ವಿಧಾನಸಭೆಯಲ್ಲಿ ಸಿದ್ದು Vs ದಳಪತಿ ಮಾತಿನ ಮಲ್ಲಯುದ್ಧ..!: "ನಾವೇನು ನಿಮ್ಮ ಮುಲಾಜಿನಲ್ಲಿಲ್ಲ" ಹೆಚ್‌ಡಿಕೆ ಕೌಂಟರ್

ವಿಧಾನಸಭೆಯಲ್ಲಿ ಸಿದ್ದು Vs ದಳಪತಿ ಮಾತಿನ ಮಲ್ಲಯುದ್ಧ..!: "ನಾವೇನು ನಿಮ್ಮ ಮುಲಾಜಿನಲ್ಲಿಲ್ಲ" ಹೆಚ್‌ಡಿಕೆ ಕೌಂಟರ್

Published : Jul 07, 2023, 11:59 AM ISTUpdated : Jul 07, 2023, 12:00 PM IST

ಸಿಎಂ Vs ಮಾಜಿ ಸಿಎಂ ಕಾಳಗದ ಹಿಂದೆ ಮಂಡ್ಯ ಮಹಾಯುದ್ಧ..!
KSRTC ಡ್ರೈವರ್ ಆತ್ಮಹತ್ಯೆ ಯತ್ನ ಕೇಸ್‌ನಲ್ಲಿ ಭುಗಿಲೆದ್ದ ರಾಜಕೀಯ
ಮಂಡ್ಯದಲ್ಲಿ ಅಸ್ತಿತ್ವ ಅಲುಗಾಡಿಸಿದವರ ವಿರುದ್ಧ ಎಚ್‌ಡಿಕೆ ಯುದ್ಧ..!

ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah)  ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (Kumaraswamy) ಮಧ್ಯೆ ವಿಧಾನಸಭೆಯಲ್ಲಿ ರಣರೋಚಕ ಕಾಳಗವೇ ನಡೆದು ಹೋಯ್ತು. ಒಬ್ಬರಿಗೊಬ್ಬರು ಹಿಗ್ಗಾಮುಗ್ಗಾ ಬೈದಾಡಿಕೊಂಡ್ರು. ವಿಧಾನಸಭಾ ಅಧಿವೇಶನ (Assembly session)  ಶುರುವಾದ ದಿನದಿಂದ್ಲೇ ಸರ್ಕಾರದ ವಿರುದ್ಧ ಮುಗಿ ಬಿದ್ದಿರೋ ದಳಪತಿ ಕುಮಾರಸ್ವಾಮಿ, ಗುರುವಾರ ಸದನದಲ್ಲೇ ಜಟಾಪಟಿಗೆ ನಿಂತ್ರು. ಎಚ್ಡಿಕೆ ಸವಾಲಿಗೆ ತೊಡೆ ತಟ್ಟಿ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾವೇನು ಕಮ್ಮಿ ಅನ್ನೋ ರೀತಿಯಲ್ಲಿ ಅಕ್ಷರಶಃ ಆರ್ಭಟಿಸಿದ್ರು. ಮಂಡ್ಯ(Mandya) ಅಂದ್ರೆ ರಾಜ್ಯ ರಾಜಕಾರಣದಲ್ಲಿ ಯಾವಾಗ್ಲೂ ಒಂದು ಸಂಚಲನ. ಸಕ್ಕರೆ ನಾಡು ಮಂಡ್ಯ ರಣ ರಣ ರಾಜಕಾರಣಕ್ಕೆ ಹೆಸರುವಾಸಿ. ಮಂಡ್ಯ ಮಣ್ಣಿನ ಕಣಕಣದಲ್ಲೂ ರಾಜಕೀಯವಿದೆ, ಮನೆ ಮನೆಯಲ್ಲೂ ರಾಜಕೀಯದ ಗಾಳಿಯಿದೆ. ಮಂಡ್ಯ ಮಣ್ಣಿನಿಂದ ಎದ್ದು ಬಂದು ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡಿದವರು ಒಬ್ರಲ್ಲ ಇಬ್ರಲ್ಲ. ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಎದ್ದು ಬಂದದ್ದೂ ಇಲ್ಲಿಂದ್ಲೇ, ರೆಬೆಲ್ ಸ್ಟಾರ್ ಅಂಬರೀಶ್ ಅಬ್ಬರಿಸಿದ್ಲೂ ಮಂಡ್ಯದಿಂದ್ಲೇ.. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಕಾವೇರಿ ಹೋರಾಟದ ಕೇಂದ್ರಸ್ಥಾನವಾಗಿದ್ದು, ದಳಪತಿಗಳನ್ನು ಮಟ್ಟ ಹಾಕಿ ರೆಬೆಲ್ ಲೇಡಿ ಸುಮಲತಾ ಅಂಬರೀಶ್ ಲೋಕಸಭೆಗೆ ಎಂಟ್ರಿ ಕೊಟ್ಟದ್ದೂ ಮಂಡ್ಯ ಮಣ್ಣಿನಿಂದ್ಲೇ.

ಇದನ್ನೂ ವೀಕ್ಷಿಸಿ:  Karnataka Budget 2023-24: ವಾಣಿಜ್ಯ, ಅಬಕಾರಿ ಶುಲ್ಕ, ಆಸ್ತಿ, ವೃತ್ತಿಪರ ತೆರಿಗೆ ಹೆಚ್ಚಳ ಸಾಧ್ಯತೆ ?

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
22:55Karnataka Politics: ಉಭಯ ಸಂಕಟದಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್! ಹೇಗಿವೆ ಸಿದ್ದು-ಡಿಕೆ ಪಟ್ಟುಗಳು?
Read more