ಗೌಡರ ಮೊಮ್ಮಗನಿಗೆ ಪಟ್ಟ ಕಟ್ಟಲು ಪಕ್ಷದಿಂದ ಗ್ರೀನ್ ಸಿಗ್ನಲ್..? ರಾಷ್ಟ್ರ ರಾಜಕಾರಣಕ್ಕೆ ಅಪ್ಪ..ರಾಜ್ಯ ರಾಜಕಾರಣಕ್ಕೆ ಮಗ..!

ಗೌಡರ ಮೊಮ್ಮಗನಿಗೆ ಪಟ್ಟ ಕಟ್ಟಲು ಪಕ್ಷದಿಂದ ಗ್ರೀನ್ ಸಿಗ್ನಲ್..? ರಾಷ್ಟ್ರ ರಾಜಕಾರಣಕ್ಕೆ ಅಪ್ಪ..ರಾಜ್ಯ ರಾಜಕಾರಣಕ್ಕೆ ಮಗ..!

Published : Jul 09, 2024, 05:31 PM IST

ತಾತ, ತಂದೆಯ ಉತ್ತರಾಧಿಕಾರಿಯಾಗ್ತಾರಾ ಕುಮಾರಣ್ಣನ ವಾರಸ್ದಾರ..?
ಜೆಡಿಎಸ್ ರಾಜ್ಯಾಧ್ಯಕ್ಷ ರೇಸ್‌ನಲ್ಲಿ ನಿಖಿಲ್.. ನಡೆಯುತ್ತಾ ಪಟ್ಟಾಭಿಷೇಕ..?
36 ವರ್ಷದ ನಿಖಿಲ್ ಹೆಗಲಿಗೆ ಬೀಳಲಿದ್ಯಾ ಜೆಡಿಎಸ್ ರಾಜ್ಯಾಧ್ಯಕ್ಷ ಜವಾಬ್ದಾರಿ!

ಅದು ದೇವೇಗೌಡರು ಛಲದಿಂದ ಕಟ್ಟಿರೋ ಪಕ್ಷ. ಆ ಪಕ್ಷಕ್ಕೆ ಗೌಡರೇ ರಾಷ್ಟ್ರೀಯ ಅಧ್ಯಕ್ಷ, ಗೌಡರ ಮಗ ಕುಮಾರಸ್ವಾಮಿಯವ್ರೇ (Kumaraswamy)ರಾಜ್ಯಾಧ್ಯಕ್ಷ. ಈಗ ಜೆಡಿಎಸ್(JDS) ಸಾರಥ್ಯ ಗೌಡರ ಮೂರನೇ ತಲೆಮಾರಿನ ಕೈ ಸೇರುವ ಸಾಧ್ಯತೆಗಳು ಕಂಡು ಬರ್ತಾ ಇವೆ. ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ. ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿಯೋ ಹೆಸರಿದು. ದೇವೇಗೌಡರನ್ನು(Devegowda) ಬಿಟ್ಟು ರಾಜ್ಯ ರಾಜಕಾರಣದ ಇತಿಹಾಸವನ್ನು ಬರೆಯಲು ಸಾಧ್ಯವೇ ಇಲ್ಲ. ಗೌಡ್ರು ಅಂದ್ರೆ ಛಲದಂಕಮಲ್ಲ, ಗೌಡ್ರು ಅಂದ್ರೆ ಛಲದ ಪ್ರತೀಕ. ರಾಜಕೀಯ ಅಂತ ಬಂದ್ರೆ 92ನೇ ವಯಸ್ಸಲ್ಲೂ ಪಂಚೆ ಎತ್ತಿ ಕಟ್ಟಿ ಅಖಾಡಕ್ಕಿಳಿಯೋಕೆ ಗೌಡ್ರು ಸದಾ ರೆಡಿ. ಇಂಥಾ ದೇವೇಗೌಡರ ಛಲದ ಪ್ರತೀಕವೇ ಜಾತ್ಯಾತೀತ ಜನತಾದಳ ಪಕ್ಷ. ಜಾತ್ಯಾತೀತ ಜನತಾದಳ, ಅರ್ಥಾತ್ ಜೆಡಿಎಸ್.. ಪೆಟ್ಟು ಬಿದ್ದಷ್ಟೂ ಗಟ್ಟಿಯಾಗೋದು ಜೆಡಿಎಸ್ ಜಾಯಮಾನ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಮಾನವಾಗಿ ಸೋತಿದ್ದ ದಳಪತಿಗಳು, ಈಗ ಫೀನಿಕ್ಸ್'ನಂತೆ ಎದ್ದು ಕೂತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ(BJP) ಜೊತೆಗೂಡಿ ಸಾಧಿಸಿದ ಗೆಲುವು, ದಳಪತಿಗಳಿಗೆ ಹೊಸ ಹುರುಪು ತಂದು ಕೊಟ್ಟಿದೆ. ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗಿದ್ದೇ ತಡ, ಜೆಡಿಎಸ್‌ಗೆ ಆನೆಬಲ ಬಂದು ಬಿಟ್ಟಿದೆ. ಇದೇ ಹುರುಪಿನಲ್ಲಿ ಪಕ್ಷವನ್ನ ಬೇರ ಮಟ್ಟದಿಂದ ಕಟ್ಟಲು ರೆಡಿಯಾಗಿರೋ ದಳಪತಿಗಳು ಅದಕ್ಕೆ ಬ್ಲೂಪ್ರಿಂಟ್ ರೆಡಿ ಮಾಡಿದ್ದು, ಸೈನಿಕ ಪಡೆ ಸಿದ್ಧವಾಗಿ ನಿಂತಿದೆ. 

ಇದನ್ನೂ ವೀಕ್ಷಿಸಿ:  ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆಗೆ 1 ತಿಂಗಳು: ಇನ್ನೂ ಪತ್ತೆಯಾಗದ 2 ಪ್ರಮುಖ ಮೊಬೈಲ್ ಫೋನ್!

20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
Read more