News Hour Special: ಯಾರಿಗೆಲ್ಲಾ ಯಾವ ಕಾರಣಕ್ಕೆ ಬಿಜೆಪಿ ಟಿಕೆಟ್‌ ತಪ್ಪಿಸಲಾಗಿದೆ ? ವಿಜಯೇಂದ್ರ ಹೇಳಿದ್ದೇನು?

Apr 14, 2024, 12:57 PM IST

ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY vijayendra)ರಾಜ್ಯ ರಾಜಕಾರಣ ಬಗ್ಗೆ ತಮ್ಮದೇ ಆದ ಅಭಿಪ್ರಾಯ ಹೊರಹಾಕಿದ್ದಾರೆ. ನಮ್ಮ ಅಭ್ಯರ್ಥಿ ಸೋಲುತ್ತಾರೆ ಎನ್ನುವ ಯಾವುದೇ ಕ್ಷೇತ್ರಗಳು ಇಲ್ಲ. ನಮ್ಮ ಕಡೆಯಿಂದ ಯಾವುದೇ ತಪ್ಪಾಗದೆ , ಒಗ್ಗಟ್ಟಾಗಿ, ಒಂದಾಗಿ ಶ್ರಮ ವಹಿಸಿದರೆ ಎಲ್ಲಾ 28 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದಿದ್ದಾರೆ. ಹಾಗೆಯೇ ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಮತದಾರರ ನಾಡಿಮಿಡಿತವನ್ನು ಗಮನಿಸುತ್ತಿದ್ದೇನೆ. ಜನರಲ್ಲಿ ಮೋದಿ(Narendra Modi) ಅವರಿಗೆ ಮತ್ತೊಮ್ಮೆ ಅವಕಾಶ ಕೊಡಬೇಕು ಅನ್ನೋದು ಎಲ್ಲರ ಮನಸ್ಸಿನಲ್ಲಿ ಇದೆ ಎಂದಿದ್ದು, ಈಶ್ವರಪ್ಪ ಅವರ ವಿರೋಧದ ಬಗ್ಗೆ ಮಾತನಾಡಿ, ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕುವ ನಿರ್ಧಾರವನ್ನು ದೆಹಲಿಯ ವರಿಷ್ಠರು ಮಾಡಿದ್ದಾರೆ. ಈಶ್ವರಪ್ಪ(KS Eshwarappa) ಹಿರಿಯರಿದ್ದಾರೆ, ಅವರೂ ಕೂಡ ಪಕ್ಷ ಕಟ್ಟುವ ಕೆಲಸ ಮಾಡಿದ್ದಾರೆ. ಆದರೆ,  ಯಾರೂ ಪಕ್ಷಕ್ಕೆ ದೀರ್ಘವಾಗಿ ದುಡಿದಿದ್ದಾರೋ ಅವರಿಗೆ ಹಾವೇರಿಯಲ್ಲಿ(Haveri) ಟಿಕೆಟ್‌ ನೀಡಲಾಗಿದೆ. ಹಾಗಂದ ಮಾತ್ರಕ್ಕೆ ಈಶ್ವರಪ್ಪ ಅವರ ಮಗ ಅಸಮರ್ಥರು ಎಂದು ಹೇಳಲಾಗುವುದಿಲ್ಲ. ನಮ್ಮ ರಾಷ್ಟ್ರೀಯ ನಾಯಕರು ಅವರದೇ ಆದ ಮಾನದಂಡಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್-ಬಿಜೆಪಿ ನಾಯಕರ ವಾಕ್ಸಮರ..! ಲೋಕಾ ಅಖಾಡದಲ್ಲಿ ಅಭ್ಯರ್ಥಿಗಳ ಏಟು-ಎದಿರೇಟು..!