ಕೆಜಿಎಫ್ ಚಾಚಾ ಹರೀಶ್ ರಾಯ್‌ ಹೋರಾಡುತ್ತಿರುವ ಕ್ಯಾನ್ಸರ್‌ ಯುದ್ಧದ ಕಥೆ

ಕೆಜಿಎಫ್ ಚಾಚಾ ಹರೀಶ್ ರಾಯ್‌ ಹೋರಾಡುತ್ತಿರುವ ಕ್ಯಾನ್ಸರ್‌ ಯುದ್ಧದ ಕಥೆ

Published : Nov 19, 2024, 10:38 PM IST

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಹರೀಶ್ ರೈ ಅವರಿಗೆ ಶೇ.30ರಷ್ಟು ಕ್ಯಾನ್ಸರ್ ಗುಣಮುಖವಾಗಿದೆ. ರಾಕಿಂಗ್ ಸ್ಟಾರ್ ಯಶ್ ಮತ್ತು ಶಿವಣ್ಣ ಅವರ ಬೆಂಬಲ, ಮಂತ್ರಾಲಯದ ರಾಯರ ಆಶೀರ್ವಾದದಿಂದ ಹರೀಶ್ ರೈ ಈ ಯುದ್ಧವನ್ನು ಗೆದ್ದಿದ್ದಾರೆ.

ಕೆಜಿಎಫ್ ಚಾಚಾ ನಿಟ್ಟುಸಿರು ಬಿಟ್ಟಿದ್ದಾರೆ. ಹೊಸಿಲವರೆಗೆ ಬಂದಿದ್ದ ಕಂಟಕ ಈಗ ದೂರ ನಿಂತಿದೆ. ಇನ್ನೇನು ಮುಗಿಯಿತು ಕತೆ ಎನ್ನುವಾಗಲೇ ಹೊಸ ಬೆಳಕು ನಕ್ಕಿದೆ. ಖುದ್ದು ರಾಕಿಭಾಯ್ ಹೆಗಲ ಮೇಲೆ ಕೈ ಹಾಕಿದ್ದಾರೆ. ಶಿವಣ್ಣ ಧೈರ್ಯ ತುಂಬಿದ್ದಾರೆ. ಹಡೆದವ್ವ ಮಗನ ಆರೋಗ್ಯಕ್ಕೆ ಹರಕೆ ಹೊತ್ತಿದ್ದಾರೆ. ಹಾಗಿದ್ದರೆ ಚಾಚಾ ಹರೀಶ್ ರೈ ಯಾವ ಅಪಾಯದಿಂದ ಪಾರಾದರು ? ಹೇಗೆ ಎಲ್ಲರೂ ಕೈ ಹಿಡಿದರು ? ಆ ಯುದ್ಧ ಗೆದ್ದ ಕಥನ ಇಲ್ಲಿದೆ.

ಹರೀಶ್ ರೈಗೆ ಇನ್ನೊಂದು ಮಹಾ ಶಕ್ತಿ ಕೈ ಹಿಡಿದಿದೆ. ಅದು ಬೇರಾರೂ ಅಲ್ಲ. ಮಂತ್ರಾಲಯದ ರಾಯರು. ಯಾವಾಗ ಆರೋಗ್ಯ ಹೀಗಾಯಿತೊ. ತಕ್ಷಣ ರೈ ಗುರುರಾಯರಿಗೆ ಮೊರೆ ಹೋದರು. ಆಗ ಅಲ್ಲಿಂದ ಬಂದ ಮಂತ್ರಾಕ್ಷತೆ...ಈಗಲೂ ಅವರಿಗೆ ದಾರಿ ದೀಪವಾಗಿದೆ. ಸ್ಯಾಂಡಲ್​ವುಡ್​ನ ಪ್ರತಿಭಾನ್ವಿತ ನಟ ಹರೀಶ್ ರಾಯ್  ಮಾರಣಾಂತಿಕ ಕ್ಯಾನ್ಸರ್ ಜೊತೆ  ಹೋರಾಡಿ ‘ಶೇ.30ರಷ್ಟು ಕ್ಯಾನ್ಸರ್ ಗುಣವಾಗಿದೆ  ಎಂದು ವೈದ್ಯರ ಅಭಯ ನೀಡಿದ್ದಾರೆ. ಒಟ್ಟಾರೆ ನಟ ಹರೀಶ್ ರೈ ಒಂದು ದೊಡ್ಡ ಯುದ್ಧ ಗೆದ್ದಿದ್ದಾರೆ ಅಂದ್ರೆ ತಪ್ಪಾಗಲ್ಲ.

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
Read more