ಈ ವಾರ ಕಿಚ್ಚನ ಪಂಚಾಯ್ತಿಗೆ ಸುದೀಪ್ ಬರಲ್ಲ..! ಕಿಚ್ಚನ ಪಂಚಾಯ್ತಿಗೆ ಶೃತಿ  ಎಂಟ್ರಿ..!

ಈ ವಾರ ಕಿಚ್ಚನ ಪಂಚಾಯ್ತಿಗೆ ಸುದೀಪ್ ಬರಲ್ಲ..! ಕಿಚ್ಚನ ಪಂಚಾಯ್ತಿಗೆ ಶೃತಿ ಎಂಟ್ರಿ..!

Published : Dec 24, 2023, 09:33 AM IST

ಬಿಗ್ ಬಾಸ್ ಸೀಸನ್ 10 ಈಗ 80ನೇ ದಿನಕ್ಕೆ ಸಮೀಪಿಸುತ್ತಿದೆ ಒಂದು ವಾರ ಕಳೆದಿದ್ದು, ಈಗೇನಿದ್ದರೂ ಮುಂದೆ ಸೆಮಿಫೈನಲ್‌ಗೆ ಯಾರು ಬರುತ್ತಾರೆ ಎಂಬುದಷ್ಟೇ ಕುತೂಹಲ ಕೆರಳಿಸಿದೆ. 

ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ನಮ್ರತಾ‌ ಆಯ್ಕೆಯಾಗಿದ್ದಾರೆ. ಇನ್ನೂ ಈ ವಾರ ಸಂಗೀತಾ, ಪ್ರತಾಪ್, ಸಿರಿ, ತುಕಾಲಿ ಸಂತೋಷ್ , ವರ್ತೂರು ಸಂತೋಷ್, ಅವಿನಾಶ್ ಶೆಟ್ಟಿ ನಾಮಿನೇಟ್ ಆಗಿದ್ದಾರೆ. ಇಷ್ಟು ಮಂದಿಯಲ್ಲಿ ಮನೆಯಿಂದ ಹೊರಗೆ ಹೋಗೋದು ಯಾರು ಎಂಬ ಕುತೂಹಲ ವೀಕ್ಷಕರಲ್ಲೂ ಕೂಡ ಮನೆ ಮಾಡಿದೆ. ವಿಕೇಂಡ್‌ನಲ್ಲಿ ಕಿಚ್ಚನನ್ನ ನೋಡೋಕಂತಾನೆ ಇರೋ ಫ್ಯಾನ್ಸ್‌ಗೆ ಈ ಸರ್ತಿ ಸುದೀಪ್ ಕಾಣಿಸೋದಿಲ್ಲ. ಬಿಕಾಸ್ ಬಿಗ್ ಬಾಸ್(Bigg Boss) ಮನೆಯಲ್ಲಿ ಕಿಚ್ಚನ ಪಂಚಾಯಿತಿಗೆ ರಜೆ ಸಿಕ್ಕಿದೆ. ಯಾಕೆಂದರೆ ಕಿಚ್ಚ ಕ್ರಿಕೆಟ್ ಟೂರ್ನಮೆಂಟ್‌ಗೆ(Cricket tournament) ಹೋಗಿದ್ದು, ಇಂದು ಕಿಚ್ಚ ಸುದೀಪ್(Sudeep) ಅವರು ನ್ಯಾಯ ಪಂಚಾಯಿತಿ ತೀರ್ಮಾನ ಮಾಡಲು ಬಂದಿಲ್ಲ. ಆದರೆ ಇಲ್ಲಿಗೆ ಯಾರು ಬರುತ್ತಾರೆ ಎಂಬ ಕುತೂಹಲ ಇತ್ತು. ಅದಕ್ಕೆ ಕಲರ್ಸ್ ಕನ್ನಡದಲ್ಲಿ ಬಿಟ್ಟಿರುವ ಪ್ರೋಮೋದಲ್ಲಿ ಉತ್ತರ ಸಿಕ್ಕದೆ. ನಟಿ ಹಾಗೂ ಬಿಗ್ ಬಾಸ್ ವಿನ್ನರ್ ಶೃತಿ ಅವರು ಬಿಗ್ ಬಾಸ್ ಮನೆಗೆ ಕೊಟ್ಟಿದ್ದಾರೆ. ಈಗ ಬಿಗ್ ಬಾಸ್ ಮನೆ ಕೋರ್ಟ್ ಆಗಿ ಪರಿವರ್ತನೆಯಾಗಿದ್ದು ಶೃತಿ ಜಡ್ಜ್ ಆಗಿ ಆಗಮಿಸಲಿದ್ದಾರೆ. ಇಂದು ಶೃತಿಯೇ ಬಿಗ್ ಬಾಸ್ ಮನೆಯಲ್ಲಿ ನ್ಯಾಯ ತೀರ್ಮಾನ ಮಾಡಲಿದ್ದಾರೆ. ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ರೋಚಕತೆಯನ್ನು ಪಡೆದಿದೆ. ಇಂದು ಬಿಗ್ ಬಾಸ್ ಮನೆ ಕೋರ್ಟ್ ಆಗಿ ಪರಿವರ್ತನೆಯಾಗಿದೆ. ಸ್ಪರ್ಧಿಗಳು ಮಾಡಿರುವ ತಪ್ಪಿಗೆ ನ್ಯಾಯವನ್ನು ನೀಡಲು ಶೃತಿ ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ. ಇಷ್ಟು ದಿನ ಒಂದು ಪ್ರಶ್ನೆಗೆ ಉತ್ತರ ದೊರಕಬೇಕಾಗಿತ್ತು ಆ ಪ್ರಶ್ನೆಯನ್ನು ಕಿಚ್ಚ ಸುದೀಪ್ ಅವರು ಎಲ್ಲಿಯೂ ಕೂಡ ಕೇಳಿರಲಿಲ್ಲ‌. ವೀಕ್ಷಕರು ಮಾತ್ರ ಪದೇ ಪದೇ ವಿನಯ್ ಕಿಚ್ಚ ಸುದೀಪ್ ಬಂದಾಗ ಸೈಲೆಂಟಾಗಿ ಇರುತ್ತಾರೆ ಎಂದು ಪ್ರಶ್ನೆಯನ್ನು ಹೊರ ಹಾಕುತ್ತಲೇ ಇದ್ದರೂ. ಆ ಪ್ರಶ್ನೆಗೆ ಇಂದು ಉತ್ತರ ಸಿಕ್ಕುವ ಸಮಯ ಬಂದಿದೆ. ಇನ್ನೇನಿದ್ದರೂ ಸೆಮಿ ಫೈನಲ್ ಗೆ ನಾಲ್ಕು ವಾರಗಳು ಇದ್ದು ಮನೆಯಿಂದ ಇನ್ಮುಂದೆ ಎರಡರಿಂದ ಮೂರು ಮಂದಿ ನಾಮಿನೇಟ್ ಆಗುತ್ತಾರೆ. ಕೊನೆಗೆ ಐವರಿಂದ ಆರು ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಳ್ಳುತ್ತಾರೆ ಅದರಲ್ಲಿ ಮೂರು ಮಂದಿ ಉಳಿದುಕೊಂಡು ರನ್ನರ್ ಆಫ್ ಹಾಗೂ ವಿಜೇತರನ್ನ ಘೋಷಣೆ ಮಾಡಲಾಗುತ್ತದೆ.

ಇದನ್ನೂ ವೀಕ್ಷಿಸಿ:  ಮೊದಲ ದಿನ 95 ಕೋಟಿ + ಗಳಿಸಿದ ಸಲಾರ್..! 35 ಕೋಟಿಗಳಿಸಿ ಸೋತು ಸುಣ್ಣವಾದ ಡಂಕಿ..!

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!