2024ರಲ್ಲಿ ಗೆಲ್ಲೋರ್ ಯಾರು..? ಬೀಳೋರ್ ಯಾರು..? ಖಡಕ್ ಚಾಲೆಂಜ್ ಬೆನ್ನತ್ತಿ ಹೊರಟಿದ್ದಾರೆ ತ್ರಿಮೂರ್ತಿಗಳು..!

2024ರಲ್ಲಿ ಗೆಲ್ಲೋರ್ ಯಾರು..? ಬೀಳೋರ್ ಯಾರು..? ಖಡಕ್ ಚಾಲೆಂಜ್ ಬೆನ್ನತ್ತಿ ಹೊರಟಿದ್ದಾರೆ ತ್ರಿಮೂರ್ತಿಗಳು..!

Published : Jan 02, 2024, 12:47 PM IST

ರಣರಂಗಕ್ಕೆ ಒಂದಾಗಿ  ನುಗ್ಗಲಿದ್ದಾರೆ ದಳಪತಿ-ವಿಜಯೇಂದ್ರ..!
ಕಮಲದಳ ಜಂಟಿ ವ್ಯೂಹಕ್ಕೆ ಎದುರಾಗಿ ನಿಲ್ಲಲಿದ್ದಾರೆ ಬಂಡೆ..!
2024ರಲ್ಲಿ ರಣ ಭಯಂಕರ ಕಾಳಗಕ್ಕೆ ಸಾಕ್ಷಿಯಾಗಲಿದೆ ಕರ್ನಾಟಕ..!
 


2023ಕ್ಕೆ ಗುಡ್ ಬೈ ಹೇಳಿದ್ದಾಯ್ತು, 2024ಕ್ಕೆ ಕಾಲಿಟ್ಟದ್ದೂ ಆಯ್ತು. ಇದು ರಾಜ್ಯದ ಮೂರು ರಾಜಕೀಯ ಪಕ್ಷಗಳ ಮೂವರು ಅಧ್ಯಕ್ಷರ ಪಾಲಿಗೆ ಚಾಲೆಂಜಜ್‌ಗಳ ವರ್ಷ. ಒಬ್ಬೊಬ್ಬರಿಗೆ ಒಂದೊಂದು ಚಾಲೆಂಜ್, ಗುರಿ ಮಾತ್ರ ಒಂದೇ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ 2024ರ ಚಾಲೆಂಜ್ ಗೆದ್ರೆ ಮಾತ್ರ ತ್ರಿಮೂರ್ತಿಗಳ ನಾಯಕತ್ವ ಗಟ್ಟಿ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(D. K. Shivakumar), ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ(B. Y. Vijayendra
) ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ(HD Kumaraswamy). ಕಾಂಗ್ರೆಸ್‌ಗೆ(Congress) ಗೆದ್ದ ನೆಲದಲ್ಲೇ ಮತ್ತೆ ಗೆದ್ದು ಬೀಗೋ ಹಠ. ಬಿಜೆಪಿಗೆ ಸೋತ ನೆಲದಲ್ಲೇ ಗೆಲುವಿನ ಗೋಪುರ ಕಟ್ಟೋ ಛಲ. ಜೆಡಿಎಸ್'ಗೆ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಸವಾಲು. ಈ ಸವಾಲುಗಳನ್ನು ಎದುರಿಸಿ ನಿಂತಿರೋದು ಮೂರು ಪಕ್ಷಗಳ ಮೂವರು ಅಧ್ಯಕ್ಷರು. ಮೂವರ ಮುಂದೆಯೂ 2024ರಲ್ಲಿ ಸಾಲು ಸಾಲು ಸವಾಲುಗಳಿದ್ದಾವೆ. ಮೊದ್ಲಿಗೆ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ. ಒಂದು ತಿಂಗಳ ಹಿಂದಷ್ಟೇ ರಾಜ್ಯ ಬಿಜೆಪಿಯ(BJP) ಸಾರಥ್ಯ ವಹಿಸಿಕೊಂಡಿರೋ ವಿಜಯೇಂದ್ರ ಅವ್ರಿಗೆ 2024ನೇ ವರ್ಷ ತುಂಬಾನೇ ಇಂಪಾರ್ಟೆಂಟ್. ವಿಜಯೇಂದ್ರ ಅವ್ರ ರಾಜಕೀಯ ಭವಿಷ್ಯವನ್ನು ನಿರ್ಧರಿಸೋದೇ 2024. ಅಷ್ಟಕ್ಕೂ 2024 ವಿಜಯೇಂದ್ರ ಅವ್ರಿಗೆ ಯಾಕೆ ಇಂಪಾರ್ಟೆಂಟ್. ಈ ವರ್ಷ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಎದುರಾಗಲಿರೋದು ಅವ್ರ ರಾಜಕೀಯ ಜೀವನದಲ್ಲೇ ಅತೀ ದೊಡ್ಡ ಚಾಲೆಂಜ್. ಕಳೆದ ವರ್ಷ ಶಿಕಾರಿವೀರನ ಮಗ ಮೊದಲ ಬಾರಿ ವಿಧಾನಸಭಾ ಚುನಾವಣೆಗೆ ನಿಂತು ಗೆದ್ದಿದ್ದಾರೆ, ಮೊದಲ ಬಾರಿ ಶಾಸಕರಾದ ಆರೇ ತಿಂಗಳಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ವಿಜಯೇಂದ್ರ ಅವ್ರನ್ನು ಹುಡ್ಕೊಂಡ್ ಬಂದಿದೆ. ಅಷ್ಟರ ಮಟ್ಟಿಗೆ 2023ರ ವಿಜಯೇಂದ್ರ ಪಾಲಿಗೆ ಅದೃಷ್ಟದ ವರ್ಷ ಅನ್ಬಹ್ದು. ಆದ್ರೆ ಅಸಲಿ ಚಾಲೆಂಜ್ ಶುರುವಾಗೋದು ಈ ವರ್ಷ. ವಿಜಯೇಂದ್ರ ಅವ್ರಿಗಾಗಿ ಕಾದು ಕೂತಿರೋ 2024ರ ಚಾಲೆಂಜ್'ನ ಅಸಲಿ ಮುಖದ ಅನಾವರಣ ಮಾಡ್ತೀವಿ ನೋಡಿ.

ಇದನ್ನೂ ವೀಕ್ಷಿಸಿ:  Dowry: ಕಲ್ಯಾಣಮಂಟಪದಲ್ಲೇ ಸರ್ಕಾರಿ ನೌಕರನ ಹೈಡ್ರಾಮಾ! ಅರಿಶಿಣ ಶಾಸ್ತ್ರದ ವೇಳೆ ವರದಕ್ಷಿಣೆಗೆ ಬೇಡಿಕೆಯಿಟ್ಟ ವರ !

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
Read more