ಅಮೃತ ಭಾರತಿಗೆ ಕನ್ನಡದಾರತಿ: ಅಮೃತೋತ್ಸವಕ್ಕೆ ಕಲಾವಿದ ಸಂಗಮೇಶ್ ಉಪಾಸೆ ಕಾಣಿಕೆ

Aug 17, 2022, 7:52 PM IST

ಸ್ವಾತಂತ್ರ್ಯ ದಿನಾಚರಣೆಯ ಅಮೃತೋತ್ಸವವನ್ನು ಪ್ರತಿಯೊಬ್ಬ ಭಾರತೀಯರೂ ಪ್ರೀತಿಯಿಂದ ಅಚರಿಸಿದ್ದಾರೆ. ಕಿರುತೆರೆ ಕಲಾವಿದರಾಗಿದ್ದ ಸಿಲ್ಲಿ ಲಲ್ಲಿ ಗೋವಿಂದು ಖ್ಯಾತಿಯ ಸಂಗಮೇಶ್ ಉಪಾಸೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಈಗ ಕೆಎಎಸ್ ಅಧಿಕಾರಿಯಾಗಿರುವ ಸಂಗಮೇಶ್ ಉಪಾಸೆ, ಸ್ವತಃ ಸಾಹಿತ್ಯ ಬರೆದು, ತಾವೇ ನಿರ್ದೇಶನವನ್ನೂ ಮಾಡಿ ಅಮೃತ ಭಾರತಿಗೆ ಕನ್ನಡದಾರತಿ ಹಾಡನ್ನು ಸಂಯೋಜಿಸಿ ತೆರೆ ಮೇಲೆ ತಂದಿದ್ದಾರೆ. ಕೆ.ಎಂ. ಇಂದ್ರ ಈ ಹಾಡಿಗೆ ಸಂಯೋಜಿಸಿದ್ದು ಹಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment