Narendra Modi in Varanasi: ಕಾಶಿಯಿಂದಲೇ ಮೊಳಗಿದೆ ರಣಘೋಷ..! ಗಂಗಾಪುತ್ರ ಮೋದಿ ಬನಾರಸ್‌ಗೆ ಬಂದಿದ್ದೇಕೆ..?

Narendra Modi in Varanasi: ಕಾಶಿಯಿಂದಲೇ ಮೊಳಗಿದೆ ರಣಘೋಷ..! ಗಂಗಾಪುತ್ರ ಮೋದಿ ಬನಾರಸ್‌ಗೆ ಬಂದಿದ್ದೇಕೆ..?

Published : Mar 11, 2024, 05:56 PM IST

ಎದುರಾಳಿ ಪಡೆಗೆ ಮೋದಿ ನೀಡಿದ ನೇರ ಸಂದೇಶವೇನು? 
ಗಂಗೆಯ ಕೃಪೆ,ವಿಶ್ವನಾಥನ ಆಶೀರ್ವಾದ,ಮೋದಿಗೆ ವರ!
ಕಾಶಿಯ ಹ್ಯಾಟ್ರಿಕ್ ಗೆಲುವು ದಕ್ಕಿಸಿಕೊಡುತ್ತಾ ಸಿಂಹಾಸನ?

ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಿಂದ ರಾಷ್ಟ್ರದ ಪ್ರಧಾನಿಯಾಗೋದಕ್ಕೆ, ಬಿಜೆಪಿ (BJP) ಆಯ್ಕೆ ಮಾಡಿತ್ತಲ್ಲ. ಆಗ ಮೊದಲ ಬಾರಿಗೆ ಲೋಕಸಭಾ(Loksabha) ಕ್ಷೇತ್ರ ಪ್ರತಿನಿಧಿಸೋದಕ್ಕೆ ಮೋದಿ(Narendra Modi) ಆರಿಸಿಕೊಂಡಿದ್ದು ಇದೇ ಕಾಶಿ ಕ್ಷೇತ್ರವನ್ನ. ಹಾಗಂತ ಅವತ್ತು ಮೋದಿ ಸುಮ್ಮನೆ ಕಾಶಿಗೆ (Kashi) ಬರಲಿಲ್ಲ. ಇಲ್ಲಿ ಲೋಕಸಭೆಗೆ ನಾಮಪತ್ರ ಸಲ್ಲಿಸೋಕೆ ಬಂದಿದ್ದಾಗ ಒಂದು ಮಾತು ಹೇಳಿದ್ರು. ಬಿಜೆಪಿ ಮುಂದಿನ ಪ್ರಧಾನಿ ಅಭ್ಯರ್ಥಿ ಅಂತ ಮೋದಿಯನ್ನು ಘೋಷಿಸಿತ್ತು. ದೇಶದ ಮೂಲೆಮೂಲೆಯನ್ನೂ ಸಂಚಿರಿಸಿ ಪಕ್ಷವನ್ನು ಗೆಲ್ಲಿಸಿಕೊಳ್ಳಬೇಕಾದ ದೊಡ್ದ ಹೊಣೆ ಮೋದಿ ಅವರ ಮೇಲಿತ್ತು. ದೇಶದ ನಾನಾ ಭಾಗಗಳಲ್ಲಿರೋ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡುಬರಬಲ್ಲ ಶಕ್ತಿ ಇದ್ದ ಮೋದಿ, ಸ್ವತಃ ಅವರೇ ಯಾವ ಕ್ಷೇತ್ರ ಆಯ್ಕೆ ಮಾಡ್ಕೊಳ್ತಾರೆ ಅನ್ನೋ ದೊಡ್ಡ ಕುತೂಹಲವೂ ಜನರನ್ನ ಕಾಡ್ತಾ ಇತ್ತು. ಆ ಪ್ರಶ್ನೆಗೆ ಉತ್ತರ ಸಿಗೋಕೆ ಹೆಚ್ಚು ಕಾಲ ಬೇಕಾಗಲಿಲ್ಲ. ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿ ಅವರು  2 ಕ್ಷೇತ್ರಗಳನ್ನ ಆಯ್ಕೆ ಮಾಡ್ಕೊಂಡು ಅಗ್ನಿ ಪರೀಕ್ಷೆಗೆ ಧುಮುಕಿದ್ರು.. ಆ ಪೈಕಿ ಒಂದು, ಗುಜರಾತಿನ ವಡೋದರಾ. ಮತ್ತೊಂದು ಪುರಾತನ ನಗರಿ, ಕಾಶಿ. 

ಇದನ್ನೂ ವೀಕ್ಷಿಸಿ:  Lalu Prasad Yadav on Modi: "ಮೋದಿ ಕಾ ಪರಿವಾರ್"ನಲ್ಲಿದ್ದಾರೆ 6 ಮಂದಿ ..! ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಒಡಹುಟ್ಟಿದವರು ?

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more