ಅಮ್ಮನ ಅನುಪಸ್ಥಿತಿಯಲ್ಲಿ ರಾಜ್ಯದಲ್ಲಿ ಅಖಾಡಕ್ಕಿಳಿದ ಮಗಳು: ಲೋಕಸಂಗ್ರಾಮದಲ್ಲೂ ಲಕ್ಷ್ಯ ಭೇದಿಸುತ್ತಾ ಪ್ರಿಯಾಂಕಾಸ್ತ್ರ..?

Apr 24, 2024, 12:09 PM IST

ಬೆಂಗಳೂರು(ಏ.24):  ಕರ್ನಾಟಕದಲ್ಲಿ ಲೋಕಯುದ್ಧ ಗೆಲ್ಲಲು ಗಾಂಧಿ ಕುಟುಂಬದ ಕುಡಿಯನ್ನೇ ರಣರಂಗಕ್ಕೆ ಇಳಿಸಿದ ಕಾಂಗ್ರೆಸ್. ಅವತ್ತು ಅಜ್ಜಿ ಇಂದಿರಾ, ಇವತ್ತು ಮೊಮ್ಮಗಳು ಪ್ರಿಯಾಂಕಾ.. ಮದಕರಿ ನಾಯಕನ ಕೋಟೆಯಲ್ಲಿ ರಣಕಹಳೆ ಮೊಳಗಿಸಿದ ಇಂದಿರೆಯ ಮೊಮ್ಮಗಳು. ಅಮ್ಮನ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಅಖಾಡಕ್ಕಿಳಿದ ಮಗಳು. ಗಾಂಧಿ ಕುಟುಂಬಕ್ಕೆ ರಾಜಕೀಯ ಶಕ್ತಿ ಕೊಟ್ಟ ನೆಲದಲ್ಲಿ ಗಾಂಧಿ ಕುಟುಂಬದ 3ನೇ ತಲೆಮಾರಿನ ಮಹಿಳೆಯ ರಣಘೋಷ. ಕುರುಕ್ಷೇತ್ರದಲ್ಲಿ ಗುರಿ ಮುಟ್ಟಿದ್ದ ಅಸ್ತ್ರ, ಮಹಾಭಾರತ ಮಹಾಯುದ್ಧದಲ್ಲೂ ಕಾಂಗ್ರೆಸ್ ಕೈ ಹಿಡಿಯುತ್ತಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಪ್ರಿಯಾಂಕಾಸ್ತ್ರ.

ಪ್ರಿಯಾಂಕಾ ಗಾಂಧಿ ಕರ್ನಾಟಕದ ಕಾಂಗ್ರೆಸ್ ಪಾಲಿಗೆ ಲಕ್ಕಿ ಚಾರ್ಮ್. ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕಾಸ್ತ್ರ ಭರ್ಜರಿ ಫಲ ಕೊಟ್ಟಿತ್ತು. ಈಗ ಲೋಕಸಭಾ ಚುನಾವಣೆಯ ಅಖಾಡದಲ್ಲೂ ಕಾಂಗ್ರೆಸ್, ಪ್ರಿಯಾಂಕಾಸ್ತ್ರವನ್ನೇ ಪ್ರಯೋಗಿಸಲು ಮತ್ತೊಂದು ಇಂಟ್ರೆಸ್ಟಿಂಗ್ ಕಾರಣವಿದೆ. 

ನನ್ನ ವೋಟು ನನ್ನ ಮಾತು: ಉಡುಪಿ- ಚಿಕ್ಕಮಗಳೂರು ಮತದಾರರ ಒಲವು ಯಾವ ಕಡೆ?

ಕರ್ನಾಟಕದ ಕಾಂಗ್ರೆಸ್ ಪಾಲಿಗೆ ಗಾಂಧಿ ಕುಟುಂಬದ ಕುಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಲಕ್ಕಿ ಚಾರ್ಮ್. 2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕಾಸ್ತ್ರ ಭರ್ಜರಿ ಫಲ ಕೊಟ್ಟಿತ್ತು. ಈಗ ಲೋಕಸಭಾ ಚುನಾವಣೆಯ ಅಖಾಡದಲ್ಲೂ ಕಾಂಗ್ರೆಸ್, ಪ್ರಿಯಾಂಕಾಸ್ತ್ರವನ್ನೇ ಪ್ರಯೋಗಿಸಲು ಮುಂದಾಗಿದೆ. ಇದ್ರ ಹಿಂದೆ ಮತ್ತೊಂದು ಕುತೂಹಲದ ಕಾರಣವಿದೆ. ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪ್ರಿಯಾಂಕಾಸ್ತ್ರವನ್ನು ಪ್ರಯೋಗಿಸಿದೆ.