Siddaramaiah: ಎಮೋಷನ್ ಅಸ್ತ್ರ..ವೈರಿಗಳಿಗೆ ಸ್ನೇಹದ ಸೂತ್ರ.. ಭಯದಲ್ಲಿ ಮಠ-ಮಂದಿರಕ್ಕೆ ಭೇಟಿ ನೀಡುತ್ತಿದ್ದಾರಾ ಸಿದ್ದು..?

Apr 12, 2024, 6:46 PM IST

ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರಗಳಾದ ಮೈಸೂರು ಮತ್ತು ಚಾಮರಾಜನಗರ(Chamarajanagar) ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲೇಬೇಕೆಂಬ ಹಠಕ್ಕೆ ಬಿದಿದ್ದಾರೆ. ಹೀಗಾಗಿ ಈ ಎಡು ಕ್ಷೇತ್ರಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ, ಗೆಲುವಿಗಾಗಿ  ಹತ್ತಾರು ತಂತ್ರಗಳನ್ನು ಮಾಡುತ್ತಿದ್ದಾರೆ. ಈಗಾಗಳೇ ಎರಡು ಬಾರಿ ಪ್ರಚಾರಕ್ಕೆ ಹೋಗಿರುವ ಸಿದ್ದು(Siddaramaiah) ಈಗ ಮೂರನೇ ಮಾತಿ ತವರು ಕ್ಷೇತ್ರಕ್ಕೆ ಪ್ರಚಾರಕ್ಕೆ(Campaign) ಹೋಗಲು ರೆಡಿಯಾಗಿದ್ದಾರೆ. ಇದೇ ತಿಂಗಳು 26 ರಂದು ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುಣಾವಣೆ ನಡೆಯಲಿದೆ. ದಕ್ಷಿಣ ಕರ್ಣಾಟಕ ಭಾಗದಲ್ಲಿ ನಡೆಯಲಿರುವ ಈ ಚುನಾವಣೆ ಒಟ್ಟು 14 ಕ್ಷೇತ್ರಗಳಲ್ಲಿ ನಡೆಯಲಿದೆ. ಅದರಲ್ಲಿ ಮೈಸೂರು-ಕೊಡಗು ಮತ್ತು ಚಾಮರಾಜ ನಗರ ಕ್ಷೇತ್ರಗಳೂ ಬರುತ್ತವೆ. ಸಿಎಂ ಸಿದ್ದರಾಮಯ್ಯನವರು ಉಳಿದ 12 ಕ್ಷೇತ್ರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ, ಅವರ ತವರು ಕ್ಷೇತ್ರಗಳಾದ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳ ಕುರಿತು ಸಿದ್ದು ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಈ ಎರಡು ಕ್ಷೇತ್ರಗಳಿಗೆ ಸಿದ್ದು ಪದೇ ಪದೇ ಪ್ರಚಾರಕ್ಕೆ ಹೋಗುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  Turning Point: ಭಿಂದ್ರನ್‌ ವಾಲೆ ಯಾರು? ಇಂದಿರಾ ಗಾಂಧಿ ಆತನ ಬಗ್ಗೆ ಆಸಕ್ತಿ ತೋರಿಸದ್ದು ಯಾಕೆ?