ದರ್ಶನ್​ಗೆ ಮತ್ತೆ ಜೈಲುವಾಸ ವಿಸ್ತರಣೆ: ಕಿಲ್ಲಿಂಗ್ ಸ್ಟಾರ್​​ ಬಚಾವ್ ಆಗಲಿ ಅಂತ ದೇವರನ್ನ ಬೇಡಿದ ಕಲಾವಿದರು!

Aug 15, 2024, 4:12 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಕಿಲ್ಲಿಂಗ್ ಸ್ಟಾರ್ ದರ್ಶನ್​ಗೆ ಮತ್ತೆ ಜೈಲು ವಾಸ ವಿಸ್ತರಣೆಗಿದ್ದು, ಅ.28 ವರೆಗೆ ಪರಪ್ಪನ ಅಗ್ರಹರದಲ್ಲೇ ಇರಬೇಕು. ದರ್ಶನ್​​ ಬಾಚಾವ್ ಆಗಲಿ ಅಂತ ದೇವರನ್ನ ಕಲಾವಿದರು ಬೇಡಿದ್ದಾರೆ. ಜೊತೆಗೆ ಪೂಜೆ ಬಳಿಕ ದರ್ಶನ್‌ನ​​​ ಭೇಟಿ ಮಾಡಿದ್ದಾರೆ. 

ನ್ಯಾಯಾಂಗ ಬಂಧನ ವಿಸ್ತರಣೆಗೆ ಕಾರಣ.!
1. ತನಿಖೆಯಲ್ಲಿ ಸಿಕ್ಕ ಟೆಕ್ನಿಕಲ್ ಸಾಕ್ಷಿಗಳಲ್ಲಿ ಆರೋಪಿಗಳ ಪಾತ್ರ ಧೃಡ
2. ಎಲ್ಲಾ ಆರೋಪಿಗಳು ಕೃತ್ಯದಲ್ಲಿ ಭಾಗಿ ಧೃಡ
3. ವೈಜ್ಞಾನಿಕ ಸಾಕ್ಷಿಗಳ FSL ಗೆ ರವಾನೆಯಾಗಿದ್ದು ವರದಿ ಬರಬೇಕಿದೆ
4. ಕೃತ್ಯದಲ್ಲಿ ಇನ್ನೂ ಅನೇಕರ ವಿಚಾರಣೆ ಬಾಕಿ ಇದೆ
5. ಅನೇಕ ಸಾಂದರ್ಭಿಕ ಸಾಕ್ಷಿಗಳ 164 ಹೇಳಿಕೆ ಬಾಕಿ ಇದೆ
6. ಮೃತನ ಕುಟುಂಬಕ್ಕೆ ಆಮಿಷ ಅಥವಾ ಬೆದರಿಕೆ ಸಾಧ್ಯತೆ ಇದೆ
7. FSL ನಲ್ಲಿ ಇನ್ನೂ ಕೆಲವು ವರದಿ ಬರಬೇಕಿದೆ
8. ಮತ್ತಷ್ಟು ಟೆಕ್ನಿಕಲ್ ಸಾಕ್ಷಿಗಳ CFSL ಗೆ ಕಳಿಸಿದ್ದು ವರದಿ ಬಾಕಿ ಇದೆ
9. ಪವಿತ್ರ, ದರ್ಶನ್ ನಿಂದ 17 ಆರೋಪಿಗಳವರೆಗೆ ಕೃತ್ಯದಲ್ಲಿ ಭಾಗಿಯಾಗಿದ್ದು
ಅಷ್ಟು ಮಂದಿಯ ವಿರುದ್ದ ಭೌತಿಕ, ತಾಂತ್ರಿಕ, ಸಾಂದರ್ಭಿಕ ಸಾಕ್ಷಿ ಪತ್ತೆ
10. ಪ್ರತಿ ಆರೋಪಿಯ ಪಾತ್ರದ ಪ್ರತ್ಯೇಕ ವಿಷಯಗಳ ತಿಳಿಯಬೇಕಿದೆ ಕೃತ್ಯದಲ್ಲಿ ಪ್ರತ್ಯೇಕವಾಗಿ ಪಾತ್ರದ ತನಿಖೆ ಬಾಕಿ ಇದೆ
11. ಹಣಬಲ, ಪ್ರಭಾವಿ ಆರೋಪಿಗಳಿಗೆ ಜಾಮೀನು ನೀಡಿದ್ರೆ ತೊಂದರೆ ಸಾಕ್ಷಿಗಳ ಬೆದರಿಕೆ ಹಾಕಿ ಸಾಕ್ಷಿ ನಾಶ ಸಾಧ್ಯತೆ ಇದೆ