ಮೋದಿ ಫೇಕ್ ವಿಡಿಯೋ ಶೇರ್ ಮಾಡಿದ ಪ್ರಿಯಾಂಕ್ ಖರ್ಗೆ: ಕಾಂಗ್ರೆಸ್‌ಗೆ ವೋಟ್ ಹಾಕುವಂತೆ ಹೇಳಿದ್ರಾ ಸೆಲೆಬ್ರಿಟಿಗಳು..?

ಮೋದಿ ಫೇಕ್ ವಿಡಿಯೋ ಶೇರ್ ಮಾಡಿದ ಪ್ರಿಯಾಂಕ್ ಖರ್ಗೆ: ಕಾಂಗ್ರೆಸ್‌ಗೆ ವೋಟ್ ಹಾಕುವಂತೆ ಹೇಳಿದ್ರಾ ಸೆಲೆಬ್ರಿಟಿಗಳು..?

Published : Apr 30, 2024, 10:52 AM ISTUpdated : Apr 30, 2024, 10:53 AM IST

ಸೋಷಿಯಲ್ ಮೀಡಿಯಾಗಳಲ್ಲಿ ತಿರುಚಿದ ವಿಡಿಯೋಗಳ ಅಬ್ಬರ
ಕಾಂಗ್ರೆಸ್ ಪರವಾದ..ಬಿಜೆಪಿ ವಿರುದ್ಧವಾದ ಫೇಕ್ ವಿಡಿಯೋಸ್
ವೈರಲ್ ಆದ ಅಮೀರ್.. ಅಲ್ಲು ಅರ್ಜುನ್ ಫೇಕ್ ವಿಡಿಯೋಸ್
ದೇಶದ ಮೂಡ್ ಚೈಂಜ್ ಮಾಡುವ ಪ್ರಯತ್ನ ಮಾಡ್ತಿರೋದ್ಯಾರು? 

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ(Karnataka) ಜನತೆಯನ್ನು ಪಾಪಿಗಳು ಅಂದರಾ? ಇಂತಹದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಮೋದಿ(Narendra Modi) ಹೀಗೆ ಹೇಳಿದ್ದಾರೆಂದು ವಿಡಿಯೋ ಪೋಸ್ಟ್ ಮಾಡಿದ್ದವರು ಯಾರು ಗೊತ್ತಾ? ಮಲ್ಲಿಕಾರ್ಜುಕ್ ಖರ್ಗೆ ಅವರ ಮಗ ಪ್ರಿಯಾಂಕ ಖರ್ಗೆ? ಇವರೇ ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆಂದ್ರೆ ಇದು ನಿಜಾನಾ? ಇಲ್ಲಿ ನೋಡಿ. ಪ್ರಿಯಾಂಕ್ ಖರ್ಗೆ ತಮ್ಮದೇ ಟ್ವೀಟ್ ಪೇಜ್‌ನಲ್ಲಿ ಮೋದಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಅರೇ! ಇದೇನಿದು? ಕಟ್ಟರ್ ಬಿಜೆಪಿ ವಿರೋಧಿ, ಕಾಂಗ್ರೆಸ್(Congress) ಕಟ್ಟಾಳು ಪ್ರಿಯಾಂಕ್ ಖರ್ಗೆ(Priyank Kharge) ಅವರು ತಮ್ಮ ಪೇಜ್‌ನಲ್ಲಿ ಮೋದಿ ವಿಡಿಯೋ ಶೇರ್ ಮಾಡಿದ್ದಾರಾ? ಎಂದು ಅಚ್ಚರಿಯಾಗಬೇಡಿ. ಮೋದಿ ಇದರಲ್ಲಿ ಹೇಳಿದ್ದೇನೆಂದರೆ, ಕರ್ನಾಟಕದ ಜನ ಈ ಹಿಂದೆ ಪಾಪ ಮಾಡಿದ್ದಾರಲ್ವಾ, ಅವರು ಮಾಡಿದ ಆ ಪಾಪಕ್ಕೆ ಈ ಚುನಾವಣೆಯಲ್ಲಿ ನೀವೆಲ್ಲ ಶಿಕ್ಷೆ ಕೊಡಿ ಎಂದು ಈ ವಿಡಿಯೋದಲ್ಲಿ ಮೋದಿ ಹೇಳಿದ್ದಾರೆ. ಈ ವಿಡಿಯೋ ಪೋಸ್ ಮಾಡಿಕೊಂಡಿರುವ ಪ್ರಿಯಾಂಕ್ ಖರ್ಗೆ ಅವರು ಏನೆಂದು ಬರೆದುಕೊಂಡಿದ್ದಾರೆ ಗೊತ್ತಾ? ಪ್ರಧಾನಿ ಮೋದಿಯವರೇ ಕನ್ನಡಿಗರನ್ನು(Kannadigas) ಪಾಪಿಗಳು ಎಂದೇಕೆ ಕರೆದಿದ್ದೀರಿ? ಕನ್ನಡಿರ ಮೇಲೆ ನಿಮಗೇಕೆ ಇಷ್ಟೊಂದು ಕೋಪ? ಕನ್ನಡಿಗರನ್ನು ಕಂಡರೆ ನಿಮಗೆ ಯಾಕಿಷ್ಟು ದ್ವೇಷ? ಕನ್ನಡಿಗರು ಯಾವ ಪಾಪ ಮಾಡಿದ್ದಾರೆ? ಭ್ರಷ್ಟ ಬಿಜೆಪಿಯನ್ನು ತಿರಸ್ಕರಿಸಿದ್ದು ಪಾಪವೇ? 40% ಕಮಿಷನ್ ಸರ್ಕಾರವನ್ನು ಒದ್ದೋಡಿಸಿದ್ದು ಪಾಪವೇ? 25 ಬಿಜೆಪಿ ಸಂಸದರು ನಿಷ್ಕ್ರೀಯರಾಗಿದ್ದು ಕನ್ನಡಿಗರ ಯಾವ ಪಾಪಕ್ಕೆ? ಹೀಗೆ ಇನ್ನೂ ಏನೇನೂ ಉದ್ದಕ್ಕೆ ಪ್ರಿಯಾಂಕ್ ಖರ್ಗೆ ಬರೆದುಕೊಂಡಿದ್ದಾರೆ. ಇಷ್ಟೆಲ್ಲ ಬರೆದುಕೊಳ್ಳುವ ಮೊದಲು ಈ ವಿಡಿಯೋ ನಿಜವಾದದ್ದಾ ಅಥವಾ ಸುಳ್ಳಾ ಅನ್ನೋ ಯೋಚನೆಯನ್ನೂ ಈ ಮಹಾನ್ ಮೇಧಾವಿ ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ. ಪ್ರಿಯಾಂಕ್ ಖರ್ಗೆ ಮೋದಿ ಮಾತನ್ನು ತಿರುಚಿದ ವಿಡಿಯೋವನ್ನು ಇಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಹಾಗಿದ್ರೆ ನಿಜವಾದ ವಿಡಿಯೋದಲ್ಲಿ ಏನಿದೆ ಅನ್ನೋದನ್ನು ಇಲ್ಲಿ ಕೇಳಿ.

ಇದನ್ನೂ ವೀಕ್ಷಿಸಿ:  Prajwal Revanna : ಪ್ರಜ್ವಲ್ ರೇವಣ್ಣ ವಿರುದ್ಧ ಪ್ರತಿಭಟನೆಯ ಜ್ವಾಲಾಗ್ನಿ: SIT ಎದುರು ಸಂತ್ರಸ್ತೆಯರು ಹೇಳಿದ್ದೇನು ?

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
Read more