4 ದಿಕ್ಕಿನ ಯುದ್ಧ..ಸಿದ್ದು ಟಾರ್ಗೆಟ್‌ಗೆ ಬೀಳುತ್ತಾ ಬೇಟೆ..? ಉತ್ತರದ 4 ರಣಭೂಮಿಗಳ ಮೇಲೆ ದಕ್ಷಿಣಾಪಥೇಶ್ವರನ ಕಣ್ಣು.!

4 ದಿಕ್ಕಿನ ಯುದ್ಧ..ಸಿದ್ದು ಟಾರ್ಗೆಟ್‌ಗೆ ಬೀಳುತ್ತಾ ಬೇಟೆ..? ಉತ್ತರದ 4 ರಣಭೂಮಿಗಳ ಮೇಲೆ ದಕ್ಷಿಣಾಪಥೇಶ್ವರನ ಕಣ್ಣು.!

Published : May 02, 2024, 06:09 PM ISTUpdated : May 02, 2024, 06:10 PM IST

ಶ್ರೀರಾಮುಲು ರಾಜಕೀಯ ಪುನರ್ಜನ್ಮಕ್ಕೆ ಸಿದ್ದು ಅಡ್ಡಗಾಲು ಹಾಕ್ತಾರಾ..?
ಲೋಕಸಭಾ ಚದುರಂಗದಲ್ಲಿ ಕಾಂಗ್ರೆಸ್ ರಣವಿಕ್ರಮನ ರೋಚಕ ದಾಳ..!
ಬಳ್ಳಾರಿ+3 ರಣಭೂಮಿ..“ಚತುರ”ರಾಮಯ್ಯನ  ಚತುಷ್ಟಯ ವ್ಯೂಹ..!
 

ಉತ್ತರದಲ್ಲಿ ದಕ್ಷಿಣಾ ಪಥೇಶ್ವರನ ಸಿದ್ದಾಶ್ವಮೇಧ. ಇದು ಲೋಕಸಭಾ ಅಖಾಡದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ(Siddaramaiah) ಅಶ್ವಮೇಧ. ಬಾದಾಮಿಯ ವೈರಿಯನ್ನು ಬಳ್ಳಾರಿಯಲ್ಲಿ(Ballari) ಸೋಲಿಸಲು ಸಿದ್ಧವಾಗಿದೆ ಸಿದ್ದತಂತ್ರ. 14ರಲ್ಲಿ 4 ರಣಭೂಮಿಗಳೇ ಸಿದ್ದರಾಮಯ್ಯನವರ ಟಾರ್ಗೆಟ್. 14 ವರ್ಷಗಳ ಹಿಂದೆ. ಆ ದಿನ ವಿಧಾನಸಭೆ ನಡುಗಿ ಹೋಗಿತ್ತು. ತಾಕತ್ತಿದ್ರೆ ಬಳ್ಳಾರಿ ಬಾ, ನೋಡ್ಕೋತೀವಿ ಅಂತ ವಿಧಾನಸಭೆಯಲ್ಲೇ ಸವಾಲ್ ಹಾಕಿದ್ರು ಗಣಿಧಣಿ ಜನಾರ್ಧನ ರೆಡ್ಡಿ. ತೋಳು ತಟ್ಟಿ ಸವಾಲು ಸ್ವೀಕರಿಸಿದ್ದ ಸಿದ್ದರಾಮಯ್ಯ, ಬೆಂಗಳೂರಿಂದ ಬಳ್ಳಾರಿಗೆ ಪಾದಯಾತ್ರೆ ಹೊರಟೇ ಬಿಟ್ಟಿದ್ರು. ಅವತ್ತು ರೆಡ್ಡಿಗಳು ಕಟ್ಟಿದ್ದ ರಿಪಬ್ಲಿಕ್ ಆಫ್ ಬಳ್ಳಾರಿ ಕೋಟೆಯನ್ನು ಕುಟ್ಟಿ ಕೆಡವಿದ್ದು ಸಿದ್ದರಾಮಯ್ಯನವರ ಇದೇ ಪಾದಯಾತ್ರೆ. ಅಲ್ಲಿಂದ ಬಳ್ಳಾರಿ ರಾಜಕಾರಣದ ದಿಕ್ಕೇ ಬದಲಾಗಿ ಹೋಯ್ತು. ಬಿಜೆಪಿ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲೀಗ ಕಾಂಗ್ರೆಸ್(Congress) ಬಾವುಟ ಹಾರಾಡ್ತಾ ಇದೆ. ಆ ಐತಿಹಾಸಿಕ ಬಳ್ಳಾರಿ ಪಾದಯಾತ್ರೆಯನ್ನು ಲೋಕಸಭಾ ರಣರಂಗದಲ್ಲಿ(Lok Sabha elections 2024) ಸಿದ್ದರಾಮಯ್ಯನವರು ಮತ್ತೆ ನೆನಪು ಮಾಡಿಕೊಂಡಿದ್ದಾರೆ. ಇದು ದಕ್ಷಿಣಾಪಥೇಶ್ವರ ಸಿದ್ದರಾಮಯ್ಯನವರ ಉತ್ತರ ದಂಡಯಾತ್ರೆಯ ಇಂಟ್ರೆಸ್ಟಿಂಗ್ ಸ್ಟೋರಿ. ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕರ್ನಾಟಕದ 14 ಅಖಾಡಗಳಲ್ಲಿ ಯುದ್ಧ ಮುಗಿದ್ದದ್ದಾಯ್ತು. ಈಗ ಉತ್ತರ ಕರ್ನಾಟಕದ 14 ಕ್ಷೇತ್ರಗಳ ಸರದಿ. ಈ 14 ಲೋಕಸಭಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯನವರು ಆ ನಾಲ್ಕು ರಣಭೂಮಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲಿ ಸಿದ್ದಾಶ್ವಮೇಧದ ಕುದುರೆ ಆಗ್ಲೇ ರಣಘೋಷವನ್ನೂ ಮೊಳಗಿಸಿ ಬಿಟ್ಟಿದೆ. ಯಾವ ಕಾರಣಕ್ಕೂ ಆ ನಾಲ್ಕು ಕ್ಷೇತ್ರಗಳಲ್ಲಿ ಸೋಲಲೇಬಾರದು ಅಂತ ಪಣ ತೊಟ್ಟು ನಿಂತಿರೋ ಸಿದ್ದರಾಮಯ್ಯ, ತಮ್ಮ ಆಟವನ್ನು ಶುರು ಮಾಡಿಬಿಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ:  ಗಡಿನಾಡು ಬೆಳಗಾವಿಯಲ್ಲಿ ಲೋಕ ಕದನ ಗೆಲ್ಲೋರ್ಯಾರು? ಯುವ ನಾಯಕ v/s ಮಾಜಿ ಸಿಎಂ ನಡುವೆ ಬಿಗ್ ಫೈಟ್ !

23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
Read more