ಆರು ತಿಂಗಳ ಆಟ..ಯಾರು ಆಟಗಾರ..?ಯಾರು ಸೂತ್ರಧಾರ..? ರಾಜ್ಯದಲ್ಲೂ ನಡೆಯಲಿದ್ಯಾ 'ಮಹಾ'ಚದುರಂಗದಾಟ..?

ಆರು ತಿಂಗಳ ಆಟ..ಯಾರು ಆಟಗಾರ..?ಯಾರು ಸೂತ್ರಧಾರ..? ರಾಜ್ಯದಲ್ಲೂ ನಡೆಯಲಿದ್ಯಾ 'ಮಹಾ'ಚದುರಂಗದಾಟ..?

Published : Aug 15, 2023, 02:42 PM IST

ರಣರಂಗದಲ್ಲಿ ಮತ್ತೆ ಸದ್ದು ಮಾಡ್ತಿದೆ ಆಪರೇಷನ್ ಪಾಲಿಟಿಕ್ಸ್..!
ಕೈ ಸರ್ಕಾರದ ಬುಡಲ್ಲಿ ಕೇಸರಿ ಕಲಿಗಳ "ಟೈಂ ಬಾಂಬ್" ಫಿಕ್ಸ್..!
ಸರ್ಕಾರದ ಆಯಸ್ಸು, ಆಯಸ್ಸು ಆರೇ ತಿಂಗಳು ಎಂದ ಯತ್ನಾಳ್..!

ರಾಜ್ಯ ರಾಜಕಾರಣದಲ್ಲಿ ಒಂದು ಸಂಚಲನ ಸೃಷ್ಠಿಯಾಗಿದೆ. ಇದು ರಾಜಕೀಯ ಪಕ್ಷಗಳ ಪಡಸಾಲೆಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಅಧಿಕಾರದಲ್ಲಿರೋ ಸರ್ಕಾರವೊಂದನ್ನು ಮಕಾಡೆ ಮಲಗಿಸಿ, ಮತ್ತೊಂದು ಸರ್ಕಾರವನ್ನು ಅಧಿಕಾರಕ್ಕೆ ತರಬಲ್ಲ ತೆರೆಯ ಹಿಂದಿನ ಕಾರ್ಯಾಚರಣೆಯೇ ಈ ಆಪರೇಷನ್. ಕಳೆದ 15 ವರ್ಷಗಳಿಂದ ಕರ್ನಾಟಕದ ರಾಜಕೀಯ ರಣಕ್ಷೇತ್ರದಲ್ಲಿ ಆಪರೇಷನ್(Operation) ರಾಜಕಾರಣದ್ದೇ ಸದ್ದು. ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಪಾಲಿಟಿಕ್ಸ್ ಅದ್ಯಾವ ಪರಿ ನಡೆದಿದೆ ಅನ್ನೋದನ್ನೇ ರಾಜ್ಯದ ಜನತೆ ನೋಡಿದ್ದಾರೆ. ತುಂಬಾ ದೂರ ಹೋಗೋದೇನೂ ಬೇಡ. 2019ರಲ್ಲಿ ಬಿಜೆಪಿ(BJP) ಅಧಿಕಾರದ ಗದ್ದುಗೆ ಹಿಡಿದದ್ದೇ ಆಪರೇಷನ್ ಅಸ್ತ್ರದ ಮೂಲಕ. ಅವತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಅಧಿಕಾರಕ್ಕೇರಿತ್ತು. ಈಗ ರಾಜ್ಯದಲ್ಲಿರೋದು ಕಾಂಗ್ರೆಸ್ (Congress) ಸರ್ಕಾರ. ಪ್ರಚಂಡ ಬಹುಮತದ ಕಾಂಗ್ರೆಸ್ ಸರ್ಕಾರ. 135+3, ಅಂದ್ರೆ ಕೈ ಸರ್ಕಾರಕ್ಕೆ 138 ಶಾಸಕರ ಬಲವಿದೆ. ಇಂಥಾ ಸರ್ಕಾರಕ್ಕೆ ಆಪರೇಷನ್ ಭಯ ಶುರುವಾಗಿದ್ಯಾ..? ಇಂಥದ್ದೊಂದು ಪ್ರಶ್ನೆ ಮೂಡಲು ಕಾರಣ, ಕೇಸರಿ ಕಲಿ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಸಿಡಿಸಿರೋ ಬಾಂಬ್.

ಇದನ್ನೂ ವೀಕ್ಷಿಸಿ: ಸ್ವಾತಂತ್ರೋತ್ಸವಕ್ಕೆ ರಿಕ್ಕಿ ಕೇಜ್‌ ಉಡುಗೊರೆ: ಬ್ರಿಟಿಷ್‌ ಆರ್ಕೆಸ್ಟ್ರಾದಲ್ಲಿ ರಾಷ್ಟ್ರಗೀತೆಗೆ ವಿಶೇಷ ಟ್ಯೂನ್‌ !

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more