Sakath: ಬೆಳ್ಳಿ ಪರದೆ ಮೇಲೆ ನಕ್ಕು ನಗಿಸಲಿದ್ದಾನೆ ಗೋಲ್ಡನ್​ ಸ್ಟಾರ್​ ಗಣೇಶ್

Sakath: ಬೆಳ್ಳಿ ಪರದೆ ಮೇಲೆ ನಕ್ಕು ನಗಿಸಲಿದ್ದಾನೆ ಗೋಲ್ಡನ್​ ಸ್ಟಾರ್​ ಗಣೇಶ್

Suvarna News   | Asianet News
Published : Nov 24, 2021, 01:57 PM IST

200 ರೂಪಾಯಿ ಹಿಡಿದುಕೊಂಡು ಬೆಂಗಳೂರಿಗೆ ಬಂದವನು ನಾನು. ದೇವರು ತುಂಬಾ ಕೊಟ್ಟುಬಿಟ್ಟಿದ್ದಾನೆ. ಪ್ರತೀಕ್ಷಣ ಖುಷಿಯಾಗಿರಬೇಕು ಅಂತ ಬಯಸುತ್ತೇನೆ. ಯಾರಿಗೆ ಸಿಕ್ಕರೂ ಅವರಿಂದ ಕಲಿಯಬೇಕು ಅಥವಾ ಕಲಿಸುತ್ತಿರಬೇಕು ಎಂದು ನಂಬಿಕೊಂಡಿದ್ದೇನೆ. ಈ ಸಿನಿಮಾ ನಿಮಗೆ ಖುಷಿ ಕೊಡಲಿದೆ ಎಂದರು ಗಣೇಶ್. 
 

ನಿರ್ದೇಶಕ ಸಿಂಪಲ್​ ಸುನಿ (Simple Suni) ಮತ್ತು  ಗೋಲ್ಡನ್​ ಸ್ಟಾರ್​ ಗಣೇಶ್ (Golden Star Ganesh)​ ಅಭಿನಯದ 'ಸಖತ್' (Sakath) ಸಿನಿಮಾ ಇದೇ ತಿಂಗಳ ನವೆಂಬರ್ 26ಕ್ಕೆ ಬಿಡುಗಡೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಚಿತ್ರದ ಪ್ರೀ ರಿಲೀಸ್‌ ಈವೆಂಟ್‌ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಸಿಂಪಲ್‌ ಸುನಿ, 'ಇದು ಎರಡೂವರೆ ಗಂಟೆ ನಗಿಸುವ ಸಿನಿಮಾ. ಪುಟಾಣಿ ಮಗುವಿನಿಂದ ಹಿಡಿದು ಅಜ್ಜ, ಅಜ್ಜಿಯವರೆಗೆ ಎಲ್ಲರೂ ನೋಡಬಹುದಾದ ಸಿನಿಮಾ' ಎಂದರು. ನಿರ್ಮಾಪಕರಾದ ನಿಶಾ ವೆಂಕಟ್‌ ಕೋಣಂಕಿ ಮತ್ತು ವೆಂಕಟ್‌ ನಾರಾಯಣ್‌ ದಂಪತಿ ತಮ್ಮ ಸಂಸ್ಥೆ ನಿರ್ಮಿಸುತ್ತಿರುವ ಮೊದಲ ಸಿನಿಮಾ ಬಿಡುಗಡೆ ಖುಷಿಯನ್ನು ಹಂಚಿಕೊಂಡರು.

Sakath: ಗಣೇಶ್-ಸುರಭಿ ಕಾಂಬಿನೇಷನ್​ನ 'ಶುರುವಾಗಿದೆ' ಸಾಂಗ್ ರಿಲೀಸ್

ಗಣೇಶ್‌, '200 ರೂಪಾಯಿ ಹಿಡಿದುಕೊಂಡು ಬೆಂಗಳೂರಿಗೆ ಬಂದವನು ನಾನು. ದೇವರು ತುಂಬಾ ಕೊಟ್ಟುಬಿಟ್ಟಿದ್ದಾನೆ. ಪ್ರತೀಕ್ಷಣ ಖುಷಿಯಾಗಿರಬೇಕು ಅಂತ ಬಯಸುತ್ತೇನೆ. ಯಾರಿಗೆ ಸಿಕ್ಕರೂ ಅವರಿಂದ ಕಲಿಯಬೇಕು ಅಥವಾ ಕಲಿಸುತ್ತಿರಬೇಕು ಎಂದು ನಂಬಿಕೊಂಡಿದ್ದೇನೆ. ಈ ಸಿನಿಮಾ ನಿಮಗೆ ಖುಷಿ ಕೊಡಲಿದೆ' ಎಂದರು. ನಿರ್ಮಾಪಕ ಸುಪ್ರೀತ್‌, ನಾಯಕ ನಟಿಯರಾದ ನಿಶ್ವಿಕಾ ನಾಯ್ಡು, ಸುರಭಿ ಪುರಾಣಿಕ್‌ ಸಂತೋಷವಾಗಿದ್ದರು. ರಂಗಾಯಣ ರಘು, ಸಾಧು ಕೋಕಿಲ, ಗಿರಿ, ಧರ್ಮಣ್ಣ ಮುಂತಾದ ಕಲಾವಿದರ ತಾರಾಬಳಗ ಚಿತ್ರಕ್ಕಿದ್ದು, ವಿಶೇಷವಾಗಿ ಗಣೇಶ್ ಪುತ್ರ ವಿಹಾನ್ (Vihan) ಗಣೇಶ್ ಅವರ ಬಾಲ್ಯದ ದಿನಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
Read more