ಮೋದಿ ಫೇಕ್ ವಿಡಿಯೋ ಶೇರ್ ಮಾಡಿದ ಪ್ರಿಯಾಂಕ್ ಖರ್ಗೆ: ಕಾಂಗ್ರೆಸ್‌ಗೆ ವೋಟ್ ಹಾಕುವಂತೆ ಹೇಳಿದ್ರಾ ಸೆಲೆಬ್ರಿಟಿಗಳು..?

ಮೋದಿ ಫೇಕ್ ವಿಡಿಯೋ ಶೇರ್ ಮಾಡಿದ ಪ್ರಿಯಾಂಕ್ ಖರ್ಗೆ: ಕಾಂಗ್ರೆಸ್‌ಗೆ ವೋಟ್ ಹಾಕುವಂತೆ ಹೇಳಿದ್ರಾ ಸೆಲೆಬ್ರಿಟಿಗಳು..?

Published : Apr 30, 2024, 10:52 AM ISTUpdated : Apr 30, 2024, 10:53 AM IST

ಸೋಷಿಯಲ್ ಮೀಡಿಯಾಗಳಲ್ಲಿ ತಿರುಚಿದ ವಿಡಿಯೋಗಳ ಅಬ್ಬರ
ಕಾಂಗ್ರೆಸ್ ಪರವಾದ..ಬಿಜೆಪಿ ವಿರುದ್ಧವಾದ ಫೇಕ್ ವಿಡಿಯೋಸ್
ವೈರಲ್ ಆದ ಅಮೀರ್.. ಅಲ್ಲು ಅರ್ಜುನ್ ಫೇಕ್ ವಿಡಿಯೋಸ್
ದೇಶದ ಮೂಡ್ ಚೈಂಜ್ ಮಾಡುವ ಪ್ರಯತ್ನ ಮಾಡ್ತಿರೋದ್ಯಾರು? 

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ(Karnataka) ಜನತೆಯನ್ನು ಪಾಪಿಗಳು ಅಂದರಾ? ಇಂತಹದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಮೋದಿ(Narendra Modi) ಹೀಗೆ ಹೇಳಿದ್ದಾರೆಂದು ವಿಡಿಯೋ ಪೋಸ್ಟ್ ಮಾಡಿದ್ದವರು ಯಾರು ಗೊತ್ತಾ? ಮಲ್ಲಿಕಾರ್ಜುಕ್ ಖರ್ಗೆ ಅವರ ಮಗ ಪ್ರಿಯಾಂಕ ಖರ್ಗೆ? ಇವರೇ ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆಂದ್ರೆ ಇದು ನಿಜಾನಾ? ಇಲ್ಲಿ ನೋಡಿ. ಪ್ರಿಯಾಂಕ್ ಖರ್ಗೆ ತಮ್ಮದೇ ಟ್ವೀಟ್ ಪೇಜ್‌ನಲ್ಲಿ ಮೋದಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಅರೇ! ಇದೇನಿದು? ಕಟ್ಟರ್ ಬಿಜೆಪಿ ವಿರೋಧಿ, ಕಾಂಗ್ರೆಸ್(Congress) ಕಟ್ಟಾಳು ಪ್ರಿಯಾಂಕ್ ಖರ್ಗೆ(Priyank Kharge) ಅವರು ತಮ್ಮ ಪೇಜ್‌ನಲ್ಲಿ ಮೋದಿ ವಿಡಿಯೋ ಶೇರ್ ಮಾಡಿದ್ದಾರಾ? ಎಂದು ಅಚ್ಚರಿಯಾಗಬೇಡಿ. ಮೋದಿ ಇದರಲ್ಲಿ ಹೇಳಿದ್ದೇನೆಂದರೆ, ಕರ್ನಾಟಕದ ಜನ ಈ ಹಿಂದೆ ಪಾಪ ಮಾಡಿದ್ದಾರಲ್ವಾ, ಅವರು ಮಾಡಿದ ಆ ಪಾಪಕ್ಕೆ ಈ ಚುನಾವಣೆಯಲ್ಲಿ ನೀವೆಲ್ಲ ಶಿಕ್ಷೆ ಕೊಡಿ ಎಂದು ಈ ವಿಡಿಯೋದಲ್ಲಿ ಮೋದಿ ಹೇಳಿದ್ದಾರೆ. ಈ ವಿಡಿಯೋ ಪೋಸ್ ಮಾಡಿಕೊಂಡಿರುವ ಪ್ರಿಯಾಂಕ್ ಖರ್ಗೆ ಅವರು ಏನೆಂದು ಬರೆದುಕೊಂಡಿದ್ದಾರೆ ಗೊತ್ತಾ? ಪ್ರಧಾನಿ ಮೋದಿಯವರೇ ಕನ್ನಡಿಗರನ್ನು(Kannadigas) ಪಾಪಿಗಳು ಎಂದೇಕೆ ಕರೆದಿದ್ದೀರಿ? ಕನ್ನಡಿರ ಮೇಲೆ ನಿಮಗೇಕೆ ಇಷ್ಟೊಂದು ಕೋಪ? ಕನ್ನಡಿಗರನ್ನು ಕಂಡರೆ ನಿಮಗೆ ಯಾಕಿಷ್ಟು ದ್ವೇಷ? ಕನ್ನಡಿಗರು ಯಾವ ಪಾಪ ಮಾಡಿದ್ದಾರೆ? ಭ್ರಷ್ಟ ಬಿಜೆಪಿಯನ್ನು ತಿರಸ್ಕರಿಸಿದ್ದು ಪಾಪವೇ? 40% ಕಮಿಷನ್ ಸರ್ಕಾರವನ್ನು ಒದ್ದೋಡಿಸಿದ್ದು ಪಾಪವೇ? 25 ಬಿಜೆಪಿ ಸಂಸದರು ನಿಷ್ಕ್ರೀಯರಾಗಿದ್ದು ಕನ್ನಡಿಗರ ಯಾವ ಪಾಪಕ್ಕೆ? ಹೀಗೆ ಇನ್ನೂ ಏನೇನೂ ಉದ್ದಕ್ಕೆ ಪ್ರಿಯಾಂಕ್ ಖರ್ಗೆ ಬರೆದುಕೊಂಡಿದ್ದಾರೆ. ಇಷ್ಟೆಲ್ಲ ಬರೆದುಕೊಳ್ಳುವ ಮೊದಲು ಈ ವಿಡಿಯೋ ನಿಜವಾದದ್ದಾ ಅಥವಾ ಸುಳ್ಳಾ ಅನ್ನೋ ಯೋಚನೆಯನ್ನೂ ಈ ಮಹಾನ್ ಮೇಧಾವಿ ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ. ಪ್ರಿಯಾಂಕ್ ಖರ್ಗೆ ಮೋದಿ ಮಾತನ್ನು ತಿರುಚಿದ ವಿಡಿಯೋವನ್ನು ಇಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಹಾಗಿದ್ರೆ ನಿಜವಾದ ವಿಡಿಯೋದಲ್ಲಿ ಏನಿದೆ ಅನ್ನೋದನ್ನು ಇಲ್ಲಿ ಕೇಳಿ.

ಇದನ್ನೂ ವೀಕ್ಷಿಸಿ:  Prajwal Revanna : ಪ್ರಜ್ವಲ್ ರೇವಣ್ಣ ವಿರುದ್ಧ ಪ್ರತಿಭಟನೆಯ ಜ್ವಾಲಾಗ್ನಿ: SIT ಎದುರು ಸಂತ್ರಸ್ತೆಯರು ಹೇಳಿದ್ದೇನು ?

20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
Read more