ಕಾಂಗ್ರೆಸ್‌ ಸರ್ಕಾರದ ಆರು ತಿಂಗಳ ಸಾಧನೆಗಳೇನು ? ಸಿದ್ದು ಸರ್ಕಾರ ಜಾರಿ ಮಾಡಿದ ಯೋಜನೆಗಳೇನು..?

ಕಾಂಗ್ರೆಸ್‌ ಸರ್ಕಾರದ ಆರು ತಿಂಗಳ ಸಾಧನೆಗಳೇನು ? ಸಿದ್ದು ಸರ್ಕಾರ ಜಾರಿ ಮಾಡಿದ ಯೋಜನೆಗಳೇನು..?

Published : Nov 21, 2023, 03:02 PM IST

ಸಿದ್ದು ಸರ್ಕಾರಕ್ಕೆ 6 ತಿಂಗಳು..!
ಸಿಎಂ-ಡಿಸಿಎಂ ಶೀತಲ ಸಮರ..!
ಬಿಸಿತುಪ್ಪವಾದ್ರಾ ಯತೀಂದ್ರ..?
ಸವಾಲುಗಳ ಜೊತೆ ರಾಜ್ಯಭಾರ..!

ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಕರ್ನಾಟಕದಲ್ಲಿ(Karnataka) ಆಡಳಿತ ಶುರು ಮಾಡಿದ ಕಾಂಗ್ರೆಸ್ 6 ತಿಂಗಳ ಪಯಣ ಕಂಡಿದೆ. ಈ ಆರು ತಿಂಗಳಲ್ಲಿ ಸಿದ್ದು ಸರ್ಕಾರ ಅನೇಕ ಏಳು ಬೀಳುಗಳನ್ನ ಕಂಡಿದೆ. ಗ್ಯಾರಂಟಿಗಳಿಂದ(Guarantees) ಜನ ಮನ ಗೆದ್ದಿರೋ ಸರ್ಕಾರ ಅನೇಕ ಸವಾಲುಗಳ ಜೊತೆಗೆ ಸಾಗ್ತಾ ಇದೆ. ಬನ್ನಿ ಹಾಗಾದ್ರೆ ಆರು ತಿಂಗಳಲ್ಲಿ ಏನೆಲ್ಲಾ ಆಯ್ತು ಅನ್ನೋದನ್ನ ನೋಡೋಣ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್(Congress) ಸರ್ಕಾರಕ್ಕೆ ಆರು ತಿಂಗಳು ಕಳೆದಿದೆ. ಅರ್ಧ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನ ಜಾರಿ ಮಾಡಿ ಜನಮನ ಗೆದ್ದಿದೆ. ಆದ್ರೆ ಅನೇಕ ಸವಾಲುಗಳು ಪಕ್ಷಕ್ಕೆ ಹಾಗೂ ಸರ್ಕಾರವನ್ನ ನಡೆಸೋಕೆ ಆಗಾಗ ಎದುರಾಗ್ತಾನೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತ್ತು. ಕುರುಕ್ಷೇತ್ರ ಕದನದಲ್ಲಿ ಕಮಾಲ್ ಮಾಡಿದ ಕೈ ಪಡೆ  136 ಸೀಟು ಗೆದ್ದು ಸ್ಪಷ್ಟ ಬಹುಮತ ಸರ್ಕಾರ ರಚಿಸಿತ್ತು. ಆದ್ರೆ ಸುಲಭವಾಗಿ ಸಿದ್ದರಾಮಯ್ಯ ಸಿಎಂ ಆಗಲಿಲ್ಲಾ. ಆ ಪಟ್ಟಕ್ಕಾಗಿ ಡಿಕೆಶಿ ತುಂಬಾನೇ ಪಟ್ಟು ಹಿಡಿದಿದ್ರು. ಸಿದ್ದರಾಮಯ್ಯ(Siddaramaiah) ವರುಣದಲ್ಲಿ 45 ಸಾವಿರ ಮತಗಳ ಪಡೆದು ಗೆದ್ದು ಬೀಗಿದ್ರೆ.. ಕನಪುರದಲ್ಲಿ ಡಿ.ಕೆ ಶಿವಕುಮಾರ್(DK Shivakumar) 1 ಲಕ್ಷಕ್ಕೂ ಅಧಿಕ ವೋಟ್‌ಗಳಿಂದ ಜಯಭೇರಿಯಾಗಿದ್ದಾರೆ. ಇಡೀ ಚುನಾವಣಾ ಕಣದಲ್ಲಿ ಅತಿ ಹೆಚ್ಚು ಮತಗಳಿಂದ ಗೆದ್ದವರೇ ಕನಕಪುರಾಧೀಶ್ವರ  ಡಿಕೆ ಶಿವಕುಮಾರ್. ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಿಎಂ ಕನಸಲ್ಲಿ ಇದ್ದರು. ಅದೊಂದು ಚುನಾವಣೆಯಿಂದ ದೇಶಾದ್ಯಂತ ಸದ್ದು ಮಾಡಿದ್ರು. ಹೀಗಾಗಿ ಡಿಕೆ ಶಿವಕುಮಾರ್ ಅವರೇ ಸಿಎಂ ಆಗಬಹುದು ಅನ್ನೋ ಲೆಕ್ಕಾಚಾರಗಳು ಶುರುವಾಗಿತ್ತು. ಬಟ್ ಸಿದ್ರಾಮಯ್ಯನವರು ಕೂಡ ಹೈಕಮಾಂಡ್ ಮುಂದೆ ತಮ್ಮ ಪ್ರಬಲ ವಾದವನ್ನ ಇಟ್ಟಿದ್ರು. ಮೂರ್ನಾಲ್ಕು ದಿನಗಳ ಮ್ಯಾರಥಾನ್ ಮೀಟಿಂಗ್ ನಂತರ ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಆಯ್ಕೆ ಆದ್ರು. 

ಇದನ್ನೂ ವೀಕ್ಷಿಸಿ:  ಮೋದಿ ಗ್ಯಾರೆಂಟಿ ನಿಜವಾಗೋಕೆ ಇನ್ನೆಷ್ಟು ದಿನ ಬಾಕಿ..? ಭಾರತದ ಈ ಮಹಾಸಾಧನೆ ಹಿಂದಿರೋ ಅಸಲಿ ಕಥೆ ಏನು?

22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
Read more