Panchang: ಸುಬ್ರಹ್ಮಣ್ಯನ ಪ್ರಾರ್ಥನೆಯಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚುವ ನೆನಪಿನ ಶಕ್ತಿ

Feb 25, 2023, 9:36 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಶನಿವಾರ, ಷಷ್ಠಿ ತಿಥಿ, ಅಶ್ವಿನಿ ನಕ್ಷತ್ರ.  

ಷಷ್ಠಿ ತಿಥಿಯಲ್ಲಿ ಸುಬ್ರಹ್ಮಣ್ಯನ ಆರಾಧನೆ ಮಾಡಬೇಕು. ವಿದ್ಯಾರ್ಥಿಗಳು ಸುಬ್ರಹ್ಮಣ್ಯನಿಗೆ ಜೇನಿನ ಅಭಿಷೇಕ ಮಾಡಿಸುವುದರಿಂದ ಅವರ ನೆನಪಿನ ಶಕ್ತಿ ಹೆಚ್ಚುತ್ತದೆ. ಸುಬ್ರಹ್ಮಣ್ಯನು ವಿದ್ಯಾರ್ಥಿಗಳಿಗೆ ಬ್ರಹ್ಮಶಕ್ತಿ ಕೊಡುತ್ತಾನೆ  ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇದಲ್ಲದೆ ಇಂದು ಶನಿವಾರವಾದ್ದರಿಂದ ಶನಿಯ ಪ್ರಾರ್ಥನೆ ಮಾಡಬೇಕು. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ, ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ ತಿಳಿಸಿದ್ದಾರೆ. 

ಈ ದೇವಾಲಯಗಳ ಆ್ಯಪ್ ಮೂಲಕ ನೀವು ವರ್ಚುಯಲ್ ದರ್ಶನ ಪಡೀಬಹುದು!