ಸೂರಿ 'ಕಾಗೆ ಬಂಗಾರ'ಕ್ಕೆ ಮುಹೂರ್ತ ಫಿಕ್ಸ್: ಚಿತ್ರಕ್ಕೆ ದುನಿಯಾ ವಿಜಯ್ ಮಗಳು ನಾಯಕಿ!

ಸೂರಿ 'ಕಾಗೆ ಬಂಗಾರ'ಕ್ಕೆ ಮುಹೂರ್ತ ಫಿಕ್ಸ್: ಚಿತ್ರಕ್ಕೆ ದುನಿಯಾ ವಿಜಯ್ ಮಗಳು ನಾಯಕಿ!

Published : May 16, 2024, 05:05 PM IST

ಕಾಗೆ ಬಂಗಾರ ಸಿನಿಮಾ ಆರಂಭ ಆಗುತ್ತಿದೆ. ಈ ಚಿತ್ರಕ್ಕೆ ನಾಯಕ ನಾಯಕಿ ಕೂಡ ಫೈನಲ್ ಆಗಿದ್ದಾರೆ. ಸೂರಿ ಅಭಿಮಾನಿಗಳು ಬಹಳ ವರ್ಷಗಳಿಂದ ಕಾಯುತ್ತಿರೋ ಸಿನಿಮಾ ಇದು. 
 

ನಿರ್ದೇಶಕ ದುನಿಯಾ ಸೂರಿ ಬಹಳ ವರ್ಷಗಳಿಂದ 'ಕಾಗೆ ಬಂಗಾರ' ಅನ್ನೋ ಸಿನಿಮಾ ಮಾಡೋದಾಗಿ ಹೇಳುತ್ತಲೇ ಬರುತ್ತಿದ್ರು. ಟೈಟಲ್​​ನಿಂದಲೇ ಈ ಸಿನಿಮಾ ಬಗ್ಗೆ ಭಾರಿ ಟಾಕ್ ಆಗಿತ್ತು. ಆದ್ರೆ ಕಾಗೆ ಬಂಗಾರ ಶುರುವಾಗಿರಲಿಲ್ಲ. ಭಟ್ ಈಗ ಕಾಗೆ ಬಂಗಾರಕ್ಕೆ ಒಂದು ರೂಪ ಸಿಗಲಿದೆ. ಯಾಕಂದ್ರೆ ಕಾಗೆ ಬಂಗಾರ ಸಿನಿಮಾ ಆರಂಭ ಆಗುತ್ತಿದೆ. ಈ ಚಿತ್ರಕ್ಕೆ ನಾಯಕ ನಾಯಕಿ ಕೂಡ ಫೈನಲ್ ಆಗಿದ್ದಾರೆ. ಸೂರಿ ಅಭಿಮಾನಿಗಳು ಬಹಳ ವರ್ಷಗಳಿಂದ ಕಾಯುತ್ತಿರೋ ಸಿನಿಮಾ ಇದು. ಮುಂದಿನ ತಿಂಗಳು ಕಾಗೆ ಬಂಗಾರ ಸಿನಿಮಾಕ್ಕೆ ಮಹೂರ್ಥ ನಡೆಯಲಿದೆ. ಈ ಕಾಗೆ ಬಂಗಾರಕ್ಕೆ ನಾಯಕ ನಾಯಕಿ ಕೂಡ ಆಯ್ಕೆ ಆಗಿದ್ದಾರೆ. ಸೂರಿಯ ಈ ಕಾಗೆ ಬಂಗಾರದಲ್ಲಿ ಹೀರೋ ಆಗಿ ಕಿಸ್ ಸಿನಿಮಾದ ಸ್ಟಾರ್ ವಿರಾಟ್​ ನಟಿಸುತ್ತಿದ್ದಾರೆ. 

ಮತ್ತೊಂದು ಇಂಟ್ರೆಸ್ಟಿಂಗ್ ಅಂದ್ರೆ ನಾಯಕಿಯಾಗಿ ನಟ ದುನಿಯಾ ವಿಜಯ್ ಮಗಳು ರಿತನ್ಯಾ ಅಭಿನಯಿಸುತ್ತಿದ್ದಾರೆ. ಸೂರಿಯ ಕಾಗೆ ಬಂಗಾರಲ್ಲಿ ದುನಿಯಾ ವಿಜಯ್ ಮೊದಲ ಮಗಳು ರಿತನ್ಯಾ ನಾಯಕಿ ಅನ್ನೋದು ಈಗ ಸ್ಯಾಂಡಲ್​ವುಡ್​​ನಲ್ಲಿ ಟಾಕ್​ ಆಫ್​ ದಿ ಟೌನ್. ಇಂಟ್ರೆಸ್ಟಿಂಗ್ ಅಂದ್ರೆ ನಟ ದುನಿಯಾ ವಿಜಯ್​ರನ್ನ ಚಿತ್ರರಂಗಕ್ಕೆ ಪರಿಚಯಿಸಿದ್ದು ಕೂಡ ಇದೇ ಸೂರಿ. ದುನಿಯಾ ಸಿನಿಮಾದಲ್ಲಿ ವಿಜಯ್​​ಗೆ ಸ್ಟಾರ್​ಗಿರಿ ತಂದು ಕೊಟ್ರು. ಈಗ ವಿಜಯ್ ಮಗಳು ರಿತನ್ಯಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ವಿಜಯ್ ಪುತ್ರಿ ರಿತನ್ಯಾ ಸಿನಿಮಾ ರಂಗಕ್ಕೆ ಪರಿಚಯ ಆಗೋ ಮೊದಲು ಮೋನಿಕಾ ಎಂದು ಹೆಸರಿತ್ತು. 

ಆದ್ರೆ ಈಗ ರಿತನ್ಯಾ ಎಂದು ಮರು ನಾಮಕರಣ ಮಾಡಿಕೊಂಡಿದ್ದಾರೆ. ಈ ಹೆಸರು ಬಂದ ಮೇಲೆ ವಿಜಯ್ ಪುತ್ರಿಗೆ ಭಾರಿ ಆಫರ್​ಗಳು ಬರುತ್ತಿವೆ. 9 ವರ್ಷಗಳ ಹಿಂದೆ ಸೂರಿ 'ಕೆಂಡಸಂಪಿಗೆ' ಸಿನಿಮಾ ಮಾಡಿ ಗೆದ್ದಿದ್ದ ಸೂರಿ ಈ ಚಿತ್ರದ ಪ್ರೀಕ್ವೆಲ್ ಹಾಗೂ ಸೀಕ್ವೆಲ್ ಮಾಡುವುದಾಗಿ ಹೇಳಿದ್ರು. ಪ್ರೀಕ್ವೆಲ್ ಕಥೆಗೆ 'ಕಾಗೆ ಬಂಗಾರ' ಎನ್ನುವ ಟೈಟಲ್ ಫಿಕ್ಸ್ ಮಾಡಿದ್ರು. ಸೀಕ್ವೆಲ್ ಗೆ 'ಬ್ಲ್ಯಾಕ್ ಮ್ಯಾಜಿಕ್' ಎಂದು ಟೈಟಲ್​ ಇಟ್ಟಿದ್ರು. ಆದ್ರೆ 'ಕಾಗೆ ಬಂಗಾರ' ಸಿನಿಮಾ ತಡವಾಗುತ್ತಲೇ ಇತ್ತು. ಈಗ ಸಿನಿಮಾ ಆರಂಭ ಆಗುತ್ತಿದೆ. ಈ ಸಿನಿಮಾವನ್ನ ಜಯಣ್ಣ ಕಂಬೈನ್ಸ್ ಬ್ಯಾನರ್ನಲ್ಲಿ ಜಯಣ್ಣ ಬೋಗೇಂಧ್ರ ನಿರ್ಮಾಣ ಮಾಡುತ್ತಿದ್ದಾರೆ. 

04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
Read more