Panchanga: ಇಂದು ಕೃಷ್ಣ ಸ್ಮರಣೆ, ಗುರು ಸ್ಮರಣೆಯಿಂದ ಫಲ

Aug 18, 2022, 8:26 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಗುರುವಾರ, ಸಪ್ತಮಿ ತಿಥಿ, ಭರಣಿ ನಕ್ಷತ್ರ. ಕೃಷ್ಣ ಹುಟ್ಟಿದ್ದು ಮಧ್ಯರಾತ್ರಿಯಾದ್ದರಿಂದ ಇಂದು ರಾತ್ರಿ ವೇಳೆಗೆ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಅಷ್ಟಮಿ ತಿಥಿ ಮತ್ತು ರೋಹಿಣಿ ನಕ್ಷತ್ರದ ಕಾರಣದಿಂದ ಇಂದು, ನಾಳೆ ಮತ್ತು ಶನಿವಾರ ಕೃಷ್ಣಾಷ್ಟಮಿ ಆಚರಿಸಲಾಗುತ್ತದೆ. ಗುರುವಾರವಾದ್ಧರಿಂದ ಗುರು ಸ್ಮರಣೆ, ಗುರು ರಾಯರ ಸ್ಮರಣೆ ಮಾಡಬೇಕು.

ಸರ್ವರಿಗೂ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು

ಇದಲ್ಲದೇ ಕೃಷ್ಣ ಜನ್ಮಾಷ್ಟಮಿಯ ಮಹತ್ವ, ದ್ವಾದಶ ರಾಶಿಗಳ ಫಲಾಫಲವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ.