ಮಂತ್ರಿಸ್ಥಾನ ತಪ್ಪಿದ್ದೇ “ಹರಿ” ಕಥೆ  "ಉರಿ"ಕಥೆಗೆ ಕಾರಣವಾಯ್ತಾ..?: ಕಿಚ್ಚಿಗೆ ತುಪ್ಪ ಸುರಿದ ಕೇಸರಿ ಕಲಿಗಳು..!

ಮಂತ್ರಿಸ್ಥಾನ ತಪ್ಪಿದ್ದೇ “ಹರಿ” ಕಥೆ "ಉರಿ"ಕಥೆಗೆ ಕಾರಣವಾಯ್ತಾ..?: ಕಿಚ್ಚಿಗೆ ತುಪ್ಪ ಸುರಿದ ಕೇಸರಿ ಕಲಿಗಳು..!

Published : Jul 23, 2023, 12:10 PM IST

ಸಿಎಂ ಸಿದ್ದು ವಿರೋಧಿ ಬಣದ ಮೊದಲ ಕಿಡಿ ಸ್ಫೋಟ..!
ಸಿದ್ದರಾಮಯ್ಯ ವಿರುದ್ಧ ಸಿಡಿದದ್ದೇಕೆ ಕಟ್ಟರ್ ಕಾಂಗ್ರೆಸ್ಸಿಗ ?
ಮಂತ್ರಿಸ್ಥಾನ ತಪ್ಪಿದ್ದೇ ಹರಿಪ್ರಸಾದ್ ಆಕ್ರೋಶಕ್ಕೆ ಕಾರಣನಾ..?

ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ರಾಜಕೀಯ ಕುಸ್ತಿ ಅಖಾಡದ ಪೈಲ್ವಾನನೂ ಹೌದು, ರಣಸಾಹಸ ಗಟ್ಟಿಗನೂ ಹೌದು. ಸಿದ್ದು ಹಾಕೋ ಪಟ್ಟುಗಳು ಅದೆಷ್ಟು ಇಂಟ್ರೆಸ್ಟಿಂಗ್ ಅಂದ್ರೆ, ಆ ಪಟ್ಟುಗಳ ಮುಂದೆ  ಜಟ್ಟಿಗಳು ನೆಲಕ್ಕುರುಳೋದೋ ಗೊತ್ತಾಗಲ್ಲ. ಇನ್ನು ರಾಜಕೀಯ ಪಗಡೆಯಾಟದಲ್ಲೂ ಸಿದ್ದರಾಮಯ್ಯನವರದ್ದು ಎತ್ತಿದ ಕೈ. ದೇವೇಗೌಡ್ರಂಥಾ ದೇವೇಗೌಡ್ರನ್ನೇ ಎದುರು ಹಾಕೊಂಡು ರಾಜಕೀಯ ಮಾಡಿದವರು. ಕಾಂಗ್ರೆಸ್(Congress) ಸೇರಿದ್ಮೇಲೆ ಅತಿರಥ ಮಹಾರಥಿಗಳನ್ನೇ ಮೀರಿಸಿ ಎರಡೆರಡು ಬಾರಿ ಮುಖ್ಯಮಂತ್ರಿ ಆದರು. ರಾಜ್ಯ ರಾಜಕಾರಣದ ಮಹಾವೀರ, ಮಹಾಚತುರ, ಅತಿ ಬಲಿಷ್ಠ ನಾಯಕ ಸಿದ್ದರಾಮಯ್ಯನವರನ್ನು ಎದುರಿಸಿ ನಿಲ್ಲೋದಕ್ಕೆ ಎಂಟೆದೆ ಬೇಕು. ಆ ಎಂಟೆದೆಯನ್ನು ತೋರಿಸೋ ವಿರೋಧ ಪಕ್ಷದ ನಾಯಕನನ್ನು ಬಿಜೆಪಿ(BJP) ಇನ್ನೂ ಆಯ್ಕೆ ಮಾಡಿಲ್ಲ. ಆದ್ರೂ ಬಿಜೆಪಿ ನಾಯಕರು ಒಳಗೊಳಗೇ ಹಾಲು ಕುಡಿದಷ್ಟೇ ಖುಷಿಯಲ್ಲಿದ್ದಾರೆ. ಕಾರಣ ಏನ್ ಗೊತ್ತಾ, ಸಿದ್ದರಾಮಯ್ಯನವರಿಗೆ ಕಾಂಗ್ರೆಸ್‌ನಲ್ಲೇ ವಿರೋಧ ಪಕ್ಷದ ನಾಯಕರೊಬ್ಬರು ಹುಟ್ಟಿಕೊಂಡಿದ್ದಾರೆ. ಸಿದ್ದು ಮುಖ್ಯಮಂತ್ರಿಯಾಗಿ ಎರಡು ತಿಂಗಳು ಪೂರ್ತಿಯಾದ ಬೆನ್ನಲ್ಲೇ ಅವ್ರು ಸಿದ್ದರಾಮಯ್ಯ ವಿರುದ್ಧ ಸಿಡಿದು ನಿಂತಿದ್ದಾರೆ. ಅಂದ ಹಾಗೆ ಅವ್ರ ಹೆಸರು ಬಿ.ಕೆ ಹರಿಪ್ರಸಾದ್.

ಇದನ್ನೂ ವೀಕ್ಷಿಸಿ:  ತಗ್ಗು ಗುಂಡಿಯಲ್ಲಿ ನಿಂತಿದ್ದ ನೀರು: ಇಬ್ಬರು ಬಾಲಕರು ಬಲಿ

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more