Panchanga: ಕೃಷ್ಣ ಪಕ್ಷದ ಪ್ರತಿಪತ್‌, ಈಶ್ವರನಿಗೆ ಬಿಲ್ವಪತ್ರೆ ಅರ್ಪಿಸಿದರೆ ಶಿವಾನುಗ್ರಹ ಪ್ರಾಪ್ತಿ

Dec 20, 2021, 8:36 AM IST

ಓದುಗರೆಲ್ಲರಿಗೂ ಶುಭ ಬೆಳಗು. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಪ್ರತಿಪತ್‌ ತಿಥಿ, ಆರಿದ್ರಾ ನಕ್ಷತ್ರ, ಇಂದು ಸೋಮವಾರ. ಕೃಷ್ಣ ಪಕ್ಷದ ಪ್ರತಿಪತ್‌ನ್ನು ಆರಿದ್ರಾ ದರ್ಶನ ಎನ್ನುತ್ತಾರೆ. ಈಶ್ವರನ ಕೃಪೆಗೆ ಪಾತ್ರರಾಗಲು ಪುಣ್ಯತಮ ದಿವಸ ಇದು. ಶಿವನ ಸನ್ನಿಧಾನಕ್ಕೆ ಹೋಗಿ ಬಿಲ್ವಪತ್ರೆಯನ್ನು ಸಮರ್ಪಿಸಿದರೆ ಶಿವ ಸಂತುಷ್ಟನಾಗುತ್ತಾನೆ.