ಮುಗಿಯಿತಾ ಶಾಸಕ Vs ಸಚಿವರ ಅಂತರ್ಯುದ್ಧ ?: ಕೈ ಶಾಸಕಾಂಗ ಸಭೆಯಲ್ಲಿ ಒಳ ಬೇಗುದಿ ಸ್ಫೋಟ..!

ಮುಗಿಯಿತಾ ಶಾಸಕ Vs ಸಚಿವರ ಅಂತರ್ಯುದ್ಧ ?: ಕೈ ಶಾಸಕಾಂಗ ಸಭೆಯಲ್ಲಿ ಒಳ ಬೇಗುದಿ ಸ್ಫೋಟ..!

Published : Jul 29, 2023, 03:07 PM IST

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಒಳ ಬೇಗುದಿ ಸ್ಫೋಟ..!
ಕಾಂಗ್ರೆಸ್ ಶಾಸಕರ  ಹೃದಯ ಸಮುದ್ರ ಕಲಕಿದ್ದೇಕೆ ಗೊತ್ತಾ..?
ಸೀನಿಯರ್‌ಗಳ ಸಿಟ್ಟು,ಮಂತ್ರಿಗಳ ವಿರುದ್ಧ ದಂಗೆ,ಪತ್ರ ವ್ಯವಹಾರ
ಕಿಡಿ ಹೊತ್ತಿಸಿದ ಶಾಸಕರಿಗೆ ಸಿದ್ದು,ಡಿಸಿಎಂ ಡಿಕೆಶಿ ಕಿವಿ ಮಾತು..!
 

ಪ್ರಚಂಡ ಬಲದೊಂದಿಗೆ ಅಸ್ತಿತ್ವಕ್ಕೆ ಬಂದಿದ್ದ ಕೈ ಸರ್ಕಾರ. ಜೋಡೆತ್ತು ಸಾರಥ್ಯದ ಸರ್ಕಾರಕ್ಕೆ ಎರಡು ತಿಂಗಳು ತುಂಬುತ್ತಲೇ ರೆಬೆಲ್ ಆದ್ರು ಶಾಸಕರು. ಹಿರಿಯ ಶಾಸಕರ(MLAs) ಅಸಮಾಧಾನದ ಕಿಡಿಗೆ ಕಾಂಗ್ರೆಸ್‌(Congress) ಬೆಚ್ಚಿ ಬಿದ್ದಿದೆ. ಕೈ ಕೋಟೆಯೊಳಗೆ ಎದ್ದಿದ್ದ ಅಸಮಾಧಾನದ ಬೆಂಕಿಯ ಅಗ್ನಿಕುಂಡವೀಗ ಬೂದಿ ಮುಚ್ಚಿದ ಕೆಂಡವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎದುರಾಗಿದ್ದ ಮೊದಲ ಅಗ್ನಿಪರೀಕ್ಷೆ ಅಂದರೇ, ಇದು ಸ್ವಂತ ಶಾಸಕರ ಕಾರಣದಿಂದಲೇ ಭುಗಿಲೆದ್ದಿದ್ದ ಅಸಮಾಧಾನ. ಇದು ಪ್ರತಿಪಕ್ಷ ಬಿಜೆಪಿಗೆ (BJP)ಅಸ್ತ್ರವಾಗಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಪತನದ ಭೀತಿಯಿಲ್ಲ. ಕಾರಣ, ಸರ್ಕಾರದ ಬೆನ್ನಿಗಿರೋದು 135+3 ಶಾಸಕರ ಪ್ರಚಂಡ ಬಲ. ಹೀಗಾಗಿ ಯಾವ ಆಪರೇಷನ್ ಭಯವೂ ಸಿದ್ದು ಸರ್ಕಾರಕ್ಕಿಲ್ಲ. ಆದ್ರೆ ಯಾವ ಶಾಸಕರ ಶಕ್ತಿಯಿಂದ ಸರ್ಕಾರದ ರಚನೆಯಾಗಿದ್ಯೋ, ಅದೇ ಶಾಸಕರು ತಿರುಗಿ ಬಿದ್ರೆ..? ಆಗ ಟೆನ್ಷನ್ ಶುರುವಾಗೋದು ಸಹಜ. ಸಿದ್ದರಾಮಯ್ಯನವರಿಗೆ(Siddaramaiah) ಶುರುವಾಗಿದ್ದ ಟೆನ್ಷನ್ ಅದೇ. ಈ ಹಿನ್ನೆಲೆಯಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ಸಭೆ ಕರೆದಿದ್ರು. ಆ ಸಭೆಯಲ್ಲಿ ಶಾಸಕರ ಒಳ ಬೇಗುದಿ, ಅತೃಪ್ತಿಯ ಕಿಡಿ ಸ್ಫೋಟವಾಗಿದೆ.

ಇದನ್ನೂ ವೀಕ್ಷಿಸಿ:  3ನೇ ಸಲ ಗೆದ್ದು, ಮತ್ತೆ ಗದ್ದುಗೆ ಏರೋಕೆ ಸಿದ್ಧ: ಅಬ್ ಕಿ ಬಾರ್.. ಫಿರ್ ಏಕ್ ಬಾರ್ ಬಳಿಕ ತೀಸ್ರೇ ಬಾರ್!

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!