ರಾಮನಗರದಿಂದ ಬೇರ್ಪಡುತ್ತಾ ಕನಕಪುರ..? ಮಾಜಿ ಸಿಎಂನ ಮಾಜಿ ಭದ್ರಕೋಟೆ ಮೇಲೆ ಇಬ್ಭಾಗಾಸ್ತ್ರ..?

ರಾಮನಗರದಿಂದ ಬೇರ್ಪಡುತ್ತಾ ಕನಕಪುರ..? ಮಾಜಿ ಸಿಎಂನ ಮಾಜಿ ಭದ್ರಕೋಟೆ ಮೇಲೆ ಇಬ್ಭಾಗಾಸ್ತ್ರ..?

Published : Oct 26, 2023, 02:02 PM IST

ರಾಮನಗರದಿಂದ ಬೇರ್ಪಡುತ್ತಾ ಕನಕಪುರ..?
ಡಿಕೆ ಮಾತಿಗೆ ಕೆಂಡವಾದ ಕುಮಾರಸ್ವಾಮಿ..!
ಏನಿದು ಒಕ್ಕಲಿಗ ನಾಯಕರ ಜಟಾಪಟಿ..?

ರಾಮನಗರ ಈಗ ಕರ್ನಾಟಕ ರಾಜಕೀಯದ ಕೇಂದ್ರ ಬಿಂದುವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿಯವರ(Former CM HD Kumaraswamy) ಮಾಜಿ ಭದ್ರಕೋಟೆಯ ಮೇಲೆ ಈಗ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಅವರ ಕಣ್ಣು ಬಿದ್ದಿದೆ. ರಾಮನಗರ(Ramanagar) ಜಿಲ್ಲೆಯಿಂದ ತಮ್ಮ ಸಾಮ್ರಾಜ್ಯವಾದ ಕನಕಪುರವನ್ನ(Kanakapura) ಬೇರ್ಪಡಿಸಿ ಬೆಂಗಳೂರಿಗೆ ಸೇರಿಸೋಕೆ ಡಿಕೆ ಶಿವಕುಮಾರ್ ಲೆಕ್ಕಾಚಾರ ಹಾಕ್ತಾ ಇದ್ದಾರೆ. ಇದೊಂದು ಮಾತು ಉಪ ಮುಖ್ಯಮಂತ್ರಿ ಬಾಯಿಂದ ಬಂದಿದ್ದೇ ತಡ, ರಾಜಕೀಯವಾಗಿ ದೊಡ್ಡ ಅಲೆಯೇ ಎದ್ದಿದೆ. ರಾಮನಗರದಲ್ಲಿ ಇಷ್ಟು ವರ್ಷ ಬಿಗಿಯಾದ ಹಿಡಿತ ಹೊಂದಿದ್ದ ಕುಮಾರಸ್ವಾಮಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನ, ತಮ್ಮ ಮಗನನ್ನ ಗೆಲ್ಲಿಸೋಕೆ ಸೋತಿದ್ದರು. ಜೆಡಿಎಸ್ ಭದ್ರಕೋಟೆಯಾಗಿದ್ದ ರಾಮನಗರ ಕಾಂಗ್ರೆಸ್ ಕೈವಶವಾಯ್ತು. ಈಗ ಅದು ಡಿಕೆ ಶಿವಕುಮಾರ್ ಕಂಟ್ರೋಲಿನಲ್ಲಿದೆ ಅಂದ್ರೂ ತಪ್ಪಾಗೋದಿಲ್ಲಾ. ಹೀಗಾಗಿ ಹೊಸದೊಂದು ರಾಜಕೀಯ ದಾಳವನ್ನ ಉರುಳಿಸೋಕೆ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಅದೇ ರಾಮನಗರ ಜಿಲ್ಲೆಯಿಂದ ತಮ್ಮ ಕ್ಷೇತ್ರವಾದ ಕನಕಪುರವನ್ನ ಬೇರ್ಪಡಿಸಿ ತಮ್ಮ ಕಾರ್ಯಕ್ಷೇತ್ರ ಬೆಂಗಳುರಿಗೆ ಸೇರಿಸೋದು. ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಅವರ ರಾಜಕೀಯ ಸಂಬಂಧ ಅರ್ಥವೇ ಆಗೋದಿಲ್ಲ. ಕೆಲವೊಮ್ಮೆ ದೋಸ್ತಿ.. ಉಳಿದಾಗಲೆಲ್ಲಾ ಕುಸ್ತಿ ಅನ್ನೋ ಥರ ವಿಲಕ್ಷಣ ವ್ಯಕ್ತಿತ್ವವನ್ನ ಅವರು ತೋರಿಸ್ತಾರೆ. ಕುಮಾರಸ್ವಾಮಿ ಅವರ ಸರ್ಕಾರವನ್ನ ಉಳಿಸಿಕೊಳ್ಳೋಕೆ ಯಾರಾದ್ರೂ ಶಕ್ತಿ ಮೀರಿ ಹೋರಾಡಿದ್ರೆ ಅದು ಡಿಕೆ ಶಿವಕುಮಾರ್. ಇನ್ನು ನಾವಿಬ್ಬರೂ ಜೋಡೆತ್ತುಗಳು ಅಂತ ಕೈ ಹಿಡಿದು ಎದೆಯುಬ್ಬಿಸಿ ಹೇಳಿದ್ರೆ ಅದು ಕುಮಾರಸ್ವಾಮಿ ಮಾತ್ರ.. ಇಂಥ ದೋಸ್ತಿಗಳ ಮಧ್ಯ ದಂಗಲ್ ಶುರುವಾಗಿದೆ.

ಇದನ್ನೂ ವೀಕ್ಷಿಸಿ:  ಒಕ್ಕಲಿಗ ನಾಯಕರ ನಡುವೆ ಕನಕಪುರ ವಾರ್‌: ಇದ್ದಕ್ಕಿದ್ದಂತೆ ಒಂದೇ ದಿನದಲ್ಲಿ ಡಿಕೆಶಿ ಉಲ್ಟಾ ಹೊಡೆದಿದ್ದೇಕೆ..?

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more