'ವಿಕ್ರಾಂತ್ ರೋಣ' ಪರಾಕ್ರಮಕ್ಕೆ ಜೈ ಹೋ ಎಂದ ಚಿತ್ರರಂಗದ ಬಿಗ್ ಸ್ಟಾರ್ಸ್!

Jul 29, 2022, 4:43 PM IST

ಭಾರತದ ಜೊತೆ 50 ದೇಶದಲ್ಲಿ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನ ಆಗುತ್ತಿದೆ. ಈ ಸಿನಿಮಾದಲ್ಲಿ ಕಿಚ್ಚನನ್ನ ನೋಡಿದ ಭಾರತೀಯ ಚಿತ್ರರಂಗದ ಸೆಲೆಬ್ರೆಟಿಗಳು ಹೆಬ್ಬುಲಿಗೆ ಶುಭಾಷಯಗಳ ಹೂ ಮಳೆ ಸುರಿದ್ದಾರೆ.

ಭಾರತೀಯ ಚಿತ್ರರಂಗದ ಟಾಪ್ ಡೈರೆಕ್ಟರ್ ಎಸ್,ಎಸ್ ರಾಜಮೌಳಿ ಹಾಗು ಕರ್ನಾಟಕ ಪ್ರೈಡ್ ಪ್ರಶಾಂತ್ ನೀಲ್ ಸುದೀಪ್ರ ವಿಕ್ರಾಂತ್ ರೋಣ ಸಿನಿಮಾವನ್ನ ಕೊಂಡಾಡಿದ್ದಾರೆ. ಟ್ವೀಟ್ ಮಾಡಿರೋ ರಾಜಮೌಳಿ, ಪ್ರಯೋಗಗಳನ್ನು ಮಾಡುವಲ್ಲಿ ಸವಾಲುಗಳನ್ನು ಸ್ವೀಕರಿಸುವಲ್ಲಿ ಸುದೀಪ್ ಮೊದಲಿಗರು. ವಿಶ್ಯುವಲ್ಸ್ ಅದ್ಭುತವಾಗಿದೆ ಸುದೀಪ್ ತಂಡಕ್ಕೆ ನನ್ನ ಶುಭಾಶಯ ಅಂತ ಬರೆದುಕೊಂಡ್ರೆ ಪ್ರಶಾಂತ್ ನೀಲ್ ದೃಶ್ಯ ವೈಭವದಂತಿರುವ ವಿಕ್ರಾಂತ್ ರೋಣ ಚಿತ್ರದಿಂದ ಕಿಚ್ಚ ಸುದೀಪ್ ಸರ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಎಲ್ಲ ಯಶಸ್ಸು ಸಿಗಲಿ ಎಂದು ಹರಿಸಿದ್ದಾರೆ.

ವಿಕ್ರಾಂತ್ ರೋಣನ ಅಬ್ಬರಕ್ಕೆ ದಾಖಲೆಗಳು ಉಡೀಸ್; ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್!

 ಅಷ್ಟೆ ಅಲ್ಲ ಕಾಲಿವುಡ್ ಸ್ಟಾರ್ ಆರ್ಯ, ಟಾಲಿವುಡ್ ಸ್ಟಾರ್ ಕಾರ್ತಿ, ಬಾಲಿವುಡ್ ನಟಿ ಜೆನಿಲಿಯಾ, ಕನ್ನಡ ನಟಿ ರಮ್ಯಾ, ಡಾಲಿ ಧನಂಜಯ್. ರಕ್ಷಿತ್ ಶೆಟ್ಟಿ, ಗಣೇಶ್, ರಮೇಶ್ ಅರವಿಂದ್ ಸೇರಿದಂತೆ ಹಲವು ಸ್ಟಾರ್ ಕಲಾವಿಧರು ಕಿಚ್ಚನ ಸಿನಿಮಾಗೆ ಶುಭ ಹಾರೈಸಿದ್ದಾರೆ.