ಹೀರೋಯಿನ್ ಮನೆಗೆ ಹೋಗಿ ವಾರ್ನಿಂಗ್ ಕೊಟ್ಟ ನಟ: ಸೂಪರ್ ಸ್ಟಾರ್ ಆ ನಟಿಗೆ ವಾರ್ನ್ ಮಾಡಿದ್ದೇಕೆ..?

ಹೀರೋಯಿನ್ ಮನೆಗೆ ಹೋಗಿ ವಾರ್ನಿಂಗ್ ಕೊಟ್ಟ ನಟ: ಸೂಪರ್ ಸ್ಟಾರ್ ಆ ನಟಿಗೆ ವಾರ್ನ್ ಮಾಡಿದ್ದೇಕೆ..?

Published : Sep 26, 2023, 10:28 AM IST

ನಟಿ ಅಮಲಾ ಪೌಲ್‌ ಮನೆಗೆ ಹೋಗಿ ನಟ ರಜನಿಕಾಂತ್‌ ನನ್ನ ಅಳಿಯನಿಂದ ದೂರವಿರು ಎಂದು ವಾರ್ನಿಂಗ್​ ನೀಡಿದ್ದರಂತೆ. ಹೀಗೆಂದು ಸೆಯ್ಯಾರು ಬಾಲು ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ.
 

ಸಿನಿಮಾ ಜೀವನ ಮಾತ್ರವಲ್ಲದೆ ಅಮಲಾ ಪೌಲ್‌ ವೈಯುಕ್ತಿಕ ಜೀವನದಿಂದಲೂ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಅಮಲಾ(Amala Paul) ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವಾಗಲೇ ನಿರ್ದೇಶಕ ಎ.ಎಲ್​. ವಿಜಯ್​ ಅವರನ್ನು ಮದುವೆಯಾದರು. ಆ ಬಳಿಕವೂ ನಟನೆಯನ್ನು ಮುಂದುವರಿಸಿದರು. ಆದರೆ ವಿಜಯ್ ಕುಟುಂಬಕ್ಕೆ ಇದು ಇಷ್ಟವಿಲ್ಲದ ಕಾರಣ ಇಬ್ಬರ ದಾಂಪತ್ಯ ಡಿವೋರ್ಸ್‌ನಲ್ಲಿ ಕೊನೆಗೊಂಡಿತು. ಆದರೆ, ಅಮಲಾ ಮತ್ತು ಧನುಷ್ ನಡುವೆ ತೀರಾ​ ಆಪ್ತತೆ ಇದ್ದಿದ್ದೇ ಡಿವೋರ್ಸ್‌ಗೆ ಕಾರಣ ಎಂಬ ಸುದ್ದಿ ಸಹ ಭಾರೀ ಚರ್ಚೆಯಾಯಿತು. 'ವೇಲೆಯಿಲ್ಲ ಪಟ್ಟದಾರಿ' ಸಿನಿಮಾದಲ್ಲಿ ಅಮಲಾ-ಧನುಷ್​ ಒಟ್ಟಿಗೆ ನಟಿನೆ ಮಾಡಿದ್ದರು. ಈ ಸಿನಿಮಾದಿಂದಲೇ ಇಬ್ಬರು ಆಪ್ತರಾಗಿದ್ದು, ಮದುವೆಯಾಚೆಗಿನ ಸಂಬಂಧಕ್ಕೂ ಕಾರಣವಾಯ್ತು ಎಂಬ ಮಾತು ಕೇಳಿ ಬಂದಿತ್ತು. ಮಾತ್ರವಲ್ಲ, ಇತ್ತೀಚೆಗಷ್ಟೇ ಕಾಲಿವುಡ್​ನ ಖ್ಯಾತ ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ ಸೆಯ್ಯಾರು ಬಾಲು ಅವರು ಸಂದರ್ಶನವೊಂದರಲ್ಲಿ, ಅಮಲಾಗೆ ಸೂಪರ್​ಸ್ಟಾರ್​ ರಜಿನಿಕಾಂತ್( Rajinikanth)​ ವಾರ್ನಿಂಗ್​ ಮಾಡಿದ್ದರು ಎಂಬುದನ್ನು ಬಹಿರಂಗಪಡಿಸಿದ್ದರು. ಧನುಷ್​(Dhanush) ಮತ್ತು ಅಮಲಾ ನಡುವೆ ಆಪ್ತತೆ ಇರುವ ವಿಚಾರ ಧನುಷ್​ ಅವರ ಮಾವ ರಜನಿಕಾಂತ್​ಗೆ ತಿಳಿದಿತ್ತು. ಹೀಗಾಗಿ ಅಮಲಾ ಅವರ ಮನೆಗೆ ತೆರಳಿದ ರಜಿನಿಕಾಂತ್​, ಆಕೆಗೆ ವಾರ್ನಿಂಗ್​ ನೀಡಿದ್ದರು ಎಂದು ಸೆಯ್ಯಾರು ಬಾಲು ಮಾಹಿತಿ ನೀಡಿದ್ದರು.

ಇದನ್ನೂ ವೀಕ್ಷಿಸಿ:  ಕೇಸರಿ ಶಾಲು ಹೊದ್ದ ಶಾರೂಖ್ ಖಾನ್‌: ಗಣಪತಿ ಪೂಜೆಯಲ್ಲಿ ನಟ ಭಾಗಿ !

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
Read more