ನನ್ನ ರಾಜಕೀಯ ಅಂತ್ಯ ತೀರ್ಮಾನಿಸೋದು ಜನ: ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಡಿಕೆಶಿ ತಿರುಗೇಟು

Jun 21, 2024, 1:05 PM IST

ಡಿಸಿಎಂ ಡಿಕೆ ಶಿವಕುಮಾರ್‌ ರಾಜಕೀಯ ಅಂತ್ಯ ಚನ್ನಪಟ್ಟಣದಿಂದಲೇ( Channapatna) ಎಂದು ಸಿ.ಪಿ.ಯೋಗೇಶ್ವರ್‌( CP Yogeshwara) ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಡಿಕೆ ಶಿವಕುಮಾರ್‌(DK Shivakumar), ನನ್ನ ರಾಜಕೀಯ ಅಂತ್ಯ ತೀರ್ಮಾನಿಸೋದು ಜನರು. ಇಂತಹ ದೊಡ್ಡವರ ಮಾತಿಗೆಲ್ಲಾ ಉತ್ತರಿಸೋಕೆ ಹೋಗಲ್ಲ. ನಾನು ಆ ಜಿಲ್ಲೆಯವನು, ಜನರ ಬಳಿ ಕೇಳಿದ್ದೇನೆ. ನಿಮ್ಮ ಋಣ ತೀರಿಸಲು ಅವಕಾಶ ಕೊಡಿ ಎಂದಿದ್ದೇನೆ. ನನ್ನ ಹಿಂದೆ ಒಂದು ಶಕ್ತಿ ಇದೆ, ಆ ಶಕ್ತಿಯೇ ಜನರು. ನಾನು ಚನ್ನಪಟ್ಟಣದವನು, ಜನರ ಬಳಿ ಕೇಳಿದ್ದೇನೆ ಎಂದು ಡಿಕೆಶಿ ಹೇಳಿದರು.

ಇದನ್ನೂ ವೀಕ್ಷಿಸಿ:  ಕಾಂತಾರ ಸಿನಿಮಾ ಹೋಲುವ ಮತ್ತೊಂದು ದೈವ ಪವಾಡ!'ಇದು ಅವನ ಮತ್ತು ನನ್ನ ಲೆಕ್ಕ'ವೆಂದು ಎಚ್ಚರಿಕೆ ಕೊಟ್ಟ ದೈವ!