ಬಬಲಾದಿ ಮುತ್ಯಾರ ಬೆಂಕಿ ಭವಿಷ್ಯಕ್ಕೆ ತಬ್ಬಿಬ್ಬಾದವರು ಯಾರು? ಭವಿಷ್ಯ ನುಡಿದ ಮೂರೇ ದಿನದಲ್ಲಿ ರಾಜಕಾರಣದಲ್ಲಿ ಗಢಗಢ!

ಬಬಲಾದಿ ಮುತ್ಯಾರ ಬೆಂಕಿ ಭವಿಷ್ಯಕ್ಕೆ ತಬ್ಬಿಬ್ಬಾದವರು ಯಾರು? ಭವಿಷ್ಯ ನುಡಿದ ಮೂರೇ ದಿನದಲ್ಲಿ ರಾಜಕಾರಣದಲ್ಲಿ ಗಢಗಢ!

Published : Mar 25, 2024, 09:55 AM IST

‘ಉತ್ತಮ ಅರ್ಹ ವ್ಯಕ್ತಿಯ ಮರ್ದನ’ ಭಯಾನಕ ಬೆಂಕಿ ಭವಿಷ್ಯ
ಬೆಂಕಿ ಭವಿಷ್ಯ ನುಡಿದ ಮೂರೇ ದಿನದಲ್ಲಿ ಅಲ್ಲೋಲ ಕಲ್ಲೋಲ..!
ಅರ್ಹ ವ್ಯಕ್ತಿಗಳಿಗೆ ಸಿಗಲಿಲ್ಲ ಟಿಕೆಟ್‌, ಬಂಡಾಯವೆದ್ದ ಉತ್ತಮರು..!

ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು ಮಹಾಭಾರತ ಅಖಾಡ ರಂಗೇರಿದೆ. ಸೆಂಟ್ರಲ್‌ ದಂಗಲ್‌ ನಲ್ಲಿ ಯಾರು ಗೆಲ್ತಾರೆ? ಯಾರಿಗೆ ಕಾದಿದೆ ಸೋಲು? ಎನ್ನುವ ಲೆಕ್ಕಾಚಾರಗಳೂ ಜೋರಾಗಿವೆ. ಆದ್ರೆ ಈ ನಡುವೆ ಬೆಂಕಿ ಬಬಲಾದಿ ಮಠದಲ್ಲಿ(Babaladi Math) ನುಡಿದ ಅದೊಂದು ಕೆಂಡದಂತ ರಾಜಕೀಯ ಭವಿಷ್ಯ(Predictions) ಚುನಾವಣಾ ಅಖಾಡದಲ್ಲಿಯೇ ಬಿರುಗಾಳಿ ಎಬ್ಬಿಸಿದೆ. ಲೋಕಸಭಾ ಚುನಾವಣೆ (Loksabha ELEction)ಘೋಷಣೆಯಾಗಿದೆ. ಎಲೆಕ್ಷನ್‌ ಡೇಟ್‌ ಸಹ ಅನೌನ್ಸ್‌ ಆಗಿದೆ. ಈ ನಡುವೆ ಜನರ ಒಲವು ಯಾರ ಕಡೆಗೆ ಎನ್ನುವ ಲೆಕ್ಕಾಚಾರಗಳು ಜೋರಾಗಿವೆ. ಜನರ ಒಲವು ರಾಷ್ಟ್ರದ ಹಿತವನ್ನ ಮುಂದಿಟ್ಟು ಮತಬೇಟೆಗೆ ಇಳಿದಿರುವ ಮೋದಿ(Narendra Modi) ಕಡೆಗೋ, ಗ್ಯಾರಂಟಿ ಮುಂದಿಟ್ಟು ಜನರನ್ನ ಸೆಳೆಯುತ್ತಿರುವ ಕಾಂಗ್ರೆಸ್‌(Congress) ಕಡೆಗೋ ಎನ್ನುವ ಕುತೂಹಲ ಹೆಚ್ಚಾಗಿದೆ. ಈ ಎಲ್ಲ ಕುತೂಹಲಗಳ ನಡುವೆ ದೇಶದಲ್ಲೀಗ ಎಲ್ಲೆಡೆ ಮೋದಿ ಹವಾ ಜೋರಾಗಿದೆ. ಹೀಗಾಗಿ, ಮೋದಿ ಕಡೆಗೆ ಜನರ ಒಲವಿದೆ ಎಂದು ಬಹುತೇಕರು ಮಾತನಾಡಿಕೊಳ್ತಿದ್ದಾರೆ. ಆದ್ರೆ, ಈ ಮಾತುಗಳ ನಡುವೆಯೇ ಕಾಲಜ್ಞಾನಕ್ಕೆ ಪ್ರಸಿದ್ಧಿ ಪಡೆದಿರುವ ಬೆಂಕಿ ಮಠ ಎಂಥಲೇ ಕರೆಯಿಸಿಕೊಳ್ಳುವ ಬಬಲಾದಿ ಮಠದಲ್ಲಿ ನುಡಿದ ಭವಿಷ್ಯ ರಾಜಕಾರಣಿಗಳನ್ನ ತಬ್ಬಿಬ್ಬು ಆಗೋ ಹಾಗೇ ಮಾಡಿದೆ. ಪ್ರತಿ ವರ್ಷ ಶಿವರಾತ್ರಿಯ 5ನೇ ದಿನಕ್ಕೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬೆಂಕಿ ಬಬಲಾದಿ ಮಠದಲ್ಲಿ ಕಾಲಜ್ಞಾನವನ್ನ ಓದಲಾಗುತ್ತದೆ. ಕಳೆದ 300 ವರ್ಷಗಳ ಹಿಂದೆ ಅವತಾರಿ ಪುರುಷ ಚಕ್ರವರ್ತಿ ಸದಾಶಿವ ಅಜ್ಜ ನುಡಿದ ಕಾಲಜ್ಞಾನವನ್ನ ಚಿಕ್ಕಯ್ಯಪ್ಪನವರು ತಾಮ್ರದ ಪುಸ್ತಕದಲ್ಲಿ ದಾಖಲಿಸಿಟ್ಟಿದ್ದಾರೆ. ಪ್ರತಿ ವರ್ಷ ಇಲ್ಲಿ ನಡೆಯುವ ಶಿವರಾತ್ರಿಯ ಜಾತ್ರೆಯ 5ನೇ ದಿನ ತಾಮ್ರದಲ್ಲಿ ದಾಖಲಿಸಿಟ್ಟಿರುವ ಕಾಲಜ್ಞಾನವನ್ನ ಬಬಲಾದಿ ಪೀಠದ ಈಗಿನ ಸಿದ್ದು ಮುತ್ಯಾ ಹೊಳಿಮಠ ಓದಿ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  Today Horoscope: ಕಾಮದಹನದ ಹಿಂದಿನ ಉದ್ದೇಶವೇನು ? ಹೋಳಿ ಹಬ್ಬದ ಆಚರಣೆ ಮಾಡುವುದು ಏಕೆ?

24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
Read more