ಮತ್ತೆ ಅರೆಸ್ಟ್ ಆದ್ರೆ ಡಿಕೆಶಿಗೆ ಲಾಭನಾ? ನಷ್ಟನಾ?

Oct 6, 2020, 12:25 PM IST

ಬೆಂಗಳೂರು (ಅ. 06): ಕನಕಪುರ ಬಂಡೆ ಡಿಕೆ ಶಿವಕುಮಾರ್ ಸಾಮ್ರಾಜ್ಯದ ಮೇಲೆ ಸಿಬಿಐ ದಾಳಿ ಮಾಡಿದೆ. ದೆಹಲಿ, ಮುಂಬೈ, ಬೆಂಗಳೂರು ಹಾಗೂ ತವರು ಕ್ಷೇತ್ರ ಕನಕಪುರ ಸೇರಿದಂತೆ ಬೇರೆ ಬೇರೆ ಕಡೆ ದಾಳಿಯಾಗಿದೆ. ಶಿರಾ ಹಾಗೂ ಆರ್ ಆರ್‌ ನಗರ ಉಪಚುನಾವಣೆ ಹಾಗೂ 4 ವಿಧಾನಪರಿಷತ್ ಕ್ಷೇತ್ರಗಳಲ್ಲಿ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಸಮಯದಲ್ಲಿ ದಾಳಿ ನಡೆದಿರುವುದು ಶಾಕ್ ನೀಡಿದೆ.  

ಐದೇ ವರ್ಷದಲ್ಲಿ ಡಿಕೆಶಿ ಆದಾಯ ಶೇ. 45 ರಷ್ಟು ವೃದ್ದಿಯಾಗಿದ್ದೇಗೆ?

ಈ ದಾಳಿಯನ್ನು ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ಕಳೆದ ಬಾರಿ ಆದಾಯ ತೆರಿಗೆ ಇಲಾಖೆ ದಾಳಿ ನಡೆದು ಜೈಲು ಸೇರಿದ್ದಕ್ಕೆ ಕೆಪಿಸಿಸಿ ಪಟ್ಟ ಸಿಕ್ಕಿತ್ತು. ಈ ದಾಳಿ ಉಪಚುನಾವಣೆಗೂ ಸಂಬಂಧ ಇದೆಯಾ? ಡಿಕೆಶಿ ಭವಿಷ್ಯ ಬರೆಯಲಿದೆಯಾ ಈ ದಾಳಿ? ಪೊಲಿಟಿಕಲ್ ಇನ್‌ಸೈಡ್ಸ್‌ ಇಲ್ಲಿದೆ ನೋಡಿ..!