Rahul Gandhi: ಸಮೀಕ್ಷೆಗಳೇ ಬೇಕಿಲ್ಲ..ಫಲಿತಾಂಶ ಸ್ಪಷ್ಟ ಅಂದದ್ದೇಕೆ ಮೋದಿ? ಸತ್ಯವಾಯ್ತಾ ಪ್ರಧಾನಿ  ಹೇಳಿದ್ದ ರಾಹುಲ್ ಭವಿಷ್ಯ ?

Rahul Gandhi: ಸಮೀಕ್ಷೆಗಳೇ ಬೇಕಿಲ್ಲ..ಫಲಿತಾಂಶ ಸ್ಪಷ್ಟ ಅಂದದ್ದೇಕೆ ಮೋದಿ? ಸತ್ಯವಾಯ್ತಾ ಪ್ರಧಾನಿ ಹೇಳಿದ್ದ ರಾಹುಲ್ ಭವಿಷ್ಯ ?

Published : May 04, 2024, 04:37 PM IST

ವಯನಾಡಿನ ಬಳಿಕ ಭದ್ರಕೋಟೆಗೆ ಬಂದ ರಾಹುಲ್ ಗಾಂಧಿ!
ಅಮ್ಮ ಬಿಟ್ಟು ಕೊಟ್ಟ ಕ್ಷೇತ್ರ ರಾಯ್‌ ಬರೇಲಿಯಲ್ಲಿ ಸ್ಪರ್ಧೆ!
ಕಾಂಗ್ರೆಸ್‌ ವಿಚಿತ್ರ ದಾಳದ ಹಿಂದೆ ಅಡಗಿದೆಯಾ ರಹಸ್ಯ ? 

ಕಾಂಗ್ರೆಸ್ ಪಾಳಯದ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ(Amethi) ಮಾಯವಾಯ್ತು ಗಾಂಧಿ ಪರಿವಾರದ ಠಿಕಾಣಿ. ವಾಯನಾಡ್‌ನಲ್ಲಿ ಸ್ಪರ್ಧಿಸಿದ ರಾಹುಲ್ ಗಾಂಧಿ(Rahul Gandhi), ಈಗ ಅಮೇಥಿನೂ ಬಿಟ್ಟು ರಾಯ್‌ಬರೇಲಿಗೆ(Raebareli) ಶಿಫ್ಟ್ ಆಗಿದ್ದಾರೆ. ದೇಶದಲ್ಲಿ ಲೋಕಸಮರ ಅದೆಷ್ಟರ ಮಟ್ಟಿಗೆ ರಂಗೇರಿದೆ ಅನ್ನೋಕೆ, ಮೋದಿ ಅವರ ಈ ಮಾತುಗಳೇ ಸಾಕ್ಷಿ. ಕಾಂಗ್ರೆಸ್(Congress) ವಿರುದ್ಧ ಗುಡುಗುಡು ಗುಡುಗ್ತಾ ಇರೋ ಮೋದಿ ಅವರಿಗೆ, ಕಾಂಗ್ರೆಸ್ ಪಾಳಯ ಕೈಗೆತ್ತಿಕೊಂಡ ನಿರ್ಣಯ ಬ್ರಹ್ಮಾಸ್ತ್ರವಾಗಿ ಬದಲಾಗಿದೆ. ರಾಹುಲ್ ಗಾಂಧಿ ಸಧ್ಯಕ್ಕೆ ವಯನಾಡಿನ ಸಂಸದ. 2019ರಲ್ಲಿ ವಯನಾಡಲ್ಲಿ ಸ್ಪರ್ಧಿಸಿ ಗೆದ್ದಿದ್ದ ರಾಹುಲ್ ಗಾಂಧಿ, ಈ ಬಾರಿಯೂ ಕೂಡ ಅದೇ ಕ್ಷೇತ್ರದಿಂದ ರಣಾಂಗಣ ಪ್ರವೇಶಿಸಿದ್ರು. ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ, ಎರಡನೇ ಸ್ಪರ್ಧೆಗೆ ಧುಮುಕಿದ್ದಾರೆ. ಇದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ರಾಹುಲ್ ಗಾಂಧಿ ಬಿಜೆಪಿಗೆ(BJP) ಹೆದರಿದ್ದಾರೆ. ಬಿಜೆಪಿಯ ಆ ಒಬ್ಬ ನಾಯಕಿಗೆ(Smriti Irani) ಹೆದಿದ್ದಾರೆ. ಆ ನಾಯಕಿಯ ವಿರುದ್ಧ ಅಮೇಥಿಲಿ ಸ್ಪರ್ಧಿಸೋಕ್ಕಾಗದೆ, ಹೆದರಿ ಓಡಿದ್ದಾರೆ ಅಂತ ಬಿಜೆಪಿ ಮಾತಾಡ್ತಾ ಇದೆ.

ಇದನ್ನೂ ವೀಕ್ಷಿಸಿ:  ಸಂತ್ರಸ್ತೆ ಕಿಡ್ಯ್ನಾಪ್ ಕೇಸ್‌ನಲ್ಲಿ ಅರೆಸ್ಟ್ ಆಗ್ತಾರಾ ರೇವಣ್ಣ? ಹಾಸನದಿಂದ ಮೈಸೂರಿಗೂ ವ್ಯಾಪಿಸಿದ ಪ್ರಜ್ವಲ್ ಪ್ರಹಸನ!

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more