ಉರಿಗೌಡ - ನಂಜೇಗೌಡ ವಾರ್‌: ಬಿಜೆಪಿ ವಿರುದ್ಧ ಎಚ್‌ಡಿಕೆ ಕಿಡಿ...

Mar 19, 2023, 1:22 PM IST

ರಾಜ್ಯದಲ್ಲಿ ಟಿಪ್ಪುವನ್ನು ಕೊಂದಿದ್ದಾರೆಂಬ ಉರಿಗೌಡ ಮತ್ತು ನಂಜೇಗೌಡರ ಕುರಿತ ಸಿನಿಮಾವನ್ನು ಮಾಡಲು ಮುನಿರತ್ನ ಮುಂದಾಗಿದ್ದಾರೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು,  ಉರಿಗೌಡ ನಂಜೇಗೌಡ ಕಥೆ ಕಟ್ಟಿಕೊಂಡು ಇರ್ತೀರಾ, ಕಾಲ್ಪನಿಕ ವಿಚಾರವನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ.  ಉರಿಗೌಡ ಮತ್ತು ನಂಜೇಗೌಡರ  ಪ್ರತಿಮೆ ಅಷ್ಟೇ ಅಲ್ಲ ಬೇಕಿದ್ರೆ ದೊಡ್ಡ ದೇವಸ್ಥಾನವನ್ನೆ ನಿರ್ಮಾಣ ಮಾಡಲಿ, ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ ಸಮುನ್ನೆ ಆಟವಾಡುತ್ತಿದ್ದಾರೆ.  ಸುಳ್ಳುಗಳಿಂದಲೇ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ಕರ್ನಾಟಕವನ್ನು  ಅಲ್ಲೋಲಕಲ್ಲೋಲ ಮಾಡುತ್ತಿದ್ದಾರೆ.  ಸ್ವಾಭಿಮಾನಿ ಒಕ್ಕಲಿಗರನ್ನು ಹೇಗಾದರೂ ಹಳ್ಳ ಹಿಡಿಸಲೆಬೇಕೆಂಬ ಹಿಡೆನ್‌ ಅಜೆಂಡಾ ಬಿಜೆಪಿದು ಎಂದು ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.