗಿದೆ. ಬರಗಾಲದ ಮಧ್ಯೆ ಸಾಂಸ್ಕೃತಿಕ ನಗರಿ ಕಂಗೊಳಿಸ್ತಿದೆ. ಇದ್ರ ಮಧ್ಯೆ ಕೇಂದ್ರದ ಅದೊಂದು ನಿರ್ಧಾರ ದಸರಾ ಹಬ್ಬದ ಖುಷಿ ಹೆಚ್ಚುವಂತೆ ಮಾಡಿದೆ.

ಜಂಬೂ ಸವಾರಿ..ಚಿನ್ನದ ಅಂಬಾರಿ..ರಾಜ ಬೀದಿಯಲ್ಲಿ  ಗಜಪಡೆ ಗಾಂಭೀರ್ಯ ನಡೆ.. ಇದು ಸಾಂಸ್ಕೃತಿಕ ನಗರಿಯ ದಸರಾ ವೈಭವ.. ವಿಶ್ವ ವಿಖ್ಯಾತಿ ದಸರಾ ಮಹೋತ್ಸವ ಈ ಬಾರಿ ಮತ್ತಷ್ಟು ಮೆರಗು ಹೆಚ್ಚಲಿದೆ. ಯಾಕಂದ್ರೆ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ಮೈಸೂರು(Mysore) ದಸರಾದಲ್ಲಿ ಏರ್ ಶೋ ಆಯೋಜಿಸಲಾಗ್ತಿದೆ. ಮೈಸೂರು ದಸರಾದಲ್ಲಿ ಏರ್ ಶೊ ಆಯೋಜಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಕೊನೆಗೂ ದಸರಾ(Dasara) ವೈಭವದ ಜೊತೆಗೆ ಏರ್ ಶೋ ಕಣ್ತುಂಬಿಕೊಳ್ಳುವ ಅವಕಾಶವನ್ನು ಕೇಂದ್ರ ಸರ್ಕಾರ ಕರುಣಿಸಿದೆ. ಏರ್ ಶೋಗೆ ಪರ್ಮಿಷನ್ ಸಿಕ್ಕಿದ್ದೇ ತಡ ಸಿದ್ದತೆ ಜೋರಾಗಿದೆ. ಮೈಸೂರು ಏರ್ ಬೇಸ್ಡ್ ಕ್ಯಾಪ್ಟನ್ ಡಿ.ಕೆ‌.ಹೋಜಾ ಜೊತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ  ಮೈಸೂರಿನ ಬನ್ನಿ ಮಂಟಪ ಮೈದಾನಕ್ಕೆ ಎಂಟ್ರಿ ಕೊಟ್ಟು, ಏರ್ ಶೋ(Air show) ನಡೆಸಲು ಸ್ಥಳ ಪರಿಶೀಲನೆ ನಡೆಸಿದ್ರು. ರಾಜಮನೆತನದ ದಸರಾ ಜೆಸ್ಟ್ ಫೋಟೋದಲ್ಲಿ ನೊಡ್ತಿದ್ವಿ. ಆದ್ರೆ, ಈ ಬಾರಿ 400 ವರ್ಷಗಳ ರಾಜ ಪರಂಪರೆಯ ದಸರಾ ವೈಭವದಂತೆ ನಡೆಸಲು ಭರ್ಜರಿ ತಯಾರಿ ನಡೆದಿದೆ. ವರ್ಷಗಳು ಉರುಳಿದಂತೆ ರಾಜರ ಅಳ್ವಿಕೆ ಕಾಲದ ಜಂಬೂ ಸವಾರಿ ಕೊಂಚ ಬದಲಾವಣೆ ಕಂಡಿತ್ತು.. ಆದ್ರೀಗ ಮತ್ತೆ 4 ಶತಮಾನದಲ್ಲಿ ಜಂಬುಸವಾರಿ ಜತೆ ರಾಜ ಬಿರುದು ಲಾಂಛನ ಹೊತ್ತು ಸಾಗುತ್ತಿದ್ದ ಸೈನಿಕರು, ಗ್ರಿಲ್ ಮೀಸಿ, ರೆಡ್ ಲ್ಯಾನ್ಸರ್, ವೈಟ್ ಲ್ಯಾನ್ಸರ್, ಗ್ರೀನ್ ಲ್ಯಾನ್ಸರ್ ಇವರೆಲ್ಲ ಪಾಲ್ಗೊಳ್ಳುವ ಮೂಲಕ ಇತಿಹಾಸ ಕಣ್ಮುಂದೆ ತರಲು ಸಿದ್ದತೆ ನಡೆಸಲಾಗಿದೆ.

ಇದನ್ನೂ ವೀಕ್ಷಿಸಿ:  ರಿಲೀಸ್ ಆಯ್ತು ‘ಲಿಯೋ’ ಟ್ರೈಲರ್‌: ಥಿಯೇಟರ್‌ನಲ್ಲಿ ಪುಂಡಾಟ ಮೆರೆದ ವಿಜಯ್ ಫ್ಯಾನ್ಸ್

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more