ಕಾಂಗ್ರೆಸ್  ಪಾಲಿಗೆ ತಲೆನೋವಾಯ್ತಾ ಕಮಿಷನ್ ಕಂಟಕ..?  ಶುರುವಾಯ್ತು ರಣ ರಾಜಕಾರಣ !

ಕಾಂಗ್ರೆಸ್ ಪಾಲಿಗೆ ತಲೆನೋವಾಯ್ತಾ ಕಮಿಷನ್ ಕಂಟಕ..? ಶುರುವಾಯ್ತು ರಣ ರಾಜಕಾರಣ !

Published : Aug 12, 2023, 02:22 PM IST

ಸಿದ್ದರಾಮಯ್ಯ ಸರ್ಕಾರದ ಮುಂದೆ ಗುತ್ತಿಗೆದಾರರ ಭಾಗ್ಯದ ಬೇಡಿಕೆ!
ಕಮಿಷನ್ ವಿಚಾರದಲ್ಲಿ ಶುರುವಾಗಿದೆ ರಣರಣ ರಾಜಕಾರಣ..!
ಮಾತಲ್ಲೇ ಹೊಸ ಸರ್ಕಾರಕ್ಕೆ ಕ್ಲೀನ್ ಚಿಟ್ ಕೊಟ್ಟರಾ ಕೆಂಪಣ್ಣ..?

ಈ ಹಿಂದೆ ಬಿಜೆಪಿ(BJP) ಸರ್ಕಾರ ಇದ್ದಾಗ, 40 ಪರ್ಸಂಟ್ ಕಮಿಷನ್(Commission) ಅನ್ನೋ ಬಿರುಗಾಳಿ ಬೀಸಿತ್ತು. ಅದರ ಅಬ್ಬರಕ್ಕೆ ಸರ್ಕಾರ ಅಲುಗಾಡಿದ್ದಂತೂ ನಿಜ. ಅಂದು ಬಿಜೆಪಿ ಸರ್ಕಾರದ ವಿರುದ್ಧ, ಇಂದು ಆಡಳಿತ ನಡೆಸ್ತಾ ಇರೋ ಕಾಂಗ್ರೆಸ್ ಹೋರಾಟ ಮಾಡಿತ್ತು. ಆದ್ರೆ ಈಗ ನೋಡಿದ್ರೆ, ಆ ಕಮಿಷನ್ ಕಂಟಕ ಕಾಂಗ್ರೆಸ್ (Congress) ಕೊರಳಿಗೂ ಸುತ್ತಿಕೊಳ್ತಿದೆ ಅನ್ನೋ ಮಾತು ಕೇಳಿಬರ್ತಾ ಇದೆ. ಹೊಸದೊಂದು ಕೋಲಾಹಲ ಶುರುವಾಗಿದೆ. ಗುತ್ತಿಗೆದಾರರು ಆಡೋ ಒಂದೊಂದು ಮಾತೂ ಕೂಡ ರಾಜಕೀಯ ಚದುರಂಗದ ದಿಕ್ಕು ದೆಸೆ ಬದಲಾಯಿಸ್ತಾ ಇದೆ. ಅದರಲ್ಲೂ ಕಮಿಷನ್ ಆರೋಪದ ಕಹಾನಿಯಲ್ಲಿ, ಟ್ವಿಸ್ಟ್ ಮೇಲೆ ಟ್ವಿಸ್ಟ್ ಎದುರಾಗ್ತಾ ಇದೆ. ಕಮಿಷನ್ ಆರೋಪ ಅನ್ನೋ ತೂಫಾನ್  ಕಳೆದ ಸಲ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಬುಡವನ್ನೇ ಅಲುಗಾಡಿಸಿತ್ತು. ಅದು ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಮುನ್ನುಡಿ ಬರೆದಿದ್ದ ಸುನಾಮಿ ಅಂದ್ರೂ ತಪ್ಪಾಗಲಿಕ್ಕಿಲ್ಲ. ಅದೇ ತೂಫಾನ್, ಅದೇ ಸುನಾಮಿ ಈಗ ಕಾಂಗ್ರೆಸ್ ಸರ್ಕಾರದ ಮೇಲೆ ಅಪ್ಪಳಿಸ್ತಿರೊ ಹಾಗೆ ಕಾಣ್ತಾ ಇದೆ.. ಸಿದ್ದರಾಮಯ್ಯನೋರ(Siddaramaiah) ಸರ್ಕಾರಕ್ಕೆ ಕಮಿಷನ್ ಕಂಟಕ ಶುರುವಾಗಿದೆ.

ಇದನ್ನೂ ವೀಕ್ಷಿಸಿ:  ರೀಲ್ಸ್‌ನಿಂದ ಸಂಸಾರದಲ್ಲಿ ಬಿರುಕು: ಕೊಲೆಗಾರನ ಮನಸ್ಸು ಬದಲಿಸಿದ್ಲು ನಿಮಿಷಾಂಬ ತಾಯಿ !

19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
Read more