ದಳಪತಿಗಳ ಮೈತ್ರಿ ಮಾತು: ಬಿಜೆಪಿ ಬಳಿ ಯಾವೆಲ್ಲ ಬೇಡಿಕೆ ಇಡಲಿದೆ ಜೆಡಿಎಸ್‌..?

ದಳಪತಿಗಳ ಮೈತ್ರಿ ಮಾತು: ಬಿಜೆಪಿ ಬಳಿ ಯಾವೆಲ್ಲ ಬೇಡಿಕೆ ಇಡಲಿದೆ ಜೆಡಿಎಸ್‌..?

Published : Sep 22, 2023, 11:36 AM IST

ದೇವೇಗೌಡರು, ಕುಮಾರಸ್ವಾಮಿ ಮಾತಿಗೆ ಸರ್ವಾನುಮತದ ಸಮ್ಮತಿ
ಅವರಿಬ್ಬರು ಏನು ಹೇಳ್ತಾರೋ ಅದನ್ನ ಒಪ್ಪಿಕೊಳ್ತೀವಿ ಎಂದ ರೇವಣ್ಣ
ಹಾಸನ, ಮಂಡ್ಯ, ತುಮಕೂರು ಪಡೆಯಲು ಜೆಡಿಎಸ್ ಸಿದ್ಧತೆ

ಜೆಡಿಎಸ್-ಬಿಜೆಪಿ ಮೈತ್ರಿಯ ಅಂತಿಮ ಹಂತದ ಕಸರತ್ತು ನಡೆಯುತ್ತಿದೆ. ಗುರುವಾರ ತಡರಾತ್ರಿವರೆಗೂ ದಳಪತಿಗಳ ಹೈ ವೋಲ್ಟೇಜ್ ಮೀಟಿಂಗ್ ನಡೆದಿದೆ. ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ, ಕುಮಾರಸ್ವಾಮಿ ನೇತೃತ್ವದಲ್ಲಿ ಮ್ಯಾರಥಾನ್ ಮೀಟಿಂಗ್ ನಡೆಸಲಾಗಿದೆ. ಬಿಜೆಪಿ(BJP) ಭೇಟಿಗೂ ಮುನ್ನ ಜೆಡಿಎಸ್(JDS) ನಾಯಕರು ಸಭೆ ನಡೆಸಿದ್ದು, ಮೈತ್ರಿ ಸಂಬಂಧ ದೇವೇಗೌಡರ(Devegowda) ದೆಹಲಿ ನಿವಾಸದಲ್ಲಿ ಮಾತುಕತೆ ನಡೆಸಲಾಗಿದೆ. ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ, ಹೆಚ್‌.ಡಿ. ರೇವಣ್ಣ, ಪ್ರಜ್ವಲ್, ನಿಖಿಲ್, ಸಾರಾ ಮಹೇಶ್ ಈ ಸಭೆಯಲ್ಲಿ ಭಾಗಿಯಾಗಿದ್ದರು. ಬಿಜೆಪಿ ಬಳಿ ಯಾವೆಲ್ಲ ಬೇಡಿಕೆ ಇಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನಲಾಗ್ತಿದೆ. ಯಾವೆಲ್ಲಾ ಕ್ಷೇತ್ರಗಳನ್ನು ಪಡೆಯಬೇಕು ಎಂದು ಮಾತುಕತೆ ನಡೆಸಿದ್ದು, ದೇವೇಗೌಡರು, ಕುಮಾರಸ್ವಾಮಿ ಮಾತಿಗೆ ಸರ್ವಾನುಮತದ ಸಮ್ಮತಿ ಸಿಕ್ಕಿದೆ ಎನ್ನಲಾಗ್ತಿದೆ. ಅವರಿಬ್ಬರು ಏನು ಹೇಳ್ತಾರೋ ಅದನ್ನ ಒಪ್ಪಿಕೊಳ್ತೀವಿ ಎಂದು ರೇವಣ್ಣ ಹೇಳಿದ್ದಾರಂತೆ. ಇಂದು ಜೆಡಿಎಸ್ ನಾಯಕರಿಂದ ಅಮಿತ್ ಶಾ(Amit Shah) ಭೇಟಿ ಮಾಡುವ ಸಾಧ್ಯತೆ ಇದೆ. ನಿನ್ನೆ ನಡೆಯುಬೇಕಿದ್ದ ಸಭೆ, ಮೀಸಲಾತಿ ಮಂಡನೆ ಹಿನ್ನೆಲೆ ಮುಂದೂಡಿಕೆಯಾಗಿದೆ. ಅಷ್ಟೇ ಅಲ್ಲದೇ ದೇವೇಗೌಡರನ್ನು ಗೋವಾ ಸಿಎಂ ಪ್ರಮೋದ್ ಸಾವಂತ್ ಭೇಟಿಯಾಗಿದ್ದಾರೆ. ಅಮಿತ್ ಶಾ ಭೇಟಿಗೂ ಮುನ್ನ ಸ್ಥಾನಗಳ ಸಂಖ್ಯೆ ಖಚಿತ ಪಡಿಸಿ ಎಂದು ಸಾವಂತ್ ಹೇಳಿದ್ದಾರಂತೆ. ಹಾಸನ, ಮಂಡ್ಯ, ತುಮಕೂರು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗ್ತಿದೆ.

ಇದನ್ನೂ ವೀಕ್ಷಿಸಿ:  ಡಿಎಂಕೆ ಮುಖಂಡ ಗುರುಸ್ವಾಮಿ ಮೂರ್ತಿ ಮೇಲೆ ಹಲ್ಲೆ: ಅಟ್ಯಾಕ್‌ನ ಭೀಕರ ದೃಶ್ಯ ಇಲ್ಲಿದೆ..

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more