ಹೊರ ಬಿತ್ತು ಮತ್ತೊಂದು ಸಮೀಕ್ಷೆ..ಮೋದಿಗೆ ಮತ್ತೆ ರಾಜ ಸಿಂಹಾಸನ..!

ಹೊರ ಬಿತ್ತು ಮತ್ತೊಂದು ಸಮೀಕ್ಷೆ..ಮೋದಿಗೆ ಮತ್ತೆ ರಾಜ ಸಿಂಹಾಸನ..!

Published : Aug 18, 2023, 01:16 PM IST

ಹ್ಯಾಟ್ರಿಕ್ ಬಾರಿಸಲಿದ್ದಾರೆ ಸೋಲಿಲ್ಲದ ಸರದಾರ ಮೋದಿ..!
ನಿಜವಾಗಲಿದೆ ಕೆಂಪುಕೋಟೆಯಲ್ಲಿ ಮೋದಿ ಮಾಡಿದ್ದ ಶಪಥ..!
ಪ್ರಧಾನಿ ಮೋದಿ ಜಗ ಮೆಚ್ಚಿದ ನಾಯಕ ಎನ್'ಡಿಎ ತ್ರಿಶತಕ..!

ಮೋದಿ ಚುನಾವಣಾ ಚದುರಂಗದ ಮಾಸ್ಟರ್'ಪೀಸ್. ಸತತ ಎರಡು ಲೋಕಸಭಾ(Loksabha) ಚುನಾವಣೆಗಳನ್ನು ಗೆದ್ದು ಚರಿತ್ರೆ ಸೃಷ್ಠಿಸಿದವರು. ಅಷ್ಟೇ ಯಾಕೆ ? ಈ ಕ್ಷಣ ಲೋಕಸಭಾ ಚುನಾವಣೆ ಏನಾದ್ರೂ ನಡೆದ್ರೆ, ಮತ್ತೆ ಮೋದಿಯೇ(Modi) ವಿಜೃಂಭಿಸಲಿದ್ದಾರೆ.. ಇದು ನಾವು ಹೇಳ್ತಿರೋ ಮಾತಲ್ಲ, ಸಮೀಕ್ಷೆ ಬಿಚ್ಚಿಟ್ಟಿರೋ ಸತ್ಯ. ಮೊನ್ನೆ ಆಗಸ್ಟ್ 15ರಂದು ಪ್ರಧಾನಿ ಮೋದಿಯವರು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಮಾತಾಡ್ತಾ ಶಪಥವೊದನ್ನು ಮಾಡಿದ್ರು. ಎರಡು ಬಾರಿ ದೇಶದ ಜನ ನಂಗೆ ಆಶೀರ್ವಾದ ಮಾಡಿದ್ದಾರೆ. ಮತ್ತೊಮ್ಮೆ ನಾನೇ ಇದೇ ಜಾಗದಲ್ಲಿ ನಿಂತು ತ್ರಿವರ್ಣ ಧ್ವಜ ಹಾರಿಸ್ತೀನಿ ಅಂತ ಮೋದಿ ದೃಢ ವಿಶ್ವಾಸದಿಂದ ಹೇಳಿದ್ರು. ಮೋದಿಯವರ ಶಪಥ ನಿಜವಾಗಲಿದೆ ಅಂತಿದೆ ಈಗ ಹೊರ ಬಿದ್ದಿರೋ ಲೋಕಸಭಾ ಚುನಾವಣಾ ಸಮೀಕ್ಷೆ. ರಾಷ್ಟ್ರೀಯ ಸುದ್ದಿವಾಹಿನಿ ಟೈಮ್ಸ್ ನೌ (Times Now survey) ಮತ್ತು ಇಟಿಜಿ ಸಂಸ್ಥೆ(ETG Institute) ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಮೋದಿ ಹ್ಯಾಟ್ರಿಕ್ ಬಾರಿಸೋದು ಗ್ಯಾರಂಟಿ ಅಂತ ಹೇಳಲಾಗಿದೆ. ಈ ಕ್ಷಣ ಏನಾದ್ರೂ ಲೋಕಸಭಾ ಚುನಾವಣೆ ನಡೆದ್ರೆ ಮೋದಿ ಸಾರಥ್ಯದ ಎನ್'ಡಿಎ ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಸತ 3ನೇ ಬಾರಿ ಅಧಿಕಾರಕ್ಕೇರಲಿದೆ ಅಂತ ಸಮೀಕ್ಷೆ ಹೇಳಿದೆ. ಇಂಡಿಯಾ(I.N.D.I.A) ಈ ಹೆಸರಲ್ಲಿ 26 ವಿರೋಧ ಪಕ್ಷಗಳು ಒಂದಾಗಿ ಮೋದಿ ವಿರುದ್ಧ ಮಹಾಮೈತ್ರಿಕೂಟ ರಚಿಸಿ ಲೋಕಸಂಗ್ರಾಮಕ್ಕೆ ರಣಕಹಳೆ ಮೊಳಗಿಸಿ ಬಿಟ್ಟಿವೆ. ಆದ್ರೆ ಎಷ್ಟೇ ಪಕ್ಷಗಳು ಒಂದಾದ್ರೂ, ನಾಯಕರ ಮಹಾಸಂಗಮವಾದ್ರೂ ಮೋದಿ ನಾಗಾಲೋಟವನ್ನು ತಡೆಯಲು ಯಾರಿಂದ್ಲೂ ಸಾಧ್ಯವಿಲ್ಲ ಅಂತ ಗೃಹ ಸಚಿವ ಅಮಿತ್ ಶಾ, ಮೊನ್ನೆ ಮೊನ್ನೆಯಷ್ಟೇ ಲೋಕಸಭೆಯಲ್ಲೇ ಅಬ್ಬರಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ತೆಲಂಗಾಣ, ಆಂಧ್ರದಲ್ಲಿ ಮೆತ್ತಗಾದ ಬಿಜೆಪಿ: ಇಬ್ಬರು ನಾಯಕರ ನಡುವೆ ಮೈತ್ರಿ ಮಾತುಕತೆ..?

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more