Sumalatha V/S Chaluvaraya Swamy: ಯಾರು “ನಾಟಿ”.. ಯಾರು “ಹೈಬ್ರೀಡ್”..?  ಏನಿದು ಹೊಸ ಕಥೆ..?

Sumalatha V/S Chaluvaraya Swamy: ಯಾರು “ನಾಟಿ”.. ಯಾರು “ಹೈಬ್ರೀಡ್”..? ಏನಿದು ಹೊಸ ಕಥೆ..?

Published : Feb 22, 2024, 06:27 PM IST

ನಾಟಿ Vs ಹೈಬ್ರೀಡ್ ಯುದ್ಧಕ್ಕೆ ಕಿಚ್ಚು ಹೊತ್ತಿಸಿದ  ಮಂಡ್ಯದ ಪೈಲ್ವಾನ್..!
ನಾಗಮಂಗಲದ ಆ "ನಾಟಿ" ತಳಿಯೇ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ..!
ನಾಟಿ Vs ಹೈಬ್ರೀಡ್ ಮಧ್ಯೆ ನಡೆಯಲಿದ್ಯಂತೆ ಸ್ವಾಭಿಮಾನದ ಯುದ್ಧ..!

ಮಂಡ್ಯ ಅಂದ್ರೆ ಸ್ವಾಭಿಮಾನದ ಕೋಟೆ.. ರಾಜಕಾರಣ ಅಂತ ಬಂದ್ರೆ ಮಂಡ್ಯದಲ್ಲಿ ನಡೆಯೋದು ರಣರಣ ಬೇಟೆ. ಜಿದ್ದು-ಗುದ್ದಿನ, ಜಿದ್ದಾಜಿದ್ದಿನ ರಾಜಕೀಯಕ್ಕೆ ಮಂಡ್ಯ ಹೆಸರುವಾಸಿ. ಮಂಡ್ಯದಲ್ಲಿ(Mandya) ರಾಜಕಾರಣದ ಕಿಚ್ಚು ಹೊತ್ತಿಕೊಳ್ತು ಅಂದ್ರೆ ಅದನ್ನು ಇಡೀ ಇಂಡಿಯಾವೇ ತಿರುಗಿ ನೋಡತ್ತೆ. ಅಂಥಾ ಮಂಡ್ಯದ ನೆಲದಲ್ಲಿ ಶುರುವಾಗಿದೆ ನಾಟಿ Vs ಹೈಬ್ರಿಡ್ ಕದನ. ಲೋಕಸಭಾ ಚುನಾವಣೆಯಲ್ಲಿ(Loksabha election) ಈ ಬಾರಿಯೂ ಮಂಡ್ಯ ಕ್ಷೇತ್ರವೇ ಸೆಂಟರ್ ಆಫ್ ಅಟ್ರಾಕ್ಷನ್ ಆಗೋ ಎಲ್ಲಾ ಸೂಚನೆಗಳು ಸಿಗ್ತಾ ಇವೆ. ಕಳೆದ ಬಾರಿ ಮಂಡ್ಯದಲ್ಲಿ ನಡೆದ ಮಹಾಯುದ್ಧ ಹೇಗಿತ್ತು ಅನ್ನೋದನ್ನು ಇಡೀ ದೇಶವೇ ನೋಡಿದೆ. ಅವತ್ತು ಸ್ವಾಭಿಮಾನದ ಯುದ್ಧ, ಈ ಬಾರಿ ನಾಟಿ vs ಹೈಬ್ರಿಡ್ ಕಾಳಗ. ಮಂಡ್ಯ ರಣಕಣಕ್ಕೆ ಹೀಗೊಂದು ಟ್ವಿಸ್ಟ್ ಕೊಟ್ಟು, ಯುದ್ಧಕ್ಕೂ ಮೊದಲೇ ಕದನ ಕಾವೇರುವಂತೆ ಮಾಡಿದ್ದಾರೆ ಮಂಡ್ಯ ಜಿಲ್ಲಾ ಉಸ್ತುವಾರಿ ಮಂತ್ರಿ, ನಾಗಮಂಗಲ ಶಾಸಕ ಚಲುವರಾಯಸ್ವಾಮಿ(Chaluvarayaswamy). ಈ ಬಾರಿ ಮತ್ತೊಂದು ರಣರೋಚಕ ಫೈಟ್'ಗೆ ಸಾಕ್ಷಿಯಾಗಲಿದೆ ಮಂಡ್ಯ ಲೋಕಸಭಾ ಕ್ಷೇತ್ರ. ಹಾಗ್ ನೋಡಿದ್ರೆ ಪ್ರತೀ ಚುನಾವಣೆಯಲ್ಲೂ ಇಂಡಿಯಾದ ಗಮನ ಸೆಳೆಯೋದು ಮಂಡ್ಯದ ಜಾಯಮಾನ. ಅಂಥಾ ರಣರಣ ಚರಿತ್ರೆಯಲ್ಲಿ ರಣರೋಚಕ ಅಧ್ಯಾಯವೊಂದನ್ನು ಬರೆದವರು ರೆಬೆಲ್ ಲೇಡಿ ಸುಮಲತಾ ಅಂಬರೀಶ್(Sumalata Ambarish). 2019ರಲ್ಲಿ ಸ್ವಾಭಿಮಾನದ ಕಹಳೆಯೂದಿ ದಳಪತಿಗಳನ್ನು ಮಟ್ಟ ಹಾಕಿದ್ದ ಸುಮಲತಾ, ಮತ್ತೊಮ್ಮೆ ಮಂಡ್ಯದಿಂದಲೇ ಸ್ಪರ್ಧೆಗೆ ರೆಡಿಯಾಗ್ತಿದ್ದಾರೆ.

ಇದನ್ನೂ ವೀಕ್ಷಿಸಿ:  Congress: ಯಾರಿಗೆ ಸಿಗುತ್ತೆ ಅರಮನೆ ನಗರಿಯ ಕಾಂಗ್ರೆಸ್ ಟಿಕೆಟ್..? ಯತೀಂದ್ರ ಸ್ಪರ್ಧೆಗೆ ಸಿದ್ದರಾಮಯ್ಯ ಬೆಂಬಲಿಗರ ಒತ್ತಡ !

24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more