2024ರಲ್ಲಿ ಗೆಲ್ಲೋರ್ ಯಾರು..? ಬೀಳೋರ್ ಯಾರು..? ಖಡಕ್ ಚಾಲೆಂಜ್ ಬೆನ್ನತ್ತಿ ಹೊರಟಿದ್ದಾರೆ ತ್ರಿಮೂರ್ತಿಗಳು..!

2024ರಲ್ಲಿ ಗೆಲ್ಲೋರ್ ಯಾರು..? ಬೀಳೋರ್ ಯಾರು..? ಖಡಕ್ ಚಾಲೆಂಜ್ ಬೆನ್ನತ್ತಿ ಹೊರಟಿದ್ದಾರೆ ತ್ರಿಮೂರ್ತಿಗಳು..!

Published : Jan 02, 2024, 12:47 PM IST

ರಣರಂಗಕ್ಕೆ ಒಂದಾಗಿ  ನುಗ್ಗಲಿದ್ದಾರೆ ದಳಪತಿ-ವಿಜಯೇಂದ್ರ..!
ಕಮಲದಳ ಜಂಟಿ ವ್ಯೂಹಕ್ಕೆ ಎದುರಾಗಿ ನಿಲ್ಲಲಿದ್ದಾರೆ ಬಂಡೆ..!
2024ರಲ್ಲಿ ರಣ ಭಯಂಕರ ಕಾಳಗಕ್ಕೆ ಸಾಕ್ಷಿಯಾಗಲಿದೆ ಕರ್ನಾಟಕ..!
 


2023ಕ್ಕೆ ಗುಡ್ ಬೈ ಹೇಳಿದ್ದಾಯ್ತು, 2024ಕ್ಕೆ ಕಾಲಿಟ್ಟದ್ದೂ ಆಯ್ತು. ಇದು ರಾಜ್ಯದ ಮೂರು ರಾಜಕೀಯ ಪಕ್ಷಗಳ ಮೂವರು ಅಧ್ಯಕ್ಷರ ಪಾಲಿಗೆ ಚಾಲೆಂಜಜ್‌ಗಳ ವರ್ಷ. ಒಬ್ಬೊಬ್ಬರಿಗೆ ಒಂದೊಂದು ಚಾಲೆಂಜ್, ಗುರಿ ಮಾತ್ರ ಒಂದೇ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ 2024ರ ಚಾಲೆಂಜ್ ಗೆದ್ರೆ ಮಾತ್ರ ತ್ರಿಮೂರ್ತಿಗಳ ನಾಯಕತ್ವ ಗಟ್ಟಿ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(D. K. Shivakumar), ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ(B. Y. Vijayendra
) ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ(HD Kumaraswamy). ಕಾಂಗ್ರೆಸ್‌ಗೆ(Congress) ಗೆದ್ದ ನೆಲದಲ್ಲೇ ಮತ್ತೆ ಗೆದ್ದು ಬೀಗೋ ಹಠ. ಬಿಜೆಪಿಗೆ ಸೋತ ನೆಲದಲ್ಲೇ ಗೆಲುವಿನ ಗೋಪುರ ಕಟ್ಟೋ ಛಲ. ಜೆಡಿಎಸ್'ಗೆ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಸವಾಲು. ಈ ಸವಾಲುಗಳನ್ನು ಎದುರಿಸಿ ನಿಂತಿರೋದು ಮೂರು ಪಕ್ಷಗಳ ಮೂವರು ಅಧ್ಯಕ್ಷರು. ಮೂವರ ಮುಂದೆಯೂ 2024ರಲ್ಲಿ ಸಾಲು ಸಾಲು ಸವಾಲುಗಳಿದ್ದಾವೆ. ಮೊದ್ಲಿಗೆ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ. ಒಂದು ತಿಂಗಳ ಹಿಂದಷ್ಟೇ ರಾಜ್ಯ ಬಿಜೆಪಿಯ(BJP) ಸಾರಥ್ಯ ವಹಿಸಿಕೊಂಡಿರೋ ವಿಜಯೇಂದ್ರ ಅವ್ರಿಗೆ 2024ನೇ ವರ್ಷ ತುಂಬಾನೇ ಇಂಪಾರ್ಟೆಂಟ್. ವಿಜಯೇಂದ್ರ ಅವ್ರ ರಾಜಕೀಯ ಭವಿಷ್ಯವನ್ನು ನಿರ್ಧರಿಸೋದೇ 2024. ಅಷ್ಟಕ್ಕೂ 2024 ವಿಜಯೇಂದ್ರ ಅವ್ರಿಗೆ ಯಾಕೆ ಇಂಪಾರ್ಟೆಂಟ್. ಈ ವರ್ಷ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಎದುರಾಗಲಿರೋದು ಅವ್ರ ರಾಜಕೀಯ ಜೀವನದಲ್ಲೇ ಅತೀ ದೊಡ್ಡ ಚಾಲೆಂಜ್. ಕಳೆದ ವರ್ಷ ಶಿಕಾರಿವೀರನ ಮಗ ಮೊದಲ ಬಾರಿ ವಿಧಾನಸಭಾ ಚುನಾವಣೆಗೆ ನಿಂತು ಗೆದ್ದಿದ್ದಾರೆ, ಮೊದಲ ಬಾರಿ ಶಾಸಕರಾದ ಆರೇ ತಿಂಗಳಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ವಿಜಯೇಂದ್ರ ಅವ್ರನ್ನು ಹುಡ್ಕೊಂಡ್ ಬಂದಿದೆ. ಅಷ್ಟರ ಮಟ್ಟಿಗೆ 2023ರ ವಿಜಯೇಂದ್ರ ಪಾಲಿಗೆ ಅದೃಷ್ಟದ ವರ್ಷ ಅನ್ಬಹ್ದು. ಆದ್ರೆ ಅಸಲಿ ಚಾಲೆಂಜ್ ಶುರುವಾಗೋದು ಈ ವರ್ಷ. ವಿಜಯೇಂದ್ರ ಅವ್ರಿಗಾಗಿ ಕಾದು ಕೂತಿರೋ 2024ರ ಚಾಲೆಂಜ್'ನ ಅಸಲಿ ಮುಖದ ಅನಾವರಣ ಮಾಡ್ತೀವಿ ನೋಡಿ.

ಇದನ್ನೂ ವೀಕ್ಷಿಸಿ:  Dowry: ಕಲ್ಯಾಣಮಂಟಪದಲ್ಲೇ ಸರ್ಕಾರಿ ನೌಕರನ ಹೈಡ್ರಾಮಾ! ಅರಿಶಿಣ ಶಾಸ್ತ್ರದ ವೇಳೆ ವರದಕ್ಷಿಣೆಗೆ ಬೇಡಿಕೆಯಿಟ್ಟ ವರ !

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more