ಹೊರ ಬಿತ್ತು ಮತ್ತೊಂದು ಸಮೀಕ್ಷೆ..ಮೋದಿಗೆ ಮತ್ತೆ ರಾಜ ಸಿಂಹಾಸನ..!

ಹೊರ ಬಿತ್ತು ಮತ್ತೊಂದು ಸಮೀಕ್ಷೆ..ಮೋದಿಗೆ ಮತ್ತೆ ರಾಜ ಸಿಂಹಾಸನ..!

Published : Aug 18, 2023, 01:16 PM IST

ಹ್ಯಾಟ್ರಿಕ್ ಬಾರಿಸಲಿದ್ದಾರೆ ಸೋಲಿಲ್ಲದ ಸರದಾರ ಮೋದಿ..!
ನಿಜವಾಗಲಿದೆ ಕೆಂಪುಕೋಟೆಯಲ್ಲಿ ಮೋದಿ ಮಾಡಿದ್ದ ಶಪಥ..!
ಪ್ರಧಾನಿ ಮೋದಿ ಜಗ ಮೆಚ್ಚಿದ ನಾಯಕ ಎನ್'ಡಿಎ ತ್ರಿಶತಕ..!

ಮೋದಿ ಚುನಾವಣಾ ಚದುರಂಗದ ಮಾಸ್ಟರ್'ಪೀಸ್. ಸತತ ಎರಡು ಲೋಕಸಭಾ(Loksabha) ಚುನಾವಣೆಗಳನ್ನು ಗೆದ್ದು ಚರಿತ್ರೆ ಸೃಷ್ಠಿಸಿದವರು. ಅಷ್ಟೇ ಯಾಕೆ ? ಈ ಕ್ಷಣ ಲೋಕಸಭಾ ಚುನಾವಣೆ ಏನಾದ್ರೂ ನಡೆದ್ರೆ, ಮತ್ತೆ ಮೋದಿಯೇ(Modi) ವಿಜೃಂಭಿಸಲಿದ್ದಾರೆ.. ಇದು ನಾವು ಹೇಳ್ತಿರೋ ಮಾತಲ್ಲ, ಸಮೀಕ್ಷೆ ಬಿಚ್ಚಿಟ್ಟಿರೋ ಸತ್ಯ. ಮೊನ್ನೆ ಆಗಸ್ಟ್ 15ರಂದು ಪ್ರಧಾನಿ ಮೋದಿಯವರು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಮಾತಾಡ್ತಾ ಶಪಥವೊದನ್ನು ಮಾಡಿದ್ರು. ಎರಡು ಬಾರಿ ದೇಶದ ಜನ ನಂಗೆ ಆಶೀರ್ವಾದ ಮಾಡಿದ್ದಾರೆ. ಮತ್ತೊಮ್ಮೆ ನಾನೇ ಇದೇ ಜಾಗದಲ್ಲಿ ನಿಂತು ತ್ರಿವರ್ಣ ಧ್ವಜ ಹಾರಿಸ್ತೀನಿ ಅಂತ ಮೋದಿ ದೃಢ ವಿಶ್ವಾಸದಿಂದ ಹೇಳಿದ್ರು. ಮೋದಿಯವರ ಶಪಥ ನಿಜವಾಗಲಿದೆ ಅಂತಿದೆ ಈಗ ಹೊರ ಬಿದ್ದಿರೋ ಲೋಕಸಭಾ ಚುನಾವಣಾ ಸಮೀಕ್ಷೆ. ರಾಷ್ಟ್ರೀಯ ಸುದ್ದಿವಾಹಿನಿ ಟೈಮ್ಸ್ ನೌ (Times Now survey) ಮತ್ತು ಇಟಿಜಿ ಸಂಸ್ಥೆ(ETG Institute) ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಮೋದಿ ಹ್ಯಾಟ್ರಿಕ್ ಬಾರಿಸೋದು ಗ್ಯಾರಂಟಿ ಅಂತ ಹೇಳಲಾಗಿದೆ. ಈ ಕ್ಷಣ ಏನಾದ್ರೂ ಲೋಕಸಭಾ ಚುನಾವಣೆ ನಡೆದ್ರೆ ಮೋದಿ ಸಾರಥ್ಯದ ಎನ್'ಡಿಎ ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಸತ 3ನೇ ಬಾರಿ ಅಧಿಕಾರಕ್ಕೇರಲಿದೆ ಅಂತ ಸಮೀಕ್ಷೆ ಹೇಳಿದೆ. ಇಂಡಿಯಾ(I.N.D.I.A) ಈ ಹೆಸರಲ್ಲಿ 26 ವಿರೋಧ ಪಕ್ಷಗಳು ಒಂದಾಗಿ ಮೋದಿ ವಿರುದ್ಧ ಮಹಾಮೈತ್ರಿಕೂಟ ರಚಿಸಿ ಲೋಕಸಂಗ್ರಾಮಕ್ಕೆ ರಣಕಹಳೆ ಮೊಳಗಿಸಿ ಬಿಟ್ಟಿವೆ. ಆದ್ರೆ ಎಷ್ಟೇ ಪಕ್ಷಗಳು ಒಂದಾದ್ರೂ, ನಾಯಕರ ಮಹಾಸಂಗಮವಾದ್ರೂ ಮೋದಿ ನಾಗಾಲೋಟವನ್ನು ತಡೆಯಲು ಯಾರಿಂದ್ಲೂ ಸಾಧ್ಯವಿಲ್ಲ ಅಂತ ಗೃಹ ಸಚಿವ ಅಮಿತ್ ಶಾ, ಮೊನ್ನೆ ಮೊನ್ನೆಯಷ್ಟೇ ಲೋಕಸಭೆಯಲ್ಲೇ ಅಬ್ಬರಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ತೆಲಂಗಾಣ, ಆಂಧ್ರದಲ್ಲಿ ಮೆತ್ತಗಾದ ಬಿಜೆಪಿ: ಇಬ್ಬರು ನಾಯಕರ ನಡುವೆ ಮೈತ್ರಿ ಮಾತುಕತೆ..?

22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
Read more