ಕಾಂಗ್ರೆಸ್ ಪಕ್ಷದಲ್ಲಿ ಹೆಂಡ್ತಿ ಮಕ್ಕಳಿಗಾಗಿ ಟಿಕೆಟ್ ಸರ್ಕಸ್: ಜೆಡಿಎಸ್‌ನಲ್ಲಿ ಈ ಬಾರಿ ಯಾರಿಗೆ..ಯಾವ ಕ್ಷೇತ್ರದ ಟಿಕೆಟ್..?

ಕಾಂಗ್ರೆಸ್ ಪಕ್ಷದಲ್ಲಿ ಹೆಂಡ್ತಿ ಮಕ್ಕಳಿಗಾಗಿ ಟಿಕೆಟ್ ಸರ್ಕಸ್: ಜೆಡಿಎಸ್‌ನಲ್ಲಿ ಈ ಬಾರಿ ಯಾರಿಗೆ..ಯಾವ ಕ್ಷೇತ್ರದ ಟಿಕೆಟ್..?

Published : Dec 11, 2023, 09:40 AM IST

ರಾಜ್ಯದಲ್ಲಿ ಶುರುವಾಗಿದೆ ಲೋಕಸಭೆ ಟಿಕೆಟ್‌ಗಾಗಿ ಕಸರತ್ತು
ಮಕ್ಕಳಿಗೆ ಟಿಕೆಟ್ ಕೊಡಿಸುವ ಪ್ರಯತ್ನದಲ್ಲಿ  ನಾಯಕರು
ಈಗಲೇ ಹೈ ಕಮಾಂಡ್ ಬಾಗಿಲು ಬಡಿದಿರೋ ನಾಯಕರು

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. ಹತ್ತಿರವಾಗುತ್ತಿರೋ 2024ರ ಲೋಕಸಭಾ ಚುನಾವಣೆಗೆ(Loksabha) ರಾಜ್ಯದಲ್ಲಿ ಈಗಲೇ ತಯಾರಿ ನಡೆಯುತ್ತಿದೆ. ಎಲ್ಲ ಪಕ್ಷಗಳು ಕೇಂದ್ರ ಚುನಾವಣೆಯಲ್ಲಿ ಗೆಲುವಿನ ಸೂತ್ರಗಳನ್ನು ಹೆಣೆಯಲಾರಂಭಿಸಿವೆ. 2024ರ ಈ ಚುನಾವಣೆಗೆ, ಮೂರೂ ಪಕ್ಷದ ನಾಯಕರು ತಮ್ಮ ಮಕ್ಕಳು ಹೆಂಡ್ತಿಯರಿಗೆ ಟಿಕೆಟ್(Ticket) ಬೇಡಿಕೆ ಇಡುತ್ತಿದ್ದಾರೆ. ಈ ಬಾರಿ ಮೂರು ಪಕ್ಷಗಳಲ್ಲಿ ಕುಟುಂಬ ರಾಜಕಾರಣ(Family politics) ಜೋರಾಗಿ ನಡೆಯುತ್ತಿರುವಂತೆ ಕಾಣುತ್ತಿದೆ. 2024ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಬರಲಿರೋ ಈ ಚುನಾವಣೆ ಎಲ್ಲರಿಗೂ ತುಂಬಾ ಮಹತ್ವದ ಚುನಾವಣೆ ಆಗಲಿದೆ. ಮೋದಿ (Narendra Modi)ನಾಯಕತ್ವದ ಬಿಜೆಪಿ ಪಕ್ಷಕ್ಕೆ, ಮೂರನೇ ಬಾರಿ ಗದ್ದುಗೆ ಹಿಡಿಯುವ ಆಸೆ. ಹತ್ತು ವರ್ಷಗಳಿಂದ ಅಧಿಕಾರ ವಂಚಿತವಾಗಿರುವ ಕಾಂಗ್ರೆಸ್‌ಗೆ(Congress), ಈ ಬಾರಿ ಹೇಗಾದ್ರು ಮಾಡಿ ಲೋಕಸಭೆಯಲ್ಲಿ ಗೆಲ್ಲಲೇಬೇಕಂಬ ಹಠ. ಹಾಗೆನೇ ಉಳಿದ ಪ್ರಾದೇಶಿಕ ಪಕ್ಷಗಳಿಗೂ ಸಹ, ಹೇಗಾದ್ರು ಮಾಡಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬ ಮೊಂಡತನ ಹುಟ್ಟಿಕೊಂಡಿದೆ. ಹೀಗಾಗಿ 2024ರ ಲೋಕಸಭಾ ಚುನಾವಣೆ ನ್ಯಾಷನಲ್ ಪಾರ್ಟಿಗಳು ಸೇರಿಂದಂತೆ ಎಲ್ಲ ಪಕ್ಷಗಳು ಸಹ ಈ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಿವೆ. ಹೀಗಾಗಿ ಎಲ್ಲ ರಾಜ್ಯಗಳಲ್ಲಿ ಈಗಿನಿಂದಲೇ ಲೋಕಸಭಾ ಚುನಾವಣೆ ತಯಾರಿ ಸೈಲೆಂಟಾಗಿನೇ ನಡೆಯುತ್ತಿವೆ. ನಮ್ಮ ರಾಜ್ಯದಲ್ಲೂ ಎಲ್ಲ ಪಕ್ಷಗಳಿಂದ ಲೋಕಸಭಾ ತಯಾರಿ ಜೋರಾಗಿದೆ. ರಾಜ್ಯದಲ್ಲಿ ಲೋಕಸಭಾ ತಯಾರಿಯಲ್ಲಿರುವ ಎಲ್ಲ ಪಕ್ಷದ ನಾಯಕರು, ತಮ್ಮ ಮಕ್ಕಳು, ಹೆಂಡ್ತಿಯರಿಗೆ ಟಿಕೆಟ್ ಬೇಡಿಕೆ ಇಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ.

ಇದನ್ನೂ ವೀಕ್ಷಿಸಿ:  ಪುಣ್ಯಕ್ಷೇತ್ರದ ಪಕ್ಕದ ಕಗ್ಗೆರೆಯಲ್ಲಿ ಇದೇನಿದು ಪವಾಡ.. ವಿಸ್ಮಯ..!? ಎಡೆಯೂರು ಸಿದ್ಧಲಿಂಗೇಶ್ವರ ಮಹಾತ್ಮೆ..!

21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
Read more