Panchanga: ಗುರುವಾರ, ಗುರು ಸಾನಿಧ್ಯದಲ್ಲಿ ಸೇವೆ ಮಾಡುವುದರಿಂದ ವಿಶೇಷ ಫಲ

May 26, 2022, 8:41 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ರೇವತಿ ನಕ್ಷತ್ರ, ಇಂದು ಗುರುವಾರ. ಗುರುವಾರ ನಾವು ನಂಬುವ ಗುರುಗಳನ್ನು ಪೂಜಿಸಬೇಕು, ಆರಾಧಿಸಬೇಕು. ಗುರು ಎಂದರೆ ತ್ರಿಮೂರ್ತಿ ಸ್ವರೂಪರು. ಅವರು ಕಾರುಣ್ಯದಿಂದ ಏನು ಬೇಕಾದರೂ ಆಗಬಹುದು. ಗುರು ಸಾನಿಧ್ಯದಲ್ಲಿ ಸೇವೆ ಮಾಡುವುದರಿಂದ ದುರಿತಗಳೆಲ್ಲಾ ದೂರವಾಗುವವು.