ಪಂಚಾಂಗ ಫಲ: ಮಂಗಳವಾರ ಯಾವ ಕೆಲಸಕ್ಕೂ ಅಮಂಗಳವಲ್ಲ..!

May 19, 2020, 9:15 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ರೇವತಿ ನಕ್ಷತ್ರ. ಇಂದು ಮಂಗಳವಾರ. ದೇವಿ ದುರ್ಗಾಮಾತೆಯ ವಾರವಾಗಿದೆ. ಮಂಗಳವಾರ ಯಾವ ಕೆಲಸಕ್ಕೂ ಅಮಂಗಳವಲ್ಲ. ತಾಯಿ ದುರ್ಗಾಮಾತೆಯನ್ನು ನೆನೆದು ಕೆಲಸ ಮಾಡಿದರೆ ಶುಭವಾಗುತ್ತದೆ.