Panchanga: ಅಮೃತ ಸಿದ್ದಿ ಯೋಗದಲ್ಲಿ ಸೂರ್ಯನ ಉಪಾಸನೆಯ ಮಹತ್ವವೇನು ಗೊತ್ತಾ?

Nov 20, 2022, 10:19 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಭಾನುವಾರ, ಏಕಾದಶಿ ತಿಥಿ, ಹಸ್ತ ನಕ್ಷತ್ರ. ಈ ದಿವಸ ಭಾನುವಾರ ಹಸ್ತ ನಕ್ಷತ್ರ ಸೇರ್ಪಡೆಯಾಗೊದನ್ನ ಅಮೃತ ಸಿದ್ದಿ ಯೋಗ ಎಂದು ಕರೆಯಲಾಗುತ್ತದೆ. ಇದು ಬಹಳ ವಿಶೇಷವಾದ ದಿವಸ. ಆದಿತ್ಯವಾರ ಹಸ್ತ ನಕ್ಷತ್ರ ಬಂದಾಗ ಸೂರ್ಯನ ಉಪಾಸನೆಯನ್ನು ಮಾಡಬೇಕು. ಸೂರ್ಯನಿಗೆ ಕೆಂಪು ಹೂ (ದಾಸವಾಳ) ಗಳನ್ನು ಸಲ್ಲಿಸಿ ಪ್ರಾರ್ಥಿಸಿದರೆ, ಅದು ಬಹುಬೇಗ ಸಿದ್ದಿಸುತ್ತದೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಹಾಗೂ ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ಅನ್ನೋ ಬಗ್ಗೆ ಆಸಕ್ತಿ ಇದ್ದರೆ ಇಂದಿನ ಪಂಚಾಂಗ ಫಲಗಳು ಹೀಗಿವೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.