Panchang: ಆರೋಗ್ಯ, ಚೈತನ್ಯಕ್ಕಾಗಿ ಸೂರ್ಯ ಪ್ರಾರ್ಥನೆ ಮಾಡಿ

Jun 11, 2023, 8:41 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಭಾನುವಾರ, ಅಷ್ಟಮಿ ತಿಥಿ, ಪೂರ್ವಾಭಾದ್ರ ನಕ್ಷತ್ರ .  

 ಇಂದು ಆದಿತ್ಯ ಪ್ರಾರ್ಥನೆ ಮಾಡಬೇಕು. ಆತ ಬೆಳಕಿನ ಅಂಶ. ಸೂರ್ಯನ ಉದಯವಿಲ್ಲದಿದ್ದರೆ ಭೂಮಿಯಲ್ಲಿ ಬದುಕು ಸಾಧ್ಯವಿಲ್ಲ. ಸೂರ್ಯನಿಂದಲೇ ಆರೋಗ್ಯ, ಆಹಾರ, ಚೈತನ್ಯ ಆಗಿರುವಾಗ ಆತನನ್ನು ಕಣ್ಣಿಗೆ ಕಾಣುವ ಏಕೈಕ ದೇವರು ಎಂದು ಭಾವಿಸುವುದರಲ್ಲಿ ಯಾವುದೇ ಅನುಮಾನ ಬೇಡ  ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ.