ಚಾಮುಂಡೇಶ್ವರಿ ಆಶೀರ್ವಾದ ಪಡೆದ ಕಿಚ್ಚ? ತಾಯಿ ಸನ್ನಿಧಿಯಲ್ಲಿ ನಟನ ನೋಡಲು ಮುಗಿಬಿದ್ದ ಫ್ಯಾನ್ಸ್..!

ಚಾಮುಂಡೇಶ್ವರಿ ಆಶೀರ್ವಾದ ಪಡೆದ ಕಿಚ್ಚ? ತಾಯಿ ಸನ್ನಿಧಿಯಲ್ಲಿ ನಟನ ನೋಡಲು ಮುಗಿಬಿದ್ದ ಫ್ಯಾನ್ಸ್..!

Published : May 29, 2024, 09:31 AM ISTUpdated : May 29, 2024, 09:32 AM IST

ನಟ ಕಿಚ್ಚ ಸುದೀಪ್‌ ಮೈಸೂರಿನ ಚಾಮುಂಡೇಶ್ವರಿ ತಾಯಿ ಆಶೀರ್ವಾದ ಪಡೆದಿದ್ದಾರೆ. ಅಲ್ಲದೇ ನಟನ ನೋಡಲು ಫ್ಯಾನ್ಸ್‌ ಮುಗಿಬಿದ್ದಿದ್ದರು.
 

ಸ್ಯಾಂಡಲ್‌ವುಡ್‌ನ ಬಾದ್ ಷಾ ಕಿಚ್ಚ ಸುದೀಪ್(Sudeep) ಈಗ ಫುಲ್ ಫ್ರೀ. ಯಾಕಂದ್ರೆ ಕಿಚ್ಚನ ಮ್ಯಾಕ್ಸ್ ಸಿನಿಮಾ(Max Movie) ಶೂಟಿಂಗ್ ಮುಗಿದಿದೆ. ಡಬ್ಬಿಂಗ್ ಆಗಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಸಲ ಶುರುವಾಗಿದೆ. ಹೀಗಾಗಿ ಸುದೀಪ್ ಹೋಟೆಲ್ ಇನಾಗ್ರೇಷನ್, ಯಕ್ಷಪಟ್ಲ ಸಂಭ್ರಮ ಅಂತ ಖಾಸಗಿ ಕಾರ್ಯಕ್ರಮಳಿಗೆ ಗೆಸ್ಟ್ ಆಗಿ ಹೋಗುತ್ತಿದ್ದಾರೆ. ಇದರ ಮಧ್ಯೆ ಸುದೀಪ್ ಮೈಸೂರಿನ(Mysore) ಚಾಮುಂಡೇಶ್ವರಿ(Chamundeshwari) ಸನ್ನಿಧಿಗೂ ಹೋಗಿ ಬಂದಿದ್ದಾರೆ. ಭಾರತೀಯ ಚಿತ್ರರಂಗದ ಆರಡಿ ಕಟೌಟ್ ಸುದೀಪ್ ಚಾಮುಂಡೇಶ್ವರಿ ಭಕ್ತ. ಆಗಾಗ ಚಾಮುಂಡಿ ಬೆಟ್ಟ ಹತ್ತೋ ಕಿಚ್ಚ ದೇವಿ ದರ್ಶನ ಪಡೆದು ಧನ್ಯರಾಗುತ್ತಾರೆ. ಈಗ ಮ್ಯಾಕ್ಸ್ ಸಿನಿಮಾ ಶೂಟಿಂಗ್ ಮುಗಿದು ಫ್ರೀ ಆಗಿರೋ ಸುದೀಪ್ ಯಾರಿಗೂ ಗೊತ್ತಾಗದ ಹಾಗೆ ಪತ್ನಿ ಪ್ರಿಯಾ ಜೊತೆ ದೇವಸ್ಥಾನಕ್ಕೆ ಕಿಚ್ಚ ಹೋಗಿದ್ರು. ಆದ್ರೆ ಸುದೀಪ್ ಬರುತ್ತಾರೆ ಅಂತ ಸುದ್ದಿ ಅದ್ ಹೇಗೆ ಲೀಕ್ ಆಯ್ತೋ ಗೊತ್ತಿಲ್ಲ. ಕಿಚ್ಚನ ನೋಡಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ರು. ಕೊನೆಗೆ ಕಿಚ್ಚ ಹರ ಸಾಹಸ ಮಾಡಿ ಅಭಿಮಾನಿಗಳ ಕಣ್ಣು ತಪ್ಪಿಸಿಕೊಂಡು ಬರಬೇಕಾಯ್ತು. ನಟ ದರ್ಶನ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತನ್ನ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಈಗ ಸಿನಿ ಪ್ರೇಕ್ಷಕ ಕಾಯುತ್ತಿರೋದು ಕಿಚ್ಚನ ಸಿನಿ ಅಪ್ಡೇಟ್ಗಾಗಿ ಯಾಕಂದ್ರೆ ಸುದೀಪ್ರ ಮ್ಯಾಕ್ಸ್ ವರ್ಕ್ ಮುಗಿದಿದೆ. ರಿಲೀಸ್ ಡೇಟ್ ಅನೌನ್ಸ್ ಮಾಡಬೇಕಿದೆ. ಅದನ್ನ ವೇರಿ ಶಾರ್ಟ್ಲಿ ಅನೌನ್ಸ್ ಸುದೀಪ್ ಅನೌನ್ಸ್ ಮಾಡುತ್ತಾರೆ. ಅದಕ್ಕೂ ಮೊದಲೇ ಚಾಮುಂಡೇಶ್ವರಿ ಆಶೀರ್ವಾದ ಪಡೆದು ಬಂದಿದ್ದಾರೆ ಬಾದ್ ಷಾ.

ಇದನ್ನೂ ವೀಕ್ಷಿಸಿ:  ರೈತರ ನೋವನ್ನ ಕೇಳುವ ಕೃಷಿ ಸಚಿವರೇ ಎಲ್ಲಿದ್ದಿರಪ್ಪಾ..! ಗ್ಯಾರಂಟಿ ಕೊಟ್ಟು..ಸುಲಿಗೆ ಮಾಡ್ತಿದೆಯಾ ರಾಜ್ಯ ಸರ್ಕಾರ..?

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!