ಇಂದು ಹನುಮ ಜಯಂತಿ; ಮಹತ್ವ, ಆಚರಣೆ ಬಗ್ಗೆ ಇಲ್ಲಿದೆ ಪಂಚಾಂಗ ಫಲ

May 17, 2020, 8:58 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಪೂರ್ವಾಭಾದ್ರ ನಕ್ಷತ್ರ. ಇಂದು ಹನುಮ ಜಯಂತಿ. ಹನುಮಂತನನ್ನು ಶ್ರದ್ಧಾ- ಭಕ್ತಿಯಿಂದ ಪ್ರಾರ್ಥಸಿದರೆ, ಧ್ಯಾನ ಮಾಡಿದರೆ ಆತ ಬಹುಬೇಗ ಒಲಿಯುತ್ತಾನೆ ಎಂದು ಶಾಸ್ತ್ರ ಹೇಳುತ್ತದೆ. ಲಾಕ್‌ಡೌನ್ ಇಲ್ಲದಿದ್ದರೆ ಎಲ್ಲಾ ಊರುಗಳಲ್ಲಿಯೂ ಬಹಳ ವಿಜೃಂಭಣೆಯಿಂದ ಹನುಮ ಜಯಂತಿಯನ್ನು ಆಚರಿಸಲಾಗುತ್ತಿತ್ತು. ಈ ಬಾರಿ ಎಲ್ಲರೂ ಮನೆಯಲ್ಲಿಯೇ ಆಚರಿಸುವಂತಾಗಿದೆ. 

"